More

    video/ ದಿಗ್ವಿಜಯ ನ್ಯೂಸ್ ವಾಹನ ಪುಡಿಪುಡಿ ಗೊಳಿಸಿ, ವರದಿಗಾರರ ಮೇಲೆ ಹಲ್ಲೆ!

    ಬೆಂಗಳೂರು: ಕೆಜಿ ಹಳ್ಳಿ, ಡಿಜೆ ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಿನ್ನೆ ನಡೆದ ದಾಂಧಲೆಯಲ್ಲಿ ಗಲಭೆಕೋರರು ಪೊಲೀಸರ ಜತೆಗೆ ಮಾಧ್ಯಮದವರನ್ನು ಟಾರ್ಗೆಟ್​ ಮಾಡಿ ಕೈಗೆ ಸಿಕ್ಕವರ ಮೇಲೆಲ್ಲ ಹಲ್ಲೆ ನಡೆಸಿದ್ದಾರೆ.

    ಪೊಲೀಸ್​ ಠಾಣೆಗೆ ಸಾವಿರಾರು ಮಂದಿ ನುಗ್ಗಿ ಹೇಗೆ ದಾಂಧಲೆ ನಡೆಸಿದರೋ ಹಾಗೇ ಕಣ್ಣಿಗೆ ಬಿದ್ದ ಹಲವು ಮಾಧ್ಯಮ ಪ್ರತಿನಿಧಿಗಳ ಮೇಲೂ ಪುಂಡರು ಹಲ್ಲೆ ನಡೆಸಿದ್ದಾರೆ. ಪೊಲೀಸ್​ ವಾಹನಗಳ ಜತೆಗೆ ಮಾಧ್ಯಮ ವಾಹನಗಳನ್ನೂ ಜಖಂಗೊಳಿಸಿದ್ದಾರೆ. ಡಿಜೆ ಹಳ್ಳಿಯಲ್ಲಿ ನಡೆಯುತ್ತಿದ್ದ ಗಲಭೆಯ ವರದಿ ಮಾಡಲು ಹೋಗಿದ್ದ ದಿಗ್ವಿಜಯ ನ್ಯೂಸ್​ 24*7 ವಾಹಿನಿಯ ವಾಹನವನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದು, ಚಾಲಕ ಶಿವಕುಮಾರ್​ಗೆ ಗಾಯವಾಗಿದೆ.

    ಇದನ್ನೂ ಓದಿರಿ ಗಲಭೆಕೋರರಿಂದಲೇ ನಷ್ಟ ವಸೂಲಿ; ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ

    ಡಿಜೆ ಹಳ್ಳಿ ಠಾಣೆ ಬಳಿ ಗಲಭೆ ನಡೆಯುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಕಚೇರಿ ವಾಹನದಲ್ಲಿ ವರದಿಗಾರ ಸಂತೋಷ್​ ಪಾಟೇಲ್​, ಕ್ಯಾಮರಾಮ್ಯಾನ್​ ಸ್ಥಳಕ್ಕೆ ತೆರಳಿದ್ದರು. ವಾಹನವನ್ನು ಠಾಣೆಯಿಂದ 500 ಮೀಟರ್​ ದೂರದಲ್ಲಿ ನಿಲ್ಲಿಸಿ ವರದಿಗಾರ ಹಾಗೂ ಕ್ಯಾಮರಾಮ್ಯಾನ್​ ವರದಿ ಮಾಡಲು ಠಾಣೆ ಬಳಿ ತೆರಳಿದ್ದರು. ಆ ಸಂದರ್ಭದಲ್ಲಿ ದಿಗ್ವಿಜಯ ಸುದ್ದಿ ವಾಹಿನಿಯ ವಾಹನದ ಗಾಜನ್ನು ಪುಡಿ ಮಾಡಿದ ಕಿಡಿಗೇಡಿಗಳು, ವಾಹನಕ್ಕೆ ದೊಣ್ಣೆಯಿಂದ ಹೊಡೆದು ಹಾನಿ ಮಾಡಿದ್ದಾರೆ. ವಾಹನದೊಳಗಿದ್ದ ಚಾಲಕ ಶಿವಕುಮಾರ್​ಗೆ ಕಾರಿನ ಗಾಜುಗಳು ತಾಗಿ ಕಣ್ಣು ಸೇರಿ ದೇಹದ ಇತರ ಭಾಗಗಳಿಗೆ ಗಾಯವಾಗಿದೆ. ಕೂಡಲೇ ಅಲ್ಲಿಂದ ತೆರಳಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ದಾಂಧಲೆ ನಿಯಂತ್ರಣಕ್ಕೆ ಬಂದ ಬಳಿಕ ಶಿವಕುಮಾರ್​ ಅವರನ್ನು ಮಿಂಟೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts