ಬಳ್ಳಾರಿ: ಕರೊನಾ ವೈರಸ್ ಭೀತಿ ನಡುವೆಯೇ ಪ್ರೇಮಿಗಳು ಸಿದ್ದಾಪುರ ಗ್ರಾಮದ ಮಲಿಯಮ್ಮ ದೇವಿ ದೇವಾಲಯದಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿದ್ದಾಪುರ ಗ್ರಾಮದ ರೋಹಿಣಿ(20) ಹಾಗೂ ಮಧು( 25 ) ಸರಳವಾಗಿ ಕುಟುಂಬದ ಸಮ್ಮುಖದಲ್ಲಿ ವಿವಾಹವಾದರು.
ಇಬ್ಬರು ಪರಸ್ವರ ಪ್ರೀತಿಸುತ್ತಿದ್ದರು. ಇವರ ವಿವಾಹಕ್ಕೆ 2 ಕುಟುಂಬದವರ ಒಪ್ಪಿಗೆ ಇತ್ತು. ಬಂಧುಬಳಗ ಕರೆದು ವಿವಾಹ ನೆರವೇರಿಸಲು 2 ಕುಟುಂಬದವರೂ ನಿರ್ಧರಿಸಿದ್ದರು. ಆದರೆ ಕರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವಿವಾಹ ರದ್ದುಪಡಿಸಿರುವುದರಿಂದ ಸರಳವಾಗಿ ದೇವಾಲಯದಲ್ಲಿ ವಿವಾಹವಾದರು. (ದಿಗ್ವಿಜಯ ನ್ಯೂಸ್)
ಕೈ ಮೀರುತ್ತಿದೆ ಕರ್ನಾಟಕದ ಪರಿಸ್ಥಿತಿ: ಸರ್ಕಾರದ ಮಟ್ಟದಲ್ಲೇ ದ್ವಂದ್ವ, ಪೊಲೀಸರು ಲಾಠಿ ಎತ್ತಿದರೂ ಆಕ್ಷೇಪ