More

    ಆಯುರ್ವೆದ ಸೇವಾ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ

    ಹುಬ್ಬಳ್ಳಿ: ಹುಬ್ಬಳ್ಳಿ ಆಯುರ್ವೆದ ಸೇವಾ ಸಮಿತಿ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ನಡೆದ ಸರ್ವ ಸಾಧಾರಣ ಸಾಮಾನ್ಯ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

    ನೂತನ ಅಧ್ಯಕ್ಷರಾಗಿ ಪದ್ಮಶ್ರೀ ಡಾ. ಎಂ.ಎಂ. ಜೋಶಿ, ಉಪಾಧ್ಯಕ್ಷರಾಗಿ ಎಂ.ಬಿ. ದೇಸಾಯಿ, ಹಾಗೂ ಡಾ. ಪಿ.ಕೆ. ಗಂಡಮಾಲಿ, ಚೇರ್ಮನ್ ಆಗಿ ಗೋವಿಂದ ಜೋಶಿ, ಉಪ ಸಭಾಪತಿಯಾಗಿ ಡಾ. ಕೃಷ್ಣಪ್ರಸಾದ, ಕಾರ್ಯದರ್ಶಿಯಾಗಿ ಸಂಜೀವ ಜೋಶಿ, ಸಹ ಕಾರ್ಯದರ್ಶಿಯಾಗಿ ಡಾ. ವಿ.ಆರ್. ಪಾಟೀಲ, ಖಜಾಂಚಿಯಾಗಿ ಎಸ್.ಆರ್. ಮಾಮಲೇದೇಶಪಾಂಡೆ, ಆಡಳಿತ ಮಂಡಳಿ ಸದಸ್ಯರಾಗಿ ಡಾ. ಜಿ.ಎಚ್. ನರೇಗಲ್, ಡಾ. ಬಿ.ಬಿ. ಪಾಟೀಲ, ಡಾ. ಪ್ರದೀಪ ದೇಸಾಯಿ, ಡಾ. ಎಸ್.ಎಂ. ಕರ್ನಲಕರ, ಡಾ. ಶ್ರೀನಿವಾಸ ಎಂ. ಜೋಶಿ, ಡಾ. ಮಹೇಶ ನಾಲವಾಡ, ಡಾ. ಮಹಾವೀರ ಹಾವೇರಿ, ಆಮಂತ್ರಿತ ಸದಸ್ಯರಾಗಿ ಡಾ. ಆರ್.ಎನ್. ಜೋಶಿ, ಡಾ. ಎ.ಎಸ್. ಗುರುಪ್ರಸಾದ, ರಾಧಾಬಾಯಿ ಚಿಕ್ಕೋಡಿಕರ, ಡಾ. ಬಿ.ಆರ್. ಪಾಟೀಲ ಹಾಗೂ ಡಾ. ಆನಂದ ಹುಲಮನಿ ಆಯ್ಕೆಗೊಂಡಿದ್ದಾರೆ.

    ನರ್ಸಿಗ್ ಸ್ಕೂಲಿಗೆ ಉಪಸಮಿತಿ ಪದಾಧಿಕಾರಿಗಳಾಗಿ ಡಾ. ಪ್ರದೀಪ ದೇಸಾಯಿ ಸಭಾಪತಿಯಾಗಿ, ಡಾ. ಎ.ಎಸ್. ಗುರುಪ್ರಸಾದ ಕಾರ್ಯದರ್ಶಿಯಾಗಿ, ಸದಸ್ಯರಾಗಿ ಡಾ. ಮಹೇಶ ನಾಲವಾಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಆಯುರ್ವೆದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಶಾಂತ್. ಎ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts