ತರೀಕೆರೆ: ಎಪಿಎಂಸಿ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘ, ಹಸಿರು ಸೇನೆ, ವಿವಿಧ ಕನ್ನಡಪರ ಸಂಘಟನೆಗಳು, ಆಟೋ ಚಾಲಕರು, ವರ್ತಕರು ಮಹಾತ್ಮ ಗಾಂಧಿ ವೃತ್ತದ ಸಮೀಪ ರಸ್ತೆ ತಡೆ ನಡೆಸಿ ಎಸಿ ರೇಣುಕಾಪ್ರಸಾದ್ಗೆ ಮನವಿ ಸಲ್ಲಿಸಿದರು.
ರೈತ ಸಂಘದ ಮುಖಂಡ ಮಹೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾಯ್ದೆ ಜಾರಿಗೊಳಿಸಿ ಬಹು ರಾಷ್ಟ್ರೀಯ ಕಂಪನಿಗಳು ದೇಶಕ್ಕೆ ಲಗ್ಗೆ ಇಡುವಂತೆ ಮಾಡಿವೆ ಎಂದು ದೂರಿದರು.
ಕಾಂಗ್ರೆಸ್ ಮುಖಂಡ ಕೆ.ಆರ್.ಧ್ರುವಕುಮಾರ್ ಮಾತನಾಡಿದರು. ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಎಸ್.ಸೋಮಶೇಖರಯ್ಯ, ಉಪಾಧ್ಯಕ್ಷ ಬಿ.ಸಿದ್ದಪ್ಪ, ತಾಲೂಕು ಉಪಾಧ್ಯಕ್ಷ ಜೈ ಕೃಷ್ಣಪ್ಪ, ಸೂರಪ್ಪ ಗೌಡ, ಶ್ರೀಗಂಧ ಮತ್ತು ಬಿದಿರು ಬೆಳೆಗಾರರ ಸಂಘದ ಅಧ್ಯಕ್ಷ ಎ.ಎಸ್.ಈಶ್ವರಪ್ಪ, ಕರವೇ ಜಿಲ್ಲಾ ಸಂಚಾಲಕ ಜಿ.ಆರ್.ವಿಶ್ವನಾಥ್ ಕಾಶಿ, ವಿ.ಹರೀಶ್ ಗೌಡ, ಜಯಕರ್ನಾಟಕ ತಾಲೂಕು ಅಧ್ಯಕ್ಷ ಟಿ.ಎನ್.ಜಗದೀಶ್, ವೇದಮೂರ್ತಿ, ಇಮ್ರಾನ್ ಖಾನ್ ಇದ್ದರು.