More

    ವರದಕ್ಷಿಣೆ ಕಿರುಕುಳಕ್ಕೆ ಆಡೂರಿನ ಗೃಹಿಣಿ ಬಲಿ

    ಹಾನಗಲ್ಲ: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿಯೊಬ್ಬಳು ಬಲಿಯಾದ ಘಟನೆ ತಾಲೂಕಿನ ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

    ಅರಳೇಶ್ವರ ಗ್ರಾಮದ ಶ್ವೇತಾ ವಿಶ್ವನಾಥ ಚಿಕ್ಕೇರಿ (23) ಮೃತಪಟ್ಟ ಮಹಿಳೆ. 2020ರ ಜೂ. 15ರಂದು ಆಲದಕಟ್ಟಿ ಗ್ರಾಮದ ಶ್ವೇತಾಳನ್ನು ಅರಳೇಶ್ವರ ಗ್ರಾಮದ ವಿಶ್ವನಾಥ ಚಿಕ್ಕೇರಿ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ 50 ಗ್ರಾಂ ಬಂಗಾರದ ಆಭರಣಗಳು, ಒಂದು ಲಕ್ಷ ರೂಪಾಯಿಯನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ನಂತರದ ದಿನಗಳಲ್ಲಿ ಶ್ವೇತಾಗೆ ಪತಿ ವಿಶ್ವನಾಥ, ಅತ್ತೆ ಗೌರಮ್ಮ ವರದಕ್ಷಿಣೆಗಾಗಿ ಮಾನಸಿಕ, ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಹಲವು ಬಾರಿ ರಾಜಿ ಪಂಚಾಯಿತಿ ನಡೆದಿದ್ದವು. ಆದರೆ, ಮೃತಳ ಪತಿ ಕುಟುಂಬಸ್ಥರಿಂದ ಕಿರುಕುಳ ತಪ್ಪಿರಲಿಲ್ಲ ಎನ್ನಲಾಗಿದೆ.

    ಏ. 5ರಂದು ಮಧ್ಯಾಹ್ನ 1ರ ಸುಮಾರಿಗೆ ಶ್ವೇತಾಳನ್ನು ಕತ್ತು ಹಿಸುಕಿ ಕೊಲೆ ಮಾಡಿ, ನಂತರ ಫ್ಯಾನ್​ಗೆ ನೇಣು ಬಿಗಿದಿದ್ದಾರೆ ಎಂದು ಮೃತಳ ತಂದೆ ಉಮೇಶ ಗಿರಿಮಲ್ಲಪ್ಪ ಸಾಬಳದ ಅವರು ಆಡೂರು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್​ಪಿ ಒ.ಬಿ. ಕಲ್ಲೇಶಪ್ಪ, ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ಸಿಪಿಐ ಶಿವಶಂಕರ ಗಣಾಚಾರಿ, ಆಡೂರ ಪಿಎಸ್​ಐ ನೀಲಪ್ಪ ನರಲಾರ ಸ್ಥಳ ಪರಿಶೀಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts