More

    ಮಾತು ತಪ್ಪದ ಯಶ್; ಪ್ರಕಾಶ್ ರೈ ಜತೆ ನಿಂತ ಯಶೋಮಾರ್ಗ, ಕೆವಿಎನ್ ಫೌಂಡೇಷನ್

    ಬೆಂಗಳೂರು: ಕಳೆದ ಶುಕ್ರವಾರ ನಡೆದ ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ನಟ ಯಶ್, ‘ಅಪು್ಪ ಎಕ್ಸ್ ಪ್ರೆಸ್’ ಆಂಬುಲೆನ್ಸ್​ಗಳನ್ನು ನೀಡುವ ಬಗ್ಗೆ ವೇದಿಕೆಯ ಮೇಲೆ ಹೇಳಿದ್ದರು. ಹಾಗಂತ ಯಶ್ ಅಷ್ಟಕ್ಕೆ ಸುಮ್ಮನಾಗಿಲ್ಲ. ತಮ್ಮ ಯಶೋಮಾರ್ಗ ತಂಡ ಹಾಗೂ ಕೆವಿಎನ್ ಫೌಂಡೇಷನ್​ನ ಕೋನ ವೆಂಕಟ್ ಜತೆ ಈಗಾಗಲೇ ಆಂಬುಲೆನ್ಸ್​ಗಳ ಕುರಿತು ರ್ಚಚಿಸಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲದೇ ಪ್ರಕಾಶ್ ರೈ ಅವರ ಬಳಿಯೂ ಆಂಬುಲೆನ್ಸ್​ನಲ್ಲಿ ಏನೆಲ್ಲಾ ಸೌಲಭ್ಯಗಳು ಇರಬೇಕು, ಹೇಗಿರಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಯಶ್ ಆಪ್ತ ಮೂಲಗಳಿಂದ ಮಾಹಿತಿ ದೊರೆತಿದೆ.

    ಅತಿ ಶೀಘ್ರದಲ್ಲಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಿಗೂ ಆಂಬುಲೆನ್ಸ್ ನೀಡಲು ತಯಾರಿ ನಡೆಸಿದ್ದಾರೆ. ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಯಶ್, ‘ಅಪ್ಪು ಹೆಸರಲ್ಲಿ ಆಂಬುಲೆನ್ಸ್ ಸೇವೆ ಪ್ರಾರಂಭಿಸಿದ್ದೀರ. ನನ್ನದೂ ಯಶೋಮಾರ್ಗ ಫೌಂಡೇಷನ್ ಇದೆ. ಜತೆಗೆ ಕೆವಿಎನ್ ಫೌಂಡೇಷನ್​ನ ಕೋನ ವೆಂಕಟ್ ಅವರ ಜತೆ ಮಾತನಾಡಿದ್ದೇನೆ. ಉಳಿದ ಎಲ್ಲ ಜಿಲ್ಲೆಗಳಿಗೂ ಆಂಬುಲೆನ್ಸ್ ನಾವು ಕೊಡುತ್ತೇವೆ. ಕೆಲಸ ನಿಲ್ಲಬಾರದು, ತಕ್ಷಣ ಆಗಬೇಕು. ಯಾಕೆಂದರೆ ಅಪ್ಪು ವ್ಯಕ್ತಿ ಅಲ್ಲ, ಶಕ್ತಿ. ಇನ್ನು ಎಷ್ಟು ಆಂಬುಲೆನ್ಸ್ ಬೇಕೋ, ನಾವು ಕೊಡುತ್ತೇವೆ’ ಎಂದಿದ್ದರು.

    ಅವರ ಮಾತು ಕೇಳಿ ತಕ್ಷಣ ವೇದಿಕೆಗೆ ಓಡಿಬಂದ ನಟ ಪ್ರಕಾಶ್ ರೈ, ಯಶ್​ ಅವರನ್ನು ಅಪ್ಪಿ ಧನ್ಯವಾದ ತಿಳಿಸಿದರು. ಕಳೆದ ಆಗಸ್ಟ್ 6ರಂದು ಪ್ರಕಾಶ್ ರೈ, ಮೈಸೂರಿನ ಆಸ್ಪತ್ರೆಗೆ ಒಂದು ಆಂಬುಲೆನ್ಸ್ ನೀಡಿದ್ದರು. ಬಳಿಕ ನಟ ಶಿವರಾಜಕುಮಾರ್ ಸಹ ಒಂದು ಆಂಬುಲೆನ್ಸ್ ನೀಡಿದ್ದರು. ಈ ವಿಷಯ ತಿಳಿದು ತೆಲುಗು ನಟ ಚಿರಂಜೀವಿ, ತಮಿಳು ನಟ ಸೂರ್ಯ ಕೂಡ ತಲಾ ಒಂದು ಆಂಬುಲೆನ್ಸ್ ನೀಡಿದ್ದಾರೆ. ಹೀಗೆ ಸದ್ಯ ಐದು ಆಂಬುಲೆನ್ಸ್​ಗಳ ವ್ಯವಸ್ಥೆಯಾಗಿದ್ದು, ಉಳಿದ 26 ಆಂಬುಲೆನ್ಸ್ ಗಳನ್ನು ಯಶ್ ಮತ್ತು ನಿರ್ಮಾಪಕ ಕೋನ ವೆಂಕಟ್ ನಾರಾಯಣ್ ನೀಡಲು ಮುಂದಾಗಿದ್ದಾರೆ.

    ‘ಕಾಂತಾರ’ದಿಂದ ಮತ್ತೊಂದು ದಾಖಲೆ: ಇದುವರೆಗೂ ಕನ್ನಡ ಸಿನಿಮಾ ಬಿಡುಗಡೆ ಆಗದ ಪಟ್ಟಣದಲ್ಲಿ ಪ್ರದರ್ಶನ!

    ದೀಪಾವಳಿ ಸಂದರ್ಭ ಬೈಗುಳಕ್ಕೆ ಒಳಗಾಗ್ತಿದ್ದ ಕೊಹ್ಲಿಗೆ ಈ ಬಾರಿ ಭರ್ಜರಿ ಪ್ರಶಂಸೆ; ಬೈದವರೇ ಹೊಗಳುತ್ತಿದ್ದಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts