More

    ಶೆಟ್ಟರ್ ಕಾಂಗ್ರೆಸ್ ಸೇರಿದ್ದರಿಂದ ಬಿಜೆಪಿಗೆ ಇನ್ನಷ್ಟು ಬಲ ಬಂದಿದೆ: ಅಶ್ವತ್ಥ್ ನಾರಾಯಣ

    ಬೆಂಗಳೂರು:  ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿ ಟಿಕೆಟ್ ಪಡೆದ ವಿಚಾರವಾಗಿ ಸಚಿವ ಅಶ್ವತ್ಥ್ ನಾರಾಯಣ್ ಮಾತನಾಡಿದ್ದು ಇದರಿಂದಾಗಿ ಬಿಜೆಪಿಗೆ ಬಲ ಬಂದಿದೆ ಎಂದಿದ್ದಾರೆ.

    ಸಚಿವ ಅಶ್ವತ್ಥ್ ನಾರಾಯಣ್ ಮಲ್ಲೇಶ್ವರ ಆರ್.ಓ ಆಫೀಸ್ ನಲ್ಲಿ ನಾಮಪತ್ರಿಕೆ ಸಲ್ಲಿಸಿದ ಬಳಿಕ ಈ ಹೇಳಿಕೆ ನೀಡಿದ್ದಾರೆ. ಈ ಸಂದರ್ಭ ಅವರು “ಶೆಟ್ಟರ್ ಬಿಜೆಪಿ ಬಿಟ್ಟಿರೋದರಿಂದ ಬಿಜೆಪಿಗೆ ಯಾವುದೇ ನಷ್ಟ ಇಲ್ಲ. ಅವರ ನಿರ್ಗಮನದಿಂದ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿದೆ. ನಮ್ಮಲ್ಲಿರುವಾಗ ಅನುಭವಿಸಬಹುದಾದ ಪರಮೊನ್ನತ ಅಧಿಕಾರವನ್ನು ಅವರು ಅನುಭವಿಸಿದ್ದಾರೆ. ಮುಖ್ಯಮಂತ್ರಿಗಿಂತ ಇನ್ಯಾವ ಹುದ್ದೆ ಕೊಡಲು ಸಾಧ್ಯ

    ಈಗ ಟಿಕೆಟ್ ಕೊಟ್ಟಿಲ್ಲ ಎನ್ನುವ ಸಣ್ಣ ವಿಚಾರಕ್ಕೆ ಬಿಟ್ಟುಹೋಗಿರೋದಕ್ಕೆ ಜನರು ಪಾಠ ಕಲಿಸ್ತಾರೆ. ಅವರಿಂದ ಲಿಂಗಾಯತ ಸಮುದಾಯ ಬಿಜೆಪಿ ಬೆಂಬಲಿಸೋದು ಬಿಡೋದಿಲ್ಲ. ಇಡೀ ಲಿಂಗಾಯತ ಸಮುದಾಯ ಈಗಲೂ ಮುಂದೆಯೂ ನಮ್ಮ ಜೊತೆಗಿರುತ್ತೆ. ಅವರು ಹೋದರೆ ಇನ್ನೊಬ್ಬ ಲಿಂಗಾಯತ ನಾಯಕ ಹುಟ್ಟಿಕೊಳ್ತಾನೆ. ಸವದಿ, ಶೆಟ್ಟರ್ ಹೋಗಿರೋದರಿಂದ ಯಾವುದೇ ಹೊಡೆತ ನಮ್ಮ ಪಕ್ಷಕ್ಕಿಲ್ಲ.

    ಇದುವರೆಗೆ ಬಿಜೆಪಿ ಬಹುಮತದಿಂದ ಬಂದಿರಲಿಲ್ಲ. ಈಗ ನನಗನ್ನಿಸುತ್ತೆ ಸಂಫುರ್ಣ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಈಗಿರೋ ಸ್ಥಾನಕ್ಕಿಂತ ಕಡಿಮೆ ಆಗಲಿದೆ” ಎಂದು ಹೇಳಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts