ಅಥಣಿ ಕ್ಷೇತ್ರದ ಜನರ ಅಭಿಮಾನಕ್ಕೆ ಚಿರಋಣಿ

blank

ಅಥಣಿ: ಬೆಂಗಳೂರು ಮಹಾನಗರ ಚುನಾವಣೆ ಎದುರಿಸಿ ಅಥಣಿಗೆ ಆಗಮಿಸಿದ ನನ್ನನ್ನು ಮತದಾರರು ಎರಡು ಬಾರಿ ಶಾಸಕಿಯಾಗಿನ್ನಾಗಿ ಮಾಡಿದರು. ಅಧಿಕಾರದಲ್ಲಿದ್ದಾಗ ವಿವಿಧ ಅಭಿವೃದ್ಧಿ ಕಾಮಗಾರಿ ಮತ್ತು ಸಾಮಾಜಿಕ ಸೇವೆ ಸಲ್ಲಿಸಿ ಮತದಾರರ ಋಣ ತೀರಿಸುವ ಪ್ರಯತ್ನ ಮಾಡಿದ್ದೇನೆ.

ಜನರ ಅಭಿಮಾನ ಮತ್ತು ಪ್ರೀತಿಗೆ ಚಿರಋಣಿ ಎಂದು ಮಾಜಿ ಸಚಿವೆ, ಉಡುತಡಿ ಅಕ್ಕಮಹಾದೇವಿ ಸಮಿತಿ ಅಧ್ಯಕ್ಷೆ ಲೀಲಾದೇವಿ ಪ್ರಸಾದ ಹೇಳಿದರು.
ಪಟ್ಟಣದ ಗುಜರಾತಿ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾರ್ಥಕ ಬದುಕಿನ ನುಡಿ ಸಂಭ್ರಮ ಕಾರ್ಯಕ್ರಮದಲ್ಲಿ ಅಭಿಮಾನದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವೀರಶೈವ ಮಹಿಳಾ ಬಳಗ, ಕದಳಿ ಮತ್ತು ಮುಕ್ತಾಯಿ ಮಹಿಳಾ ಬಳಗದವರಿಂದ ಸಿರಿಧಾನ್ಯಗಳಿಂದ ಲೀಲಾದೇವಿ ಪ್ರಸಾದವರ ತುಲಾಭಾರ ಸೇವೆ ಜರುಗಿತು.

ಸಾನ್ನಿಧ್ಯ ವಹಿಸಿದ್ದ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಹಿರಿಯ ಮುಖಂಡ ಗಜಾನನ ಮಂಗಸೂಳಿ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ತೆಲಸಂಗದ ವೀರೇಶ್ವರ ದೇವರು, ಪ್ರಕಾಶ ಮಹಾಜನ, ಅರುಣ ಯಲಗುದ್ರಿ, ರಮೇಶಗೌಡ ಪಾಟೀಲ, ಸಿದ್ದಪ್ಪ ಮುದಕಣ್ಣವರ, ಶಂಭುಲಿಂಗ ಮಮದಾಪೂರ, ಅಪ್ಪಾಸಾಹೇಬ ಅಲಿಬಾದಿ, ಸಿದ್ದಣ ಉತ್ನಾಳ, ರಾವಸಾಬ ಜಕನೂರ, ಸಂಜಯ ತೆಲಸಂಗ, ಈರಣ್ಣಗೌಡ ಪಾಟೀಲ, ಎಂ.ಡಿ.ತೊದಲಬಾಗಿ, ಶಿವಕುಮಾರ ತೆಲಸಂಗ, ಭರತ ಸೋಮಯ್ಯ, ಗಿರೀಶ ದಿವಾನಮಳ, ಮುತ್ತಣ್ಣ ಸಂತಿ, ವಿಜಯ ನೇಮಗೌಡ, ನಿತ್ಯಾನಂದ ಚರಂತಿಮಠ ಇತರರಿದ್ದರು. ವಿದ್ಯಾ ಬುರ್ಲಿ ನಿರೂಪಿಸಿದರು. ಮುರುಘೇಶ ಬಾನಿ ಸ್ವಾಗತಿಸಿದರು.

Share This Article

ಸಂಬಳ ಸಾಲ್ತಿಲ್ಲ! ಸಾಲ ತೀರಿಸಲು ಚಿನ್ನದ ಸಾಲ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ | Gold Loan

Gold Loan: ಸಂಸ್ಥೆ ಕೊಡುತ್ತಿರುವ ಸಂಬಳ ನಮಗೆ ಮಾತ್ರವಲ್ಲ, ನಮ್ಮ ಸಾಲ ತೀರಿಸಲು ಸಹ ಸಾಲುತ್ತಿಲ್ಲ…

ಭಾರತದಲ್ಲಿ ಅನಾರೋಗ್ಯಕರ ಆಹಾರ ಸೇವನೆಯೇ ಹೆಚ್ಚು: ಶೇ. 56 ರೋಗಗಳಿಗೆ ಕೆಟ್ಟ ಆಹಾರ ಪದ್ಧತಿ ಕಾರಣವೆಂದ ಏಮ್ಸ್! Indians Food

Indians Food : ಭಾರತದಲ್ಲಿ ಬೊಜ್ಜು ಅಥವಾ ಸ್ಥೂಲಕಾಯತೆ ಇಂದು ಸಾಮಾನ್ಯ ಹಾಗೂ ಸಂಕೀರ್ಣ ಕಾಯಿಲೆಗಳಲ್ಲಿ…

ನೀವು ಚಿಕನ್ ಅಥವಾ ಮಟನ್​ ಲಿವರ್​ ತಿಂತಿರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರಲೇಬೇಕು… Liver

Liver : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಆದರೆ, ಒಂದು…