More

    ಆಲ್ಬಂ ಹಾಡಿನಲ್ಲಿ ಮೇಘಶ್ರೀ ಮೋಡಿ; ಹೊಸ ಪ್ರತಿಭೆ ಅರುಣ್ ಚಂದ್ರಪ್ಪ ಜತೆ ಪ್ರೇಮಗೀತೆ

    ಬೆಂಗಳೂರು: ‘ಕೃಷ್ಣ ತುಳಸಿ’ ಖ್ಯಾತಿಯ ಮೇಘಶ್ರೀ ಇದೀಗ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಪ್ರತಿಭೆ ಅರುಣ್ ಚಂದ್ರಪ್ಪ ಜತೆಗೆ ಪ್ರೇಮಗೀತೆಯೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ‘ನಾನು ನಾನು ಪ್ರೀತಿಸುತ್ತಿರುವೆ… ನಿನ್ನೆ ನಿನ್ನೆ ಪ್ರೀತಿಸುತ್ತಿರುವೆ…’ ಹಾಡಿಗೆ, ಈ ಹಿಂದೆ ‘ತನಿಖೆ’ ಸಿನಿಮಾ ನಿರ್ದೇಶಿಸಿದ್ದ ಜಿ.ಎಸ್. ಕಲಿಗೌಡ ಸಾಹಿತ್ಯ ಬರೆದು, ನಿರ್ದೇಶನವನ್ನೂ ಮಾಡಿದ್ದಾರೆ. ಮಂಗಳೂರಿನ ಕಡಲ ಕಿನಾರೆಯಲ್ಲಿ ಚಿತ್ರೀಕರಿಸಲಾಗಿರುವ ಈ ಹಾಡಿನಲ್ಲಿ, ಸೌಂದರ್ಯಕ್ಕಿಂತ ಪ್ರೀತಿ ಮುಖ್ಯ ಎಂಬ ಸಂದೇಶ ನೀಡಿದ್ದಾರೆ.

    ಹಾಡಿನ ಬಗ್ಗೆ ಮಾಹಿತಿ ನೀಡುವ ನಟಿ ಮೇಘಶ್ರೀ, ‘ಇದು ನನ್ನ ಮೊದಲ ಆಲ್ಬಂ ಹಾಡು. ಕೇವಲ ಎರಡೇ ದಿನದಲ್ಲಿ ಚಿತ್ರೀಕರಣ ಮಾಡಿದ್ದೇವೆ. ತುಂಬ ಕಲರ್​ಫುಲ್ ಆಗಿ ಮೂಡಿಬಂದಿದೆ. ಪ್ರೀತಿಗೆ ಅಂದ ಚೆಂದ ಮುಖ್ಯವಲ್ಲ ಎಂಬುದು ಹಾಡಿನ ಸಾರಾಂಶ’ ಎನ್ನುತ್ತಾರೆ. ಮುರಳಿ ಮಾಸ್ಟರ್ ಹುಸೇನ್ ನೃತ್ಯ ನಿರ್ದೇಶನ ಮಾಡಿದ್ದು, ಕ್ರಿಸ್ಟೋಫರ್ ಜೈಸನ್ ಸಂಗೀತ ನೀಡಿದ್ದಾರೆ. ಧನು ಕೃಷ್ಣ ಸಂಕಲನದ ಹೊಣೆ ಹೊತ್ತಿದ್ದಾರೆ. ಶ್ಯಾಮ್ ಸಿಂಧನೂರು ಛಾಯಾಗ್ರಹಣ ಆಲ್ಬಂ ಹಾಡಿಗಿದೆ. ಡೈಮೆಂಡ್ ಟ್ರೀ ಮ್ಯೂಸಿಕ್ ಫ್ಯಾಕ್ಟರಿ ಎಂಬ ಆಡಿಯೋ ಸಂಸ್ಥೆ ಈ ಆಲ್ಬಂ ಹಾಡಿಗೆ ಬಂಡವಾಳ ಹೂಡಿದ್ದು, ಮಮತಾ ಶ್ರೀ ಇದರ ನಿರ್ಮಾಪಕರು.

    ಅಯೋಧ್ಯೆಯ ಬ್ರಹ್ಮರಥ ನಿರ್ಮಾಣಕ್ಕೆ ಇಂದು ಕುಂದಾಪುರದ ಕುಂಭಾಶಿಯಲ್ಲಿ ಚಾಲನೆ: ಶ್ರೀರಾಮನಿಗಾಗಿ ವಿಶ್ವದ ಅತಿ ಎತ್ತರದ ರಥ

    2 ದಿನಗಳ ಹಿಂದೆ ನಾಪತ್ತೆಯಾಗಿದ್ದ ದಾಯಾದಿ ಸಹೋದರಿಯರ ಶವ ಬಾವಿಯಲ್ಲಿ ಪತ್ತೆ; ಸಾವಿನ ಸುತ್ತ ಮೂಡಿವೆ ಹಲವು ಅನುಮಾನಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts