ಹಾಸನ: ಸಹರಾ ಜನ ಸೇವಾ ಟ್ರಸ್ಟ್ ವತಿಯಿಂದ ನಗರದಲ್ಲಿ 15 ಶುದ್ಧ ಕುಡಿಯುವ ನೀರಿನ ಘಟಕ ತೆರೆದಿದ್ದು, ಪ್ರತಿ ಘಟಕಕ್ಕೆ ತಲಾ 45 ಸಾವಿರ ರೂ. ವೆಚ್ಚ ಮಾಡಲಾಗಿದೆ ಎಂದು ಜೆಡಿಎಸ್ ಮುಖಂಡ ಅಗಿಲೆ ಯೋಗೀಶ್ ಹೇಳಿದರು.
ನಗರದ 19ನೇ ವಾರ್ಡ್ನಲ್ಲಿ ಶನಿವಾರ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಿರುವ ವಾರ್ಡ್ಗಳಲ್ಲಿ ಘಟಕ ಸ್ಥಾಪಿಸಲಾಗುವುದು. ನಾಲ್ಕು ವರ್ಷದಿಂದ ಈ ರೀತಿಯ ಸಮಾಜ ಸೇವೆಯಲ್ಲಿ ತೊಡಗಿದ್ದೇನೆ. 5 ರೂ. ಹಾಕಿದರೆ 20 ಲೀ. ನೀರು ಪಡೆಯಬಹುದು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್.ಶಂಕರ್, ಸದಸ್ಯರಾದ ರಜೀಯಾ ಬೇಗಂ, ಅಕ್ಮಲ್ ಅಹಮದ್, ಮಂಜುನಾಥ್, ರಫೀಕ್ ಅಹಮದ್, ಎಚ್.ಬಿ.ಗೋಪಾಲ್ ಇತರರಿದ್ದರು.