More

    ಕುಡಿವ ನೀರು ಪೂರೈಕೆಗೆ ಆದ್ಯತೆ

    ಅಳವಂಡಿ: ಸಮೀಪದ ಕವಲೂರು ಗ್ರಾಪಂನಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯ ಕುರಿತು ಚರ್ಚೆ ನಡೆಸಲಾಯಿತು.

    ಸದಸ್ಯೆ ಪದ್ದವ್ವ ಗುಡಿಹಿಂದ್ಲ ಮಾತನಾಡಿ, ಹಲವರು ವಸತಿ ಮನೆಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ ಕೆಲ ದಿನಗಳಿಂದ ಪಂಚಾಯಿತಿಗೆ ಮನೆಗಳು ಮಂಜೂರಾಗಿಲ್ಲ. ಸರ್ವ ಸದಸ್ಯರು ಶಾಸಕರನ್ನು ಭೇಟಿ ಮಾಡಿ ಹೆಚ್ಚುವರಿ ಮನೆ ಮಂಜೂರಿಗೆ ಆಗ್ರಹಿಸಿ ಬೇಡಿಕೆ ಸಲ್ಲಿಸಬೇಕಾಗಿದೆ. ಸಿಸಿ ರಸ್ತೆ, ಚರಂಡಿ ನಿರ್ಮಾಣ, ಸ್ವಚ್ಛತೆ, ಕುಡಿವ ನೀರು ಪೂರೈಕೆಗೆ ಆದ್ಯತೆ ನೀಡಲಾಗುವುದು ಎಂದರು.

    ಪ್ರಸಕ್ತ ಸಾಲಿನ 15ನೇ ಹಣಕಾಸು ಯೋಜನೆಯಡಿ ಕೈಕೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಸರ್ವ ಸದಸ್ಯರು ಚರ್ಚೆ ನಡೆಸಿ, ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದರು. ಗ್ರಾಪಂ ಸದಸ್ಯರಾದ ಪ್ರದೀಪಕುಮಾರ ಸಜ್ಜೇದಮಠ, ಸುಮಿತ್ರಾ ಹಳ್ಳಿಗುಡಿ, ಬಸಮ್ಮ ಹೊಸಮನಿ, ಸಣ್ಣಬರಮಪ್ಪ ಕಳಸಣ್ಣವರ, ಶಾಂತವ್ವ ವಡ್ಡರ, ಶಾಂತವ್ವ ಬಳೂಟಗಿ, ಈರಪ್ಪ ಕೆಳಗಡೆ, ರೇಣವ್ವ ಬಂಡಿ, ಬದರುದ್ದೀನ ಶಾ ಮಂಕಾನದಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts