ನವದೆಹಲಿ: ರಸ್ತೆಯಲ್ಲಿ ಗಾಡಿ ಓಡಿಸುವಾಗ ತೊಂದರೆಗೆ ಸಿಲುಕಿದ್ದ ರೈತರನ್ನು ನೋಡಿದ ಎಎಸ್ಐ ಸಹಾಯ ಮಾಡಲು ಮುಂದಾದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟಿಜನ್ಗಳು ಎಎಸ್ಐ ಬಗ್ಗೆ ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದಾರೆ.
ತಾಂಡೂರು ಪ್ರದೇಶದಲ್ಲಿ ರೈತರೊಬ್ಬರು ಜಮೀನಿನಲ್ಲಿ ಸರಕು ಸಾಗಿಸುತ್ತಿದ್ದಾರೆ. ಈ ವೇಳೆ ಬಂಡಿ ಚಕ್ರ ಕಳಚಿ ಬಿದ್ದಿದೆ. ರೈತ ಮತ್ತು ಅವನೊಂದಿಗೆ ಮಹಿಳೆ ಚಕ್ರವನ್ನು ಮತ್ತೆ ಗಾಡಿಗೆ ಜೋಡಿಸಲು ಪ್ರಯತ್ನಿಸಿದರು ಆದರೆ ಅವರಿಗೆ ಸಾಧ್ಯವಾಗಲಿಲ್ಲ. ರಸ್ತೆಯಲ್ಲಿ ಸಾಗುತ್ತಿದ್ದವರಿಗೆ ಸಹಾಯ ಮಾಡುವಂತೆ ಮನವಿ ಮಾಡಿದರೂ ಯಾರೂ ಗಮನ ಹರಿಸಲಿಲ್ಲ. ಅದೇ ವೇಳೆ ಕಾರಿನಲ್ಲಿ ಹೋಗುತ್ತಿದ್ದ ತಾಂಡೂರು ಪಿಎಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಎಸ್ಐ ಗೋಪಾಲ್ ರೈತರ ಸಂಕಷ್ಟವನ್ನು ಗಮನಿಸಿದರು. ಕೂಡಲೇ ರಸ್ತೆಬದಿಯಲ್ಲಿ ಕಾರು ನಿಲ್ಲಿಸಿ ರೈತನ ಬಳಿ ಹೋದರು.
రైతన్నకు సహాయం చేసిన పోలీసన్న
తాండూరులో ఎడ్ల బండిపై వెళుతున్న రైతు బండి చక్రం ఊడిపోయి తీవ్ర ఇబ్బందులు పడుతున్నాడు.
అప్పుడే అటుగా వెళుతున్న తాండూరు పీఎస్లో ఏఎస్ఐగా పనిచేస్తున్న గోపాల్ తన కారు పక్కన ఆపి ఎడ్ల బండి చక్రాన్ని సరిచేసి రైతుకు సహాయాన్ని అందించారు. pic.twitter.com/xDyS2gB4Vt
— Telugu Scribe (@TeluguScribe) April 2, 2024
ರೈತನ ಬಳಿ ಹೋದ ಎಎಸ್ಐ, ಯಾವುದಾದರೂ ವಾಹನ ಡಿಕ್ಕಿಯಾಗಿ ಹೀಗಾಯಿತೇ ಎಂದು ರೈತನನ್ನು ಪ್ರಶ್ನಿಸಿದರು. ಅದ್ಯಾವುದೂ ಇಲ್ಲ ,ರಸ್ತೆಯಲ್ಲಿ ಸಹಾಯ ಕೇಳಿದರೂ ಯಾರೂ ಬರಲಿಲ್ಲ ಎಂದು ಹೇಳಿದರು. ಹಾಗಾಗಿ ಎಎಸ್ ಐ ಗೋಪಾಲ್ ರೈತನಿಗೆ ಸಹಾಯ ಮಾಡಿದರು. ಗಾಡಿಯನ್ನು ಮೇಲಕ್ಕೆತ್ತಿ ಚಕ್ರವನ್ನು ಸರಿಪಡಿಸಿದನರು. ಇದಕ್ಕೆ ರೈತ ಎಎಸ್ಐ ಧನ್ಯವಾದ ಅರ್ಪಿಸಿದರು.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ರೈತನಿಗೆ ಸಹಾಯ ಮಾಡಿದ ಎಎಸ್ಐ ಅವರನ್ನು ಶ್ಲಾಘಿಸುತ್ತಿದ್ದಾರೆ.