ಬಾಲಿವುಡ್ನಲ್ಲಿ ಭಲಾಡ್ಯರು ಹೇಗೆ ಹೊಸಬರನ್ನು ತುಳಿದು ಬಿಸಾಡುತ್ತಾರೆ ಎಂದು ಮಂಗಳವಾರವಷ್ಟೇ ದಬಾಂಗ್ ಖ್ಯಾತಿಯ ಅಭಿನವ್ ಕಶ್ಯಪ್ ಹೇಳಿಕೊಂಡಿದ್ದರು. ತಾವು ಸಹ ಅದೇ ತರಹ ನಿರಂತರವಾಗಿ ತುಳಿತಕ್ಕೊಳಗಾಗಿದ್ದು, ತಮ್ಮ ಅವನತಿಗೆ ಸಲ್ಮಾನ್ ಕುಟುಂಬದವರೇ ಕಾರಣ ಎಂದು ಅಭಿಪ್ರಾಯ ಪಟ್ಟಿದ್ದರು. ಈಗ ಅಭಿನವ್ ಮಾತಿಗೆ ಸಲ್ಮಾನ್ ಸಹೋದರ ಖಡಕ್ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದರೆ, ದಿನಕ್ಕೆ 100 ಜನ ಸಾಯುತ್ತಿದ್ದರು
ಈ ಕುರಿತು ಮಾತನಾಡಿರುವ ಅರ್ಬಾಜ್ ಖಾನ್, 2012ರಿಂದ ಅಭಿನವ್ ಅವರನ್ನು ಭೇಟಿಯಾಗಿಲ್ಲ ಎಂದು ಹೇಳಿದ್ದಾರ. ದಬಾಂಗ್ ಯಶಸ್ಸಿನ ನಂತರ ಅಭಿನವ್, ನಮ್ಮ ಸಂಸ್ಥೆಗೆ ದಬಾಂಗ್ 2 ಚಿತ್ರವನ್ನು ಮಾಡಿಕೊಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ನಾವು ವೃತ್ತಿಪರವಾಗಿ ದೂರಾಗಿದ್ದೇವೆ. ಅಷ್ಟೇ ಅಲ್ಲ, ಅವರ ಜತೆಗೆ ಮಾತಾಡಿದ್ದೂ ಇಲ್ಲ. ಅಷ್ಟಾದರೂ ಅವರು ನಮ್ಮ ಮೇಲೇಕೆ ಆರೋಪ ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಕುರಿತು ನಾವು ಕಾನೂನು ರೀತಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಡಿಯೋ ಸಂದೇಶದ ಮೂಲಕ ಪರಿಪರಿಯಾಗಿ ಬೇಡಿಕೊಂಡ ಅರ್ಜುನ್ ಸರ್ಜಾ
ಬರೀ ಅರ್ಬಾಜ್ ಖಾನ್ ಅಷ್ಟೇ ಅಲ್ಲ, ಸಲ್ಮಾನ್ ತಂದೆ ಸಲೀಮ್ ಖಾನ್ ಸಹ ಅಭಿನವ್ ವಿರುದ್ಧ ಕಿಡಿಕಾರಿದ್ದಾರೆ. ನಮಗೆ ಮಾಡುವುದಕ್ಕೆ ಬೇರೆ ಕೆಲವಿಲ್ಲವೇ? ನಾವ್ಯಾಕೆ ಅವರನ್ನು ತುಳಿಯಬೇಕು? ಅವರು ದಬಾಂಗ್ ನಂತರ ಎಂತಹ ಸಿನಿಮಾ ಮಾಡಿದ್ದಾರೆ ಎಂದು ಮೊದಲು ಹೇಳಿ, ಆ ನಂತರ ಬೆರಳು ಮಾಡಿ ತೋರಿಸಬೇಕು ಎಂದು ಸಲೀಮ್ ಖಾನ್ ಹೇಳಿದ್ದಾರೆ.
ಇನ್ನು ತಮ್ಮ ಕುಟುಂಬದ ಬಗ್ಗೆ ಅಭಿನವ್ ಆರೋಪ ಮಾಡಿದ್ದರ ಕುರಿತಾಗಿ ಮಾತನಾಡಿರುವ ಅವರು, ಪುಣ್ಯಕ್ಕೆ ಅವರಿಗೆ ನಮ್ಮ ಹೆಸರುಗಳು ಮಾತ್ರ ಗೊತ್ತಿದೆ. ಅವರಿಗೆ ನಮ್ಮಪ್ಪ-ತಾತನ ಹೆಸರು ಗೊತ್ತಿದ್ದರೆ, ಅವರು ಸಹ ತುಳಿಯುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದರೇನೋ? ಅವರು ಏನಾದರೂ ಮಾತಾಡಿಕೊಳ್ಳಲಿ. ನನಗೆ ಅವರ ಬಗ್ಗೆ ಮಾತನಾಡುವುದಕ್ಕೆ ಇಷ್ಟ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಆಮೀರ್ ಖಾನ್ ಜತೆ ‘ಮಹಾಭಾರತ’ ಸಿನಿಮಾನಾ? ನೋ ವೇ.. ಚಾನ್ಸೇ ಇಲ್ಲ!