More

    ಆಟೋ ಚಾಲಕರ ಸಂಘ ಬಲಿಷ್ಠಗೊಳಿಸುವೆ

    ಶೃಂಗೇರಿ: ಆಟೋ ಚಾಲಕರ ಸಂಘಟನೆ ಇನ್ನಷ್ಟು ಬಲಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ ಎಂದು ಸಂಘದ ನೂತನ ಅಧ್ಯಕ್ಷ ಕಲ್ಕಟ್ಟೆ ರವೀಂದ್ರ ಹೇಳಿದರು.

    ಕನ್ನಡ ಭವನದಲ್ಲಿ ಸೋಮವಾರ ಆಟೋ ಚಾಲಕರ ಸಂಘದ ಸಭೆಯಲ್ಲಿ ಮಾತನಾಡಿ, ಆಟೋ ಚಾಲಕರು ದಿನವಿಡೀ ಸಾರ್ವಜನಿಕರಿಗೆ ಸೇವೆ ನೀಡುತ್ತಾರೆ. ಸ್ಪರ್ಧಾತ್ಮಕ ಜೀವನದಲ್ಲಿ ಆಟೋ ಚಾಲಕರು ಬದುಕು ಸಾಗಿಸಲು ಹರಸಾಹಸ ಪಡಬೇಕಿದೆ. ಆಟೋ ಚಾಲಕರಿಗೆ ಸರ್ಕಾರದಿಂದ ಮತ್ತಷ್ಟು ಸೌಲಭ್ಯ ಪಡೆಯಲು ಪ್ರಯತ್ನ ನಡೆಸಲಾಗುತ್ತದೆ ಎಂದರು.
    ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಸಂಘದ ಸದಸ್ಯರ ಆರೋಗ್ಯ ರಕ್ಷಣೆಗಾಗಿ ಸರ್ಕಾರದ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
    ಸಭೆಯಲ್ಲಿ ಅಧ್ಯಕ್ಷರಾಗಿ ಕಲ್ಕಟ್ಟೆ ರವೀಂದ್ರ, ಅರುಣ್, ಜಹೂರ್ (ಉಪಾಧ್ಯಕ್ಷರು), ಕುತುಬ್ದಿನ್ (ಕಾರ್ಯದರ್ಶಿ), ಪಾಪು (ಸಹ ಕಾರ್ಯದರ್ಶಿ), ವಾಸು ಖಜಾಂಚಿಯಾಗಿ ಆಯ್ಕೆಯಾದರು.
    ಸಭೆಯಲ್ಲಿ ಶ್ರೀಕರ, ಅಜ್ಜು, ಗೋಪಾಲ್, ಜಗ್ಗಣ್ಣ, ಸತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts