More

    ಬೆಂಕಿಗೆ ಆಹುತಿಯಾದ ವಿದ್ಯುತ್ ಚಾಲಿತ ಸ್ಕೂಟರ್

    ಕೊಳ್ಳೇಗಾಲ: ಪಟ್ಟಣದ ಗೀತಾ ಪ್ರೈಮರಿ ಶಾಲೆಯ ರಸ್ತೆಯಲ್ಲಿರುವ ಬ್ಯಾಟರಿ ಶಾಪ್‌ಗೆ ಶನಿವಾರ ಚಾರ್ಜ್‌ಗೆ ಬಂದಿದ್ದ ವಿದ್ಯುತ್ ಚಾಲಿತ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬೈಕ್ ಸುಟ್ಟು ಹೋಗಿದೆ.

    ತಾಲೂಕಿನ ಚಿಕ್ಕಿಂದುವಾಡಿ ಗ್ರಾಮದ ರಾಮರಾವ್ ಅವರು ಬ್ಯಾಟರಿ ಚಾರ್ಜ್‌ಗೆಂದು ಶಾಪ್‌ಗೆ ತೆರಳಿದ್ದಾರೆ. ಬೈಕ್‌ನಲ್ಲಿ ಶಬ್ದ ಕೇಳಿ ಬರುತ್ತಿದ್ದ ಕಾರಣ ಶಾಪ್ ಮಾಲೀಕ ಕುಮಾರ್ ಬೈಕ್ ಡಿಕ್ಕಿಯನ್ನು ತೆಗೆದಾಗ ಬೆಂಕಿ ಹೊತ್ತಿಕೊಂಡಿದೆ. ಗಾಬರಿಗೊಂಡ ಮಾಲೀಕ ತನ್ನ ಕೈ ಯಲ್ಲಿದ್ದ ಸ್ಮಾರ್ಟ್ ಫೋನ್ ಕೈಚೆಲ್ಲಿದ್ದಾಗ ಅದು ಕೂಡ ಬೆಂಕಿಗೆ ಆಹುತಿಯಾಗಿದೆ. ನಂತರ, ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಮುಂದಾದರು. ಅಷ್ಟರಲ್ಲಿ ಬೈಕ್ ಹಾಗೂ ಮೊಬೈಲ್ ಸುಟ್ಟು ಹೋಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts