ಮುಂಬೈ: ಬಾಲಿವುಡ್ನಲ್ಲಿ ಸಾಕಷ್ಟು ಬಯೋಪಿಕ್ಗಳಾಗುತ್ತಿವೆ. ಅದರಲ್ಲೂ ಐತಿಹಾಸಿಕ ಹಿನ್ನೆಲೆಯುಳ್ಳ ಕಥೆಗಳಂತೂ ನಿರ್ಮಾಪಕರ ಅಚ್ಚುಮೆಚ್ಚು. ಆದರೆ, ಈ ರಾಜನ ಕಥೆ ಮಾತ್ರ ಬಾಲಿವುಡ್ನ ಸ್ಟಾರ್ ನಟರಿಗೆ ಇಷ್ಟವಾಗುತ್ತಿಲ್ಲ. ನಾನೊಲ್ಲೆ ನಾನೊಲ್ಲೆ ಎಂದು ಹಿಂಜರಿಯುತ್ತಿದ್ದಾರೆ.
ಇದನ್ನೂ ಓದಿ: ತೆರೆಯ ಮೇಲೆ ರೈತ ಸಂಘರ್ಷ, ‘ಕೊಳಗ’
ಹೌದು, ಹಿಂದು ರಾಜ ಸುಹೇಲ್ದೇವ್ ರಾಜಭರ್ ಅವರ ಜೀವನವನ್ನು ಬಾಲಿವುಡ್ನಲ್ಲಿ ಸಿನಿಮಾ ಮಾಡಬೇಕೆಂದು ಅಶ್ವಿನ್ ವರ್ದೆ ನಿರ್ಧರಿಸಿದ್ದರು. ಅದರಂತೆ ಬಾಲಿವುಡ್ನ ಹಲವು ಸ್ಟಾರ್ ನಟರಿಗೆ ಅಪ್ರೋಚ್ ಸಹ ಮಾಡಲಾಗಿತ್ತು. ಆದರೆ, ಒಬ್ಬರ ಹಿಂದೊಬ್ಬರಂತೆ ಈ ಕಥೆಯನ್ನು ನಿರಾಕರಿಸುತ್ತಿದ್ದಾರೆ.
ಈ ಮೊದಲು ಅಜಯ್ ದೇವಗನ್ಗೆ ಈ ಸಿನಿಮಾದ ಸಲುವಾಗಿ ಇಡೀ ತಂಡ ಭೇಟಿ ಮಾಡಿ ಕಥೆ ಹೇಳಿ ಬಂದಿತ್ತು. ಅವರು ತಿರಸ್ಕ್ರರಿಸಿದ ಬಳಿಕ ಅದೇ ಕಥೆ ಅಕ್ಷಯ್ ಅವರ ಬಳಿ ಬಂದಿತ್ತು. ಅವರೂ ಸಹ ಸಿನಿಮಾ ಮಾಡಲ್ಲ ಎಂದು ಹೇಳಿದ್ದಾರೆ.
ಚಿತ್ರದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳುವಂತೆ ಅಕ್ಷಯ್ ಹೇಳಿದ ಹಿನ್ನೆಲೆಯಲ್ಲಿ, ಅದು ನಿರ್ಮಾಪಕರಿಗೆ ಸರಿಯೆನಿಸಿಲ್ಲ. ಅಷ್ಟೇ ಅಲ್ಲ, ಸಾಲು ಸಾಲು ಸಿನಿಮಾಗಳಲ್ಲಿ ಅಕ್ಷಯ್ ಬಿಜಿಯಾಗಿರುವುದರಿಂದ ಸಿನಿಮಾದಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ಬೇರೆಯವರ ಹುಡುಕಾಟದಲ್ಲಿದ್ದಾರೆ. ಶೀಘ್ರದಲ್ಲಿ ದೊಡ್ಡ ಹೆಸರನ್ನೇ ಘೋಷಣೆ ಮಾಡಲಿದ್ದಾರಂತೆ ನಿರ್ಮಾಪಕರು.
ಇದನ್ನೂ ಓದಿ: ‘ಮದಗಜ’ ಚಿತ್ರದ ತೆಲುಗು ಟೀಸರ್ ರೆಡಿ; ಹಿನ್ನೆಲೆ ಧ್ವನಿ ನೀಡಿದ ಶ್ರೀಮುರಳಿ
ಅಂದಹಾಗೆ ಸುಹೇಲ್ದೇವ್ ಶ್ರಾವಸ್ತಿಯ ರಾಜ. ಶ್ರಾವಸ್ತಿ ಈಗಿನ ಉತ್ತರ ಪ್ರದೇಶ ರಾಜ್ಯದಲ್ಲಿದೆ. ಸುಹೇಲ್ದೇವ್ 1034ರಲ್ಲಿ ಘಾಜಿ ಸಯ್ಯದ್ ಸಲಾರ್ ಅಸೂದ್ನನ್ನು ಯುದ್ಧದಲ್ಲಿ ಹತ್ಯೆ ಮಾಡಿದ್ದ. ಈ ಹಿನ್ನೆಲೆಯನ್ನೇ ಅಶ್ವಿನ್ ವರ್ದೆ ಸಿನಿಮಾ ಮಾಡುತ್ತಿದ್ದಾರೆ. (ಏಜೆನ್ಸೀಸ್)