More

    ಜಿಲ್ಲೆ ಗಡಿಯಲ್ಲಿ ಕಟ್ಟೆಚ್ಚರ

    ಆಲಮಟ್ಟಿ: ಕರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾ ಗಡಿ ಬಂದ್ ಮಾಡಲಾಗಿದೆ. ನೆರೆಯ ಬಾಗಲಕೋಟೆ ಸೇರಿದಂತೆ ಅನ್ಯ ಜಿಲ್ಲೆ, ರಾಜ್ಯಗಳಿಂದ ಯಾವುದೇ ವಾಹನ, ವ್ಯಕ್ತಿ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ.
    ತಾಲೂಕಿನ ಯಲಗೂರ ಕ್ರಾಸ್ ಬಳಿಯ ಚೆಕ್ ಪೋಸ್ಟ್‌ನಲ್ಲಿ ಅನುಮತಿ ಹೊಂದಿದ ವಾಹನಗಳನ್ನು ಹೊರತು ಪಡಿಸಿ, ಯಾವುದೇ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ವಾಹನ, ಪ್ರಯಾಣಿಕರನ್ನು ಕೂಲಂಕಷವಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ.

    ಶವ ಸಂಸ್ಕಾರಕ್ಕೆ ಹೋಗಲು ಬಿಡಲಿಲ್ಲ

    ಬಸವನಬಾಗೇವಾಡಿ ತಾಲೂಕಿನ ಗ್ರಾಮವೊಂದರಲ್ಲಿ ಸಂಬಂಧಿಕರು ಮೃತರಾಗಿದ್ದು ಶವ ಸಂಸ್ಕಾರಕ್ಕೆ ಹೋಗಬೇಕಿದೆ. ದಯವಿಟ್ಟು ಅವಕಾಶ ನೀಡಿ ಎಂದು ಬಾಗಲಕೋಟೆ ಜಿಲ್ಲೆಯ ಕಂದಾಯ ಇಲಾಖೆ ಅಧಿಕಾರಿಯೊಬ್ಬರು ವಿನಂತಿಸಿದರೂ ಪೊಲೀಸರು ಅವಕಾಶ ನೀಡದೇ ಮರಳಿ ಕಳುಹಿಸಿದ ಘಟನೆ ಭಾನುವಾರ ನಡೆಯಿತು.
    ಅನುಮತಿ ಹೊಂದಿದ ವಾಹನಗಳು, ಡಿಸಿ ಹಾಗೂ ಎಸ್ಪಿ ಪರವಾನಗಿ ನೀಡಿದವರಿಗೆ ಮಾತ್ರ ಚೆಕ್‌ಪೋಸ್ಟ್‌ನಲ್ಲಿ ಬಿಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

    ವಾಹನಗಳ ವಶ

    ಭಾನುವಾರ ಅನಾವಶ್ಯಕವಾಗಿ ನಿಡಗುಂದಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಿದ್ದ ನಾಲ್ಕು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ಸಿ.ಬಿ. ಚಿಕ್ಕೊಂಡ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts