ಕಾಗವಾಡ: ಮದ್ಯ ಕುಡಿದು ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ಕಾಗವಾಡ ತಾಲೂಕಿನ ಉಗಾರ ಖುರ್ದದಲ್ಲಿ ಭಾನುವಾರ ನಡೆದಿದೆ. ಉಗಾರ ಖುರ್ದ ನಿವಾಸಿ ಉಮೇಶ ಗುರಪ್ಪ ಕಾಲತಿಪ್ಪಿ (48) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ರಾತ್ರಿ ಮದ್ಯ ಕುಡಿದು ಮನೆಯಲ್ಲಿ ಎಲ್ಲರೂ ಮಲಗಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.