More

    ಆಶಾಗಳ ಹೋರಾಟಕ್ಕೆ ಬೆಂಬಲ

    ವಿಜಯಪುರ: ನ್ಯಾಯೋಚಿತ ಬೇಡಿಕೆಗಳ ಈಡೇರಿಗಾಗಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗ್‌ನೈಸೇಷನ್ (ಎಐಡಿಯುಒ) ಜಿಲ್ಲಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
    ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿ ಪ್ರತಿಭಟನೆ ನಡೆಸಿದ ಎಐಡಿವೈಒ ಜಿಲ್ಲಾಧ್ಯಕ್ಷ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಆಶಾ ಸೋದರಿಯರು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವುದರೊಂದಿಗೆ ಕರೊನಾ ಸಂಕಟದ ವಿರುದ್ಧ ಕೋವಿಡ್ ಯೋಧರಾಗಿ ಹೋರಾಡುತ್ತಿದ್ದಾರೆ. ಸರ್ಕಾರ ಅವರ ನ್ಯಾಯೋಜಿತ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದರು.
    ಜಿಲ್ಲಾ ಉಪಾಧ್ಯಕ್ಷ ಬಾಳು ಜೇವೂರ, ಭರತಕುಮಾರ ಎಚ್.ಟಿ, ಶಶಿ ದೊಡಮನಿ, ತೌಶಿಪ್ ಜಹಗೀರದಾರ್, ಆನಂದ ಪಟ್ಟಣದ, ಆಶಾಗಳಾದ ಮಧು ಬಗಲಿ, ಸವಿತಾ ಕಬಾಡೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ಆಶಾಗಳ ಹೋರಾಟಕ್ಕೆ ಬೆಂಬಲ
    ಆಶಾಗಳ ಹೋರಾಟಕ್ಕೆ ಬೆಂಬಲ
    ಆಶಾಗಳ ಹೋರಾಟಕ್ಕೆ ಬೆಂಬಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts