More

    ಅಪ್ಪು ಅಭಿಮಾನೋತ್ಸವ: ಬೊಂಬೆ ಹೇಳುತೈತೆ ಗೀತೆ ಹಾಡಿದ ಸಿದ್ದನಕೊಳ್ಳದ ಡಾ.ಶಿವಕುಮಾರ ಶ್ರೀ

    ಬಾಗಲಕೋಟೆ: ‌ನಗರದಲ್ಲಿ ಡಾ.ರಾಜಕುಮಾರ್ ಜನ್ಮದಿನೋತ್ಸವದ ಅಂಗವಾಗಿ ದಿ.ಪವರ್ ಸ್ಟಾರ್ ಅವರ ಅಪ್ಪು ಅಭಿಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಬಾಗಲಕೋಟೆಯ ವಿ‌.ಡಿ‌.ಫಿಲ್ಮ್​ ಮೇಕರ್ಸ್ ವತಿಯಿಂದ ನಗರದ ವಿದ್ಯಾಗಿರಿ ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಚಿತ್ರಗಳ ಗೀತೆಗಳ ಗಾಯನ ಹಾಗೂ ಕಲಾವುದರಿಂದ ನಡೆದ ನೃತ್ಯ ಕಾರ್ಯಕ್ರಮ ಎಲ್ಲರಿಗೆ ಮನೋರಂಜನೆಯ ರಸದೌತಣವನ್ನ ಉಡಬಡಿಸಿತು.

    ಬಾಗಲಕೋಟೆ ಜಿಲ್ಲೆಯ ಸುಕ್ಷೇತ್ರ ಸಿದ್ದನಕೊಳ್ಳದ ಡಾ.ಶಿವಕುಮಾರ ಶ್ರೀಗಳು ಹಾಗೂ ಖಾಸಗಿ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಶೋ’ದ ಪ್ರತಿಭೆ ಚೈತ್ರಾಲಿ ಚಿಲ್ಲಾಳ ಅವರು ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದರು.
    ಬಿಜೆಪಿ ಯುವ ಮುಖಂಡ ಮಲ್ಲಿಕಾರ್ಜುನ ಚರಂತಿಮಠ ಅವರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗಿಯಾಗಿದ್ದರು.

    ಡಾ.ಪುನೀತ್ ರಾಜ್ ಕುಮಾರ ಅವರ ಚಿತ್ರಗಳ ಗೀತೆಗಳಿಗೆ ಹಾಗೂ ನೃತ್ಯಕ್ಕೆ ಅಪ್ಪು ಅಭಿಮಾನಿಗಳು ಸಿಳ್ಳೆ-ಚಪ್ಪಾಳೆ ಹೊಡೆದು ಸಂಭ್ರಮಿಸಿದರು.

    ವೇದಿಕೆಯ ಮೇಲೆ ಸಿದ್ದನಕೊಳ್ಳದ ಡಾ.ಶಿವಕುಮಾರ ಶ್ರೀಗಳು ಬೊಂಬೆ ಹೇಳುತೈತೆ ಹಾಡು ಹಾಡಿ ಎಲ್ಲರನ್ನ ರಂಜಿಸಿದ್ದು ವಿಶೇಷವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts