ಬಂಗಾರಪೇಟೆ ಗ್ರಾಮಾಂತರ: ಲಾರಿ ತಡೆದು ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಕಾಮಸಮುದ್ರ ಪೊಲೀಸರು ಶನಿವಾರ ಬಂಧಿಸಿ ಕಾರು, ಎರಡು ದ್ವಿಚಕ್ರ ವಾಹನ, 4 ಮೊಬೈಲ್ ಹಾಗೂ 3.11 ಲಕ್ಷ ರೂ. ನಗದು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಮಿಳುನಾಡು ಮೂಲದ ನಾಗೇಶ್ (25), ಸೈಯದ್ ಬಾಷ (27), ಜಬೀವುಲ್ಲಾ (25) ಸದ್ದಾಂ ಹಸೇನ್ (23), ಚಿನ್ನಸ್ವಾಮಿ(29) ಬಂಧಿತರು.
ಜೂ.18ರಂದು ಬಂಗಾರಪೇಟೆಯ ಪಿಆರ್ಎಸ್ ಮಿಲ್ನಲ್ಲಿ ಅಕ್ಕಿ ಲೋಡ್ ಮಾಡಿಕೊಂಡು ತಮಿಳುನಾಡಿಗೆ 4.34 ಲಕ್ಷ ರೂ. ಹಣದೊಂದಿಗೆ ಹೋಗುತ್ತಿದ್ದ ವೇಳೆ ಕಾಮಸಮುದ್ರ ತೊಪ್ಪನಹಳ್ಳಿ ಮಾರ್ಗದ ದೊಡ್ಡಬೊಂಪಲ್ಲಿ ಗ್ರಾಮದ ಬಳಿ ಕಾರಿನಿಂದ ಲಾರಿ ಹಿಂಬಾಲಿಸಿದ ನಾಲ್ವರು ಡೆವರ್ ರಾಮಕೃಷ್ಣ (31)ಎಂಬುವವನ ಮೇಲೆ ಹಲ್ಲೆ ಮಾಡಿ ಹಣ ಕಸಿದು ಪರಾರಿಯಾಗಿದ್ದರು. ರಾಮಕೃಷ್ಣಪ್ಪ ಕಾಮಸಮುದ್ರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಕೆಜಿಎಫ್ ಎಸ್ಪಿ ಡಾ.ಧರಣಿದೇವಿ ಮತ್ತು ಸಿಪಿಐ ಆನಂದಕುಮಾರ್ ಮಾರ್ಗದರ್ಶನದಲ್ಲಿ ಪಿಎಸ್ಐ ವಿಠ್ಠಲ ವೈ. ತಲವಾರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಮತ್ತಿಬ್ಬರು ಆರೋಪಿಗಳಾದ ಹೊಸಪುರ ನಾಗರಾಜ್ ಮತ್ತು ಮರಗಟ್ಟ ನಾಗರಾಜ್ ತಲೆಮರೆಸಿಕೊಂಡಿದ್ದಾರೆ.
ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಧರಣಿದೇವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಮಂಜುನಾಥ್,
ಲಕ್ಷ್ಮಣ್ ತೇಲಿ, ಶಿವಕುಮಾರ್, ಕೃಷ್ಣ , ರಾಮರಾವ್ ಮುಂತಾದವರು ಭಾಗಿಯಾಗಿದ್ದರು.