More

    ಅಕ್ಷಯ ತೃತೀಯ; ಉಡುಪಿಯಲ್ಲಿ ಖರೀದಿ ಜೋರು

    ಉಡುಪಿ: ಅಕ್ಷಯ ತೃತೀಯ ದಿನ ಚಿನ್ನ ಅಥವಾ ಬೆಳ್ಳಿಯ ವಸ್ತುಗಳನ್ನು ಖರೀದಿಸುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿರುವುದರಿಂದ ಶುಕ್ರವಾರ ಜಿಲ್ಲೆಯ ವಿವಿಧ ಚಿನ್ನಾಭರಣ ಮಳಿಗೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು.

    ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಚಿನ್ನಾಭರಣ ಮಳಿಗೆಗಳಲ್ಲಿ ಗ್ರಾಹಕರಿಗೆ ವಿಶೇಷ ನೀಡಲಾಗಿತ್ತು. ಮೇಕಿಂಗ್​ ಚಾರ್ಜ್ನಲ್ಲಿ ದರ ಕಡಿತ ಸೇರಿದಂತೆ ಬಹಳಷ್ಟು ಆಕರ್ಷಣಿಯ ಕೊಡುಗೆಗಳಿದ್ದವು. ಚಿನ್ನಾಭರಣ ಮಳಿಗೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಗ್ರಾಹಕರಿಗೆ ಹಲವು ಅನುಕೂಲತೆಗಳನ್ನು ಒದಗಿಸಿಕೊಡಲಾಗಿದೆ. ಶುಕ್ರವಾರ ಮುಂಜಾನೆಯಿಂದ ತಡರಾತ್ರಿವರೆಗೂ ಚಿನ್ನಾಭರಣ ಮಳಿಗೆಗಳು ತೆರೆದುಕೊಂಡಿದ್ದವು. ಶುಕ್ರಮೌಢ್ಯದ ಕಾರಣ ಮದುವೆ ಸಮಾರಂಭಗಳು ನಡೆಯದೇ ಇರುವುದರಿಂದ ವಿವಾಹದ ಖರೀದಿಗಳು ಕಡಿಮೆಯಾಗಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts