ವಿಜಯವಾಣಿ ಸುದ್ದಿಜಾಲ ಗದಗ
ಏಡ್ಸ್ ತಡೆಗಟ್ಟಲು ಸಮುದಾಯದ ಸಹಭಾಗಿತ್ವ ಅವಶ್ಯಕ ಎಂದು ವಿಧಾನ ಪರಿಷತ್ ಸದಸ್ಯ ಎಸ್. ವಿ. ಸಂಕನೂರ ತಿಳಿಸಿದರು.
ನಗರದ ಜೆ.ಟಿ.ಕಾಲೇಜ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮುದಾಯ ಜಾಗೃತವಾಗಿ ಮುಂದಾಳತ್ವ ವಹಿಸಿ ಜಾಗೃತಿಯನ್ನು ಮೂಡಿಸಿ ಏಡ್ಸ್ರೋಗ ಹರಡುತ್ತಿರುವ ಪ್ರಮಾಣವನ್ನು ಸೊನ್ನೆಗೆ ಇಳಿಸಿದಾಗ ಮಾತ್ರ ಈ ದಿನಾಚರಣೆಯ ಉದ್ದೇಶ ರ್ಪೂಣಗೊಳ್ಳುತ್ತದೆ. ಹೆಚ್ಚು ತಪಾಸಣೆ ಮಾಡಿ ಸೋಂಕಿತರಿಗೆ ಸೌಲಭ್ಯ ನೀಡಬೇಕು. ಸ್ವ ಉದ್ಯೋಗ ಹೊಂದಿ ಆಥಿರ್ಕ ಸಬಲರನ್ನಾಗಿ ಮಾಡಬೇಕು ಎಂದು ಎಸ್.ವಿ.ಸಂಕನೂರ ಹೇಳಿದರು
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದಶಿರ್ ಕೆ. ಗುರುಪ್ರಸಾದ ಮಾತನಾಡಿ, ಏಡ್ಸ್ ನಿಯಂತ್ರಣದಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ. ಯುವಕರು ಕಾಲೇಜ ವಿದ್ಯಾಥಿರ್ಗಳು, ಗ್ರಾಮೀಣ ಜನತೆಗೆ ತಿಳುವಳಿಕೆ ಮೂಡಿಸಿ, ಎಚ್ಚ್ಐವಿ ಮುಕ್ತ ಸಮಾಜ ನಿರ್ಮಾಣ ಮಾಡಲು ಕೈ ಜೋಡಿಸಬೇಕು. ಸಮಾಜದಲ್ಲಿ ಎಚ್ಐವಿ ಸೋಂಕಿತರಿಗೆ ಮತ್ತು ಬಾಧಿತರರಿಗೆ ಆಗುವ ಅಸಮಾನತೆಯನ್ನು ತೊಲಗಿಸಲು ಮುಂದಾಗಬೇಕು. ನೋಂದವರಿಗೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕಣಿರ್ ಪ್ರಾಸ್ತಾವಿಕವಾಗಿ ಮಾತನಾಡಿ, ಎಚ್ಐವಿ ಸೋಂಕಿನ ಪ್ರಮಾಣ ಕಳೆದ ಹತ್ತು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದರೆ ಗಣನೀಯವಾಗಿ ಇಳಿಕೆ ಕಂಡುಬಂದಿದೆ. ಇದು ಇಲಾಖೆಯ ಹಲವಾರು ತಿಳುವಳಿಕೆ ಕಾರ್ಯಕ್ರಮಗಳು ಹಾಗೂ ಜಾಗೃತಿ ಜಾಥಾಗಳು ಕಾರಣವಾಗಿದೆ. ಎಚ್ಐವಿ ಮತ್ತು ಏಡ್ಸ್ಗೆ ಬಹಳಷ್ಟು ಅಂತರವಿದ್ದು, ಎಚ್ಐವಿ ಸೋಂಕಿತರು ಭಯಪಡುವ ಅಗತ್ಯವಿಲ್ಲ. ಆಪ್ತಸಮಾಲೋಚಕರಿಂದ ನೈತಿಕ ಬೆಂಬಲ ಮಾನಸಿಕ ಬೆಂಬಲವನ್ನು ಪಡೆದು ಇತರರಂತೆ ಸಾಮಾನ್ಯ ಜೀವನ ನಡೆಸ ಬಹುದು ಎಂದರು. ದೇಶದಲ್ಲಿ 25 ಲ ಸೋಂಕಿತರಿದ್ದು, ರಾಜ್ಯದಲ್ಲಿ 2.5 ಲಕ್ಷ ಜನ ಸೋಂಕಿತರಿದ್ದಾರೆ.
ನೀಲಮ್ಮ ಸುರಪ್ಪಗೌಡರ, ಅರವಿಂದ ಕೊಪ್ಪಳ, ಮಂಜುನಾಥ ಅಂಗಡಿ, ಪ್ರೊ. ಕೌಲಗಿ, ಡಾ. ಬಿ. ಸಿ. ಕರಿಗೌಡರ, ಡಾ. ಎಸ್. ಎಸ್.ನೀಲಗುಂದ, ಬಸವರಾಜ ಲಾಳಗಟ್ಟಿ ಇತರರು ಇದ್ದರು.