ಬೆಂಗಳೂರು: ನಟಿ ಜಯಮಾಲಾ 80ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚಿದ್ದರು. ತಳು, ತಮಿಳು ಮತ್ತು ಹಿಂದಿ ಸಿನಿಮಾದಲ್ಲಿ ಮಿಂಚಿದ್ದ ಈ ನಟಿ ಇದೀಗ ರಾಜಕೀಯಲ್ಲಿ ಗುರುತಿಸಿಕೊಂಡಿದ್ದಾರೆ. ವೈಯಕ್ತಿಕ ಜೀವದಲ್ಲಿ ಬಂದಿದ್ದ ಸಮಸ್ಯೆಗಳನ್ನೆಲ್ಲ ಮೆಟ್ಟಿನಿಂತು ಇಂದು ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಳ್ಳುವ ಮೂಲಕವಾಗಿ ಅನೇಕರಿಗೆ ಮಾದರಿಯಾಗಿ ನಿಂತಿದ್ದಾರೆ.
ಜಯಮಾಲಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ಚಿತ್ರನಟಿ. ಗಿರಿಕನ್ಯೆ,ಶಂಕರಗುರು,ಪ್ರೇಮದ ಕಾಣಿಕೆ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಟಿಸದ್ದಾರೆ. ಕನ್ನಡದ ಮೇರು ನಟರಾದ ಡಾ ವಿಷ್ಣುವರ್ಧನ್, ಅಂಬರೀಷ್, ಶಂಕರ್ನಾಗ್, ಅನಂತ್ನಾಗ್, ಟೈಗರ್ ಪ್ರಭಾಕರ್ ಅವರುಗಳೊಂದಿಗೆ ಕೂಡ ಜಯಮಾಲಾ ನಾಯಕಿಯಾಗಿ ನಟಿಸಿ ಜನಮೆಚ್ಚುಗೆ ಪಡೆದಿದ್ದಾರೆ. ರೆಬೆಲ್ ಪಾತ್ರಗಳನ್ನು ಹೆಚ್ಚಾಗಿ ಮಾಡಿರುವ ನಟಿ ಜಯಮಾಲಾ ನಿಜ ಜೀವನದಲ್ಲಿ ಕೂಡ ತಮ್ಮ ನೇರ ನಡೆ-ನುಡಿಗೆ ಹೆಸರುವಾಸಿ.
ನಟಿ ಜಯಮಾಲಾ ‘ಭೂತಯ್ಯನ ಮಗ ಅಯ್ಯು’ ಸಿನಿಮಾದಲ್ಲಿನ ಸಣ್ಣ ಪಾತ್ರದ ಮೂಲಕ ಕನ್ನಡ ಸಿನಿರಂಗಕ್ಕೆ ಪಾದರ್ಪಣೆ ಮಾಡಿದರು. ತಮ್ಮ ನಟನೆ ಮತ್ತು ಸೌಂದರ್ಯದಿಂದ ಜನರ ಮನಗೆದ್ದ ನಟಿ ಜಯಮಾಲಾ 80-90ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾದರು. ಸಿನಿಮಾದಲ್ಲಿ ಸಕ್ರಿಯವಾಗಿದ್ದಾಗಲೇ ನಟ ಪ್ರಭಾಕರ್ ಕೂಡಾ ಒಳ್ಳೆಯ ಹೆಸರು ಮಾಡಿದ್ದರು.
1985ರಲ್ಲಿ ಇಬ್ಬರು ಪ್ರೀತಿಸಿ ಮದುವೆ ಕೂಡಾ ಆಗುತ್ತಾರೆ. ಸೌಂದರ್ಯ ಅವರಿಗೆ ಜಯಮಾಲಾ ಅವರು ಜನ್ಮ ನೀಡುತ್ತಾರೆ. ಆದರೆ ಆದೇನಾಯ್ತೋ ಗೊತ್ತಿಲ್ಲ ಈ ಜೋಡಿ ಸಡನ್ ಆಗಿ ದೂರವಾಗುತ್ತದೆ. 1988ರಲ್ಲಿ ವಿಚ್ಛೇದನ ಪಡೆದು ಕೊಳ್ಳುತ್ತಾರೆ. ಈ ಸುದ್ದಿ ಸ್ಯಾಂಡಲ್ವುಡ್ನಲ್ಲಿ ದೊಡ್ಡಮಟ್ಟದ ಸುದ್ದಿಯಾಗಿತ್ತು. ಆದ್ರೆ ಈ ಸುದ್ದಿಯ ಬೆನ್ನಲ್ಲೆ ಜಯಮಾಲಾ ಮತ್ತೆ ಮದುವೆ ಆಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು.
1990ರಲ್ಲಿ ತಮಗಿಂತ 11 ವರ್ಷ ಚಿಕ್ಕವರಾದ ಎಚ್.ಎಮ್ ರಾಮಚಂದ್ರ ಜೊತೆ ಎರಡನೇ ಮದುವೆಯಾದರು ಎಂಬ ವದಂತಿ ಹರಡಿತು. ಎಚ್.ಎಮ್ ರಾಮಚಂದ್ರ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಎಚ್.ಎಮ್ ರಾಮಚಂದ್ರ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಹೆಚ್ಎಂ ರಾಮಚಂದ್ರ ಅವರನ್ನು ಮದುವೆಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಜಯಮಾಲ ಆವರ ಪುತ್ರಿ ಸೌಂದರ್ಯ ಜಯಮಾಲ ಅವರು ಸಿನಿಮಾಗಳಲ್ಲೂ ನಟಿಸಿದ್ದಾರೆ.
ಪರಭಾಷೆಯ ಸಿನಿಮಾಗಳಲ್ಲಿಯೂ ನಟಿಸಿ ಖಾತಿ ಪಡೆದ ಜಯಮಾಲಾ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಸಚಿವೆಯಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಸೇವೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡುವತ್ತ ನಟಿ-ರಜಕಾರಣಿ ಜಯಮಾಲಾ ಸಕ್ರಿಯರಾಗಿದ್ದಾರೆ. ಮದುವೆ-ಸಂಸಾರಗಳಲ್ಲಿ ಸಮಸ್ಯೆಗಳು ಬಂದರೂ ಅವೆಲ್ಲವನ್ನೂ ಧೈರ್ಯವಾಗಿ ಎದುರಿಸಿ ಹಲವರಿಗೆ ಮಾದರಿಯಾಗಿದ್ದಾರೆ ಜಯಮಾಲಾ.
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮೂಲಕ ಆಡಳಿತದಲ್ಲಿದ್ದ ಸರ್ಕಾರದ ಭಾಗವಾಗಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಖಂಜಾಂಚಿಯಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಇವರು ಗ್ರಾಮೀಣ ಭಾಗದಲ್ಲಿನ ಮಹಿಳೆಯರ ಪುನರ್ವಸತಿ ಮೇಲೇ ಪ್ರಬಂಧ ಬರೆದು ಡಾಕ್ಟರೇಟ್ ಪಡೆದಿದ್ದಾರೆ. 2008 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಡಾ. ಅಬ್ಡುಲ್ ಕಲಾಂ ಇವರಿಗೆ ಡಾಕ್ಟರೇಟ್ ಪ್ರಧಾನ ಮಾಡಿದರು.
ಕೈನೋವಿನಲ್ಲೂ ಅಂತಿಮ ದರ್ಶನಕ್ಕೆ ಬಂದ ಡಿಬಾಸ್; ದರ್ಶನ್ ಕೈ ಹಿಡಿದು ಬಿಕ್ಕಿ ಬಿಕ್ಕಿ ಅತ್ತ ಸೌಂದರ್ಯ ಜಗದೀಶ್ ಪತ್ನಿ