More

    ವೀಕೆಂಡ್​ ದುರಂತ: ರೈಲು ಡಿಕ್ಕಿಗೆ ಬಸ್ಸಿನಲ್ಲಿದ್ದ 18 ಮಂದಿಯ ದುರ್ಮರಣ, 29ಕ್ಕೂ ಹೆಚ್ಚು ಗಂಭೀರ

    ಬ್ಯಾಂಕಾಕ್​: ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ 18 ಮಂದಿ ದಾರುಣವಾಗಿ ಸಾವಿಗೀಡಾಗಿ, 29ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಬೆಳಗ್ಗೆ ಥಾಯ್ಲೆಂಡ್​ನಲ್ಲಿ ನಡೆದಿದೆ.

    ಪೂರ್ವ ಬ್ಯಾಂಕಾಕ್​ನಿಂದ ಸುಮಾರು 50 ಮೈಲಿ ದೂರದಲ್ಲಿರುವ ಚಾಚೊಂಗ್ಸಾವೊ ಪ್ರಾಂತ್ಯದಲ್ಲಿ ದುರ್ಘಟನೆ ಸಂಭವಿಸಿದ್ದು, ಬಸ್ಸಿನ ಅವಶೇಷಗಳಡಿ ಸಿಲುಕಿರುವ ಪ್ರಯಾಣಿಕರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

    ಇದನ್ನೂ ಓದಿ: ಹಿಂದು ಎಂಬುದು ಧರ್ಮವೇ ಅಲ್ಲ; ಮತ್ತೊಂದು ವಿವಾದದ ಕಿಡಿ ಹಚ್ಚಿದ ಪ್ರೊ.ಭಗವಾನ್​

    ಛೋಂಬರಿ ಪ್ರಾಂತ್ಯದ ಕಾರ್ಖಾನೆಯ ಸುಮಾರು 60 ಸಿಬ್ಬಂದಿ ವೀಕೆಂಡ್​ ಹಿನ್ನೆಲೆಯಲ್ಲಿ ಸಮುತ್​ ಪ್ರಕಾನ್​ ಪ್ರಾಂತ್ಯದ ಬುದ್ಧನ ದೇವಸ್ಥಾನಕ್ಕೆ ಪ್ರವಾಸ ಹೊರಟಿತ್ತು. ರೈಲು ಬರುವ ಮುನ್ಸೂಚನೆಯಿದ್ದರೂ ಖ್ಲಾಂಗ್ ಕ್ವಾಂಗ್ ಕ್ಲಾನ್​ ಜಿಲ್ಲೆಯ ರೈಲು ನಿಲ್ದಾಣದ ಬಳಿಯಿರುವ ರೈಲ್ವೆ ಕ್ರಾಸಿಂಗ್ ಅನ್ನು ಬಸ್​ ಚಾಲಕ ದಾಟಲು ಯತ್ನಿಸುವಾಗ ಈ ದುರ್ಘಟನೆ ನಡೆದಿದೆ. ​

    ಘಟನೆ ನಡೆದ ತಕ್ಷಣವೇ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದೆ. ಈವರೆಗೂ 10 ಮಹಿಳೆಯರು ಮತ್ತು 8 ಪುರುಷರು ಸೇರಿ 18 ಮಂದಿ ಮೃತರಾಗಿದ್ದಾರೆ. ಇತರೆ 29 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. (ಏಜೆನ್ಸೀಸ್​)

    18 ವರ್ಷದ ಯುವತಿ ಭಾರತದಲ್ಲಿ ಬ್ರಿಟಿಷ್ ಹೈಕಮಿಷನರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts