ಕೌನ್ ಬನೇಗಾ ಕರೋರ್ಪತಿ (KBC)ಯ 15ನೇ ಸೀಸನ್ನಲ್ಲಿ ಅಮಿತಾಬ್ ಬಚ್ಚನ್ ಪ್ರತಿಯೊಂದು ಸಂಚಿಕೆಯನ್ನ ಇಂಟ್ರೆಸ್ಟಿಂಗ್ ಮಾಡುತ್ತಾರೆ. ಆದ್ರೆ ಯಾಕೋ ಇದೀಗ ಸದಾ ಹಸನ್ಮುಖಿಯಾಗಿ ಕಾಣಿಸಿಕೊಳ್ಳುವ ಬಿಗ್ ಬಿ ಕೆಬಿಸಿ ವೇದಿಕೆಯ ಮೇಲೆಯೇ ಭಾವುಕರಾಗಿದ್ದಾರೆ.
ಅಷ್ಟಕ್ಕೂ ಅಮಿತಾಭ್ ಕಣ್ಣೀರು ಹಾಕಿರೋದು ಬೇಸರದಿಂದ ಅಲ್ಲ ಇದು ಆನಂದಭಾಷ್ಫದಿಂದ. ಯಸ್, ಇದು ಖುಷಿಯ ಕಣ್ಣೀರು. ಹುಟ್ಟುಹಬ್ಬದ ಪ್ರಯುಕ್ತ ಕೌನ್ ಬನೇಗಾ ಕರೋಡ್ಪತಿ ವಿಶೇಷ ಸಂಚಿಕೆ ಪ್ರಸಾರಗೊಳ್ಳಲಿದ್ದು, ಇದರಲ್ಲಿ ಅವರು ಜನರು ತಮಗೆ ತೋರಿಸುವ ಅಪಾರ ಅಭಿಮಾನ ಕಂಡು ಭಾವುಕರಾಗಿದ್ದು, ಅವರು ಕುಳಿತಿದ್ದ ಸೀಟಿನಿಂದ ಎದ್ದು ಹೋಗಿದ್ದಾರೆ.
ಹುಟ್ಟು ಹಬ್ಬದ ನಿಮಿತ್ತ ಅಮಿತಾಭ್ ಅವರಿಗೆ ದೊಡ್ಡ ಸರ್ಪ್ರೈಸ್ ನೀಡೋಕೆ ಅಭಿಮಾನಿಗಳು ರೆಡಿಯಾಗಿದ್ದು, ಸದ್ಯ ಅದರ ಪ್ರೋಮೋ ಕೂಡಾ ಬಿಡುಗಡೆಯಾಗಿದೆ. ಪ್ರೋಮೋದಲ್ಲಿ ಸಾಕಷ್ಟು ಅಭಿಮಾನಿಗಳು ಅಮಿತಾಭ್ಗೆ ಉಡುಗೊರೆ ನೀಡಿದ್ದಾರೆ.
ಸರ್ಪ್ರೈಸ್ಗಳನ್ನ ಕಂಡು ಭಾವುಕರಾದ ನಟ ಅಳುತ್ತಲೇ ನನ್ನನ್ನು ಇನ್ನೆಷ್ಟು ಅಳಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇಲ್ಲಿಯವರೆಗೆ ಇಲ್ಲಿ ಕುಳಿತ ಸ್ಪರ್ಧಿಗಳಿಗೆ ನಾನು ಟಿಶ್ಯು ಕೊಡುತ್ತಿದೆ. ಆದರೆ ಇದೀಗ ನನ್ನನ್ನೇ ಅಳಿಸುತ್ತಿದ್ದೀರಲ್ಲ ಎಂದಿರುವ ನಟ, ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಅಮಿತಾಭ್ ಅವರ ಮಗ ಅಭಿಷೇಕ್ ಮತ್ತು ಪತ್ನಿ ಜಯಾ ಬಚ್ಚನ್ ಅವರು ಸರ್ಪ್ರೈಸ್ ವಿಸಿಟ್ ನೀಡಲಿದ್ದಾರೆ. ಮಾತ್ರವಲ್ಲದೇ, ಕಾರ್ಯಕ್ರಮದಲ್ಲಿ ಜನಪ್ರಿಯ ಸರೋದ್ ವಾದಕ ಪದ್ಮವಿಭೂಷಣ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರ ಪ್ರದರ್ಶನ ಇರಲಿದೆ. ಚಿರಂಜಿವಿ, ಅನುಪಮ್ ಖೇರ್, ವಿದ್ಯಾಬಾಲನ್, ವಿಕ್ಕಿ ಕೌಶಲ್, ಆರ್ ಮಾಧವನ್, ಬೊಮನ್ ಇರಾನಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ವಿಡಿಯೋ ಮೂಲಕ ವಿಶ್ ಮಾಡಿದ್ದಾರೆ.