More

    ಅಪ್ಪ-ತಾತನ ಹೆಸರು ಗೊತ್ತಿದ್ದರೆ, ಅವರ ಬಗ್ಗೆಯೂ ಆರೋಪ ಮಾಡುತ್ತಿದ್ದರೇನೋ?

    ಬಾಲಿವುಡ್​ನಲ್ಲಿ ಭಲಾಡ್ಯರು ಹೇಗೆ ಹೊಸಬರನ್ನು ತುಳಿದು ಬಿಸಾಡುತ್ತಾರೆ ಎಂದು ಮಂಗಳವಾರವಷ್ಟೇ ದಬಾಂಗ್​ ಖ್ಯಾತಿಯ ಅಭಿನವ್​ ಕಶ್ಯಪ್​ ಹೇಳಿಕೊಂಡಿದ್ದರು. ತಾವು ಸಹ ಅದೇ ತರಹ ನಿರಂತರವಾಗಿ ತುಳಿತಕ್ಕೊಳಗಾಗಿದ್ದು, ತಮ್ಮ ಅವನತಿಗೆ ಸಲ್ಮಾನ್​ ಕುಟುಂಬದವರೇ ಕಾರಣ ಎಂದು ಅಭಿಪ್ರಾಯ ಪಟ್ಟಿದ್ದರು. ಈಗ ಅಭಿನವ್​ ಮಾತಿಗೆ ಸಲ್ಮಾನ್​ ಸಹೋದರ ಖಡಕ್​ ಉತ್ತರ ನೀಡಿದ್ದಾರೆ.

    ಇದನ್ನೂ ಓದಿ: ಎಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದರೆ, ದಿನಕ್ಕೆ 100 ಜನ ಸಾಯುತ್ತಿದ್ದರು

    ಈ ಕುರಿತು ಮಾತನಾಡಿರುವ ಅರ್ಬಾಜ್​ ಖಾನ್​, 2012ರಿಂದ ಅಭಿನವ್​ ಅವರನ್ನು ಭೇಟಿಯಾಗಿಲ್ಲ ಎಂದು ಹೇಳಿದ್ದಾರ. ದಬಾಂಗ್​ ಯಶಸ್ಸಿನ ನಂತರ ಅಭಿನವ್​, ನಮ್ಮ ಸಂಸ್ಥೆಗೆ ದಬಾಂಗ್​ 2 ಚಿತ್ರವನ್ನು ಮಾಡಿಕೊಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ನಾವು ವೃತ್ತಿಪರವಾಗಿ ದೂರಾಗಿದ್ದೇವೆ. ಅಷ್ಟೇ ಅಲ್ಲ, ಅವರ ಜತೆಗೆ ಮಾತಾಡಿದ್ದೂ ಇಲ್ಲ. ಅಷ್ಟಾದರೂ ಅವರು ನಮ್ಮ ಮೇಲೇಕೆ ಆರೋಪ ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಕುರಿತು ನಾವು ಕಾನೂನು ರೀತಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ವಿಡಿಯೋ ಸಂದೇಶದ ಮೂಲಕ ಪರಿಪರಿಯಾಗಿ ಬೇಡಿಕೊಂಡ ಅರ್ಜುನ್​ ಸರ್ಜಾ

    ಬರೀ ಅರ್ಬಾಜ್​ ಖಾನ್​ ಅಷ್ಟೇ ಅಲ್ಲ, ಸಲ್ಮಾನ್​ ತಂದೆ ಸಲೀಮ್​ ಖಾನ್​ ಸಹ ಅಭಿನವ್​ ವಿರುದ್ಧ ಕಿಡಿಕಾರಿದ್ದಾರೆ. ನಮಗೆ ಮಾಡುವುದಕ್ಕೆ ಬೇರೆ ಕೆಲವಿಲ್ಲವೇ? ನಾವ್ಯಾಕೆ ಅವರನ್ನು ತುಳಿಯಬೇಕು? ಅವರು ದಬಾಂಗ್​ ನಂತರ ಎಂತಹ ಸಿನಿಮಾ ಮಾಡಿದ್ದಾರೆ ಎಂದು ಮೊದಲು ಹೇಳಿ, ಆ ನಂತರ ಬೆರಳು ಮಾಡಿ ತೋರಿಸಬೇಕು ಎಂದು ಸಲೀಮ್​ ಖಾನ್​ ಹೇಳಿದ್ದಾರೆ.

    ಇನ್ನು ತಮ್ಮ ಕುಟುಂಬದ ಬಗ್ಗೆ ಅಭಿನವ್​ ಆರೋಪ ಮಾಡಿದ್ದರ ಕುರಿತಾಗಿ ಮಾತನಾಡಿರುವ ಅವರು, ಪುಣ್ಯಕ್ಕೆ ಅವರಿಗೆ ನಮ್ಮ ಹೆಸರುಗಳು ಮಾತ್ರ ಗೊತ್ತಿದೆ. ಅವರಿಗೆ ನಮ್ಮಪ್ಪ-ತಾತನ ಹೆಸರು ಗೊತ್ತಿದ್ದರೆ, ಅವರು ಸಹ ತುಳಿಯುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದರೇನೋ? ಅವರು ಏನಾದರೂ ಮಾತಾಡಿಕೊಳ್ಳಲಿ. ನನಗೆ ಅವರ ಬಗ್ಗೆ ಮಾತನಾಡುವುದಕ್ಕೆ ಇಷ್ಟ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

    ಆಮೀರ್​ ಖಾನ್​ ಜತೆ ‘ಮಹಾಭಾರತ’ ಸಿನಿಮಾನಾ? ನೋ ವೇ.. ಚಾನ್ಸೇ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts