More

    ಭಾರತದಿಂದ ಹೊರಹೋಗುವ ಹಾಗಿಲ್ಲ ನಟಿ ಜಾಕ್ವೆಲಿನ್ ಫೆರ್ನಾಂಡಿಸ್; ವಿಮಾನ ನಿಲ್ದಾಣದಿಂದ ಮನೆಗೆ ವಾಪಸ್!

    ಮುಂಬೈ: ಶ್ರೀಲಂಕಾದ ಮಿಸ್ ಯುನಿವರ್ಸ್, ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡಿಸ್ ಕಳೆದ ಒಂದು ವಾರದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಜಾಕ್ವೆಲಿನ್ ಮತ್ತು 200 ಕೋಟಿ ರೂ. ವಂಚಕ ಸುಕೇಶ್ ಚಂದ್ರಶೇಖರ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರೂ ಒಬ್ಬರಿಗೊಬ್ಬರು ಮುತ್ತು ಕೊಡುತ್ತಿರುವ ಫೋಟೋಗಳು ಸದ್ಯ ನೆಟ್ಟಿಗರ ಹಾಟ್ ಟಾಪಿಕ್ ಎನ್ನಬಹುದು. ಜೊತೆಗೆ, ಈಗ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಭಾರತ ದೇಶ ಬಿಟ್ಟು ಹೋಗಲು ಸಾಧ್ಯವಿಲ್ಲ ಎನ್ನಲಾಗಿದೆ.

    ಅಂದಹಾಗೆ, ಜಾಕ್ವೆಲಿನ್ ವಂಚಕ ಸುಕೇಶ್ ಚಂದ್ರಶೇಖರ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದಕ್ಕೆ ಸಿಕ್ಕಿರೋ ಸುಳಿವೇ ವೈರಲ್ ಫೋಟೋಗಳು. ವಂಚಕ ಸುಕೇಶ್ ಚಂದ್ರಶೇಖರ್ ಹಲವು ಸೆಲೆಬ್ರಿಟಿಗಳಿಗೆ, ರಾಜಕಾರಣಿಗಳಿಗೆ ಮತ್ತು ಉದ್ಯಮಿಗಳಿಗೆ ಬೆದರಿಕೆ ಹಾಕಿ ಕೋಟಿ ಕೋಟಿ ರೂಪಾಯಿ ಸುಲಿಗೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ವಂಚಕ ಸುಕೇಶ್ ಜೂನ್ ತಿಂಗಳಲ್ಲಿ ಜೈಲು ಸೇರಿದ್ದಾಗ ಕೂಡ ಸುಕೇಶ್ ಜೊತೆ ನಟಿ ಡೇಟಿಂಗ್ ಮಾಡ್ತಿರೋದಾಗಿ ಸುದ್ದಿ ಹಬ್ಬಿತ್ತು. ಆದರೆ ಈ ಸುದ್ದಿಗಳನ್ನು ಜಾಕ್ವೆಲಿನ್ ನಿರಾಕರಿಸಿದರು.

    ಅಷ್ಟರಲ್ಲಿ ಸದ್ಯ ವೈರಲ್ ಆಗುತ್ತಿರುವ ಪೋಟೋಗಳು ಮತ್ತೆ ನಟಿಯನ್ನು ಸಂಕಷ್ಟಕ್ಕೆ ದೂಡಿದೆ ಎಂದು ಹೇಳಬೇಕು. ಇನ್ನು, ಈಗ 200 ಕೋಟಿ ರೂ. ವಂಚನೆ ಕೇಸ್​​ನಲ್ಲಿ ಜಾರಿ ನಿರ್ದೇಶನಾಲಯ ಸುಕೇಶ್, ಆತನ ಪತ್ನಿ ಲೀನಾ ಮತ್ತು ಇತರ ಆರು ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ವೈರಲ್ ಆದ ಫೋಟೋಗಳಿಂದ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಹೆಸರು ಮತ್ತೆ ಕೇಳಿಸುತ್ತಿದ್ದು, ಅವರಿಗೆ ಸುಕೇಶ್​​ನಿಂದ ಅರೇಬಿಯನ್ ಕುದುರೆ ಸೇರಿ 10 ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ಉಡುಗೊರೆಗಳು ಲಭಿಸಿವೆ ಎಂಬ ಮಾಹಿತಿ ಸಹ ಹೊರ ಬಿದ್ದಿದೆ.
    ಈ ಹಿಂದೆಯೇ 7 ಗಂಟೆಗೂ ಹೆಚ್ಚು ಸಮಯ ಜಾಕ್ವೆಲಿನ್ ಫೆರ್ನಾಂಡಿಸ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿತ್ತು.

    ಇದೀಗ, ನಟಿಗೆ ವಂಚಕ ಸುಕೇಶ್​​ನಿಂದ ಲಭಿಸಿರುವ ಉಡುಗೊರೆಗಳ ಮಾಹಿತಿಯಿಂದ ಮತ್ತು ವೈರಲ್ ಆಗುತ್ತಿರುವ ಫೋಟೋಗಳನ್ನು ಆಧರಿಸಿ ಪೂರ್ತಿ ವಿಚಾರಣೆ ನಡೆಯುವವರೆಗೆ ನಟಿ ದೇಶ ಬಿಟ್ಟು ಹೋಗುವ ಹಾಗಿಲ್ಲ ಎಂದು ಸುತ್ತೋಲೆ ಹೊರಡಿಸಿದೆ. ಸದ್ಯ ಜಾಕ್ವೆಲಿನ್ ಫೆರ್ನಾಂಡಿಸ್ ದಿಯುನಲ್ಲಿನ ‘ರಾಮ್ ಸೇತು’ ಚಿತ್ರದ ಶೂಟಿಂಗ್‌ನಿಂದ ಹಿಂದಿರುಗಿದ್ದು, ಡಿಸೆಂಬರ್ 10ರಂದು ರಿಯಾದ್‌ನಲ್ಲಿ ನಡೆಯಲಿರುವ ನಟ ಸಲ್ಮಾನ್ ಖಾನ್ ಅವರ ದಬಾಂಗ್ ಸಿನಿಮಾ ಪ್ರವಾಸದಲ್ಲಿ ಭಾಗವಹಿಸಬೇಕಿದೆ. ಆದರೆ, ಅದಕ್ಕೂ ಮುನ್ನವೇ ಮುಂಬೈ ನಿಲ್ದಾಣದಲ್ಲಿ ಕಾಣಿಸಿಕೊಂಡ ಜಾಕ್ವೆಲಿನ್ ಅವರನ್ನು ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ತಡೆದು ನಟಿಯನ್ನು ಮನೆಗೆ ವಾಪಸ್ ಕಳುಹಿಸಿದ್ದಾರೆ. ಜಾರಿ ನಿರ್ದೇಶನಾಲಯದ ಸುತ್ತೋಲೆಯಂತೆ ವಿಮಾನ ನಿಲ್ದಾಣದ ಭದ್ರತಾ ಪಡೆಗಳು ಈ ಕೆಲಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ನಾಳೆ ಏನಾಗಬಹುದು ಅಲ್ಲಿ..!? ಎಂಬ ಕುತೂಹಲ ಹುಟ್ಟಿಸಿದೆ ಕೃಷ್ಣ ಜನ್ಮಭೂಮಿ; ಪೂರಕವೆಂಬಂತೆ ಟ್ರೆಂಡಿಂಗ್​ನಲ್ಲಿ ಮಥುರಾ!

    ಡಾ.ರಾಜ್​ ಸಿನಿಮಾ ಹೆಸರಲ್ಲೊಂದು ಕನಸು, ಪಾರ್ವತಮ್ಮನವರ ಜನ್ಮದಿನದಂದು ನನಸು: ಡಿ. 6ರಂದು ಅಪ್ಪು ರೋಮಾಂಚಕ ಅನುಭವದ ಝಲಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts