ನವದೆಹಲಿ: ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ನ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದ ಮಹಿಳೆಯನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ.
ಅಸ್ಸಾಂ ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷೆ ಅಂಗ್ಕಿತಾ ದತ್ತಾ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಆಗಿರುವವರು.
ಮಾನಸಿಕ ಹಿಂಸೆ
ಇತ್ತೀಚಿಗೆ ಅಂಗ್ಕಿತಾ ದತ್ತಾ ಯುವ ಕಾಂಗ್ರೆಸ್ನ ಹಾಲಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹಾಗೂ ಮಾಜಿ ಅಧ್ಯಕ್ಷ ಕೇಶವ್ ಕುಮಾರ್ ತಮ್ಮಗೆ ಲೈಂಗಿಕ ಕಿರುಕುಳ ಹಾಗೂ ಮಾನಸಿಕವಾಗಿ ಹಿಂಸೆಯನ್ನು ನೀಡಿದ್ಧಾರೆ ಎಂದು ಆರೋಪಿಸಿದ್ದರು.
ಬಿ.ವಿ. ಶ್ರೀನಿವಾಸ್ ಒಬ್ಬಮಹಿಳಾ ವಿರೋಧಿಯಾಗಿದ್ದು ಪ್ರತಿಯೊಂದರಲ್ಲು ಲಿಂಗ ಭೇದ ಮಾಡುತ್ತಾರೆ. ಈ ವಿಚಾರವಾಗಿ ನಾಣು ಕಾಂಗ್ರೆಸ್ ನಾಯಕರ ಗಮನ್ಕಕೂ ತಂದಿದ್ಧೇನೆ. ಆದರೆ, ಯಾರು ವಿಚಾರಣೆ ನಡೆಸುವ ಗೋಜಿಗೆ ಹೋಗಲಿಲ್ಲ ಎಂದು ದೂರಿದ್ದರು.
ಇದನ್ನೂ ಓದಿ: ಬಿ.ವಿ. ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ ಹೊರಿಸಿದ ಯುವಕಾಂಗ್ರೆಸ್ ಕಾರ್ಯಕರ್ತೆ!
ಉಚ್ಛಾಟನೆ
ಅಂಗ್ಕಿತಾ ದತ್ತಾ ಆರೋಫದ ಬೆನ್ನಲ್ಲೇ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ತನಿಖೆ ನಡೆಸಿದ್ದು ಮಹಿಳೆ ಮಾಡಿರುವ ಆರೋಪಗಳು ಆಧಾರರಹಿತವಾಗಿದ್ದು ರಾಜಕೀಯ ದುರುದ್ದೇಶದಿಂದ ಹೇಳಲಾಗಿದೆ.
ಪಕ್ಷದ ನಾಯಕರ ಮೇಲೆ ಸುಖಾ ಸುಮ್ಮನೆ ಆರೋಪ ಮಾಡಿರುವ ಮಹಿಳೆಯನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಇದು ಮಹಿಳಾ ಸಬಲೀಕರಣ
ಪಕ್ಷ ವಿರೋಧಿ ಹೇಳಿಕೆಯನ್ನು ನೀಡಿದ್ದ ಮಹಿಳೆಯನ್ನು ಉಚ್ಛಾಟಿಸಿರುವ ಕಾಂಗ್ರೆಸ್ ನಡೆಯನ್ನು ಖಂಡಿಸಿ ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದು ಇದು ಮಹಿಳಾ ಸಬಲೀಕರಣದ ಮಾದರಿ ಎಂದು ಟೀಕಿಸಿದ್ದಾರೆ.
ಮಹಿಳೆಯರಿಗೆ ಸಮಾನವಾದ ವೇದಿಕೆ ಒದಗಿಸುವ ಬದಲು ಕಿರುಕುಳ ಆರೋಪ ಮಾಡಿದವರನ್ನು ಪಕ್ಷದಿಂದ ಉಚ್ಛಾಟಿಸಿರುವುದು ಸ್ಪೂರ್ತಿದಾಯಕ ಅಲ್ಲ ಎಂದು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.