ಬೆಂಗಳೂರು: ‘ನೇತ್ರದಾನ ಮಹಾದಾನ’ ಎಂಬ ಮಾತಿಗೆ ಬದ್ಧವಾಗಿ ನಡೆದುಕೊಂಡಿದ್ದರು ವರನಟ ಡಾ. ರಾಜಕುಮಾರ್. ಹೇಳಿದಂತೆ ತಮ್ಮ ಕಣ್ಣುಗಳನ್ನು ದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದರು. ಇದೀಗ ಅದೇ ಹಾದಿಯಲ್ಲಿ ಡಾ. ರಾಜ್ ಅವರ ಹಿರಿಮಗ ಶಿವರಾಜ್ಕುಮಾರ್ ಸಹ ತಮ್ಮ ಕಣ್ಣುಗಳನ್ನು ದಾನ ಮಾಡುವುದಕ್ಕೆ ಮುಂದಾಗಿದ್ದಾರೆ.
ಇತ್ತೀಚೆಗಷ್ಟೇ ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಕನ್ನಡದ ‘ಅಕ್ಷಿ’ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಆ ಸಂಭ್ರಮವನ್ನು ಹಂಚಿಕೊಳ್ಳಲು ಮಂಗಳವಾರ ನಗರದ ನಾರಾಯಣ ನೇತ್ರಾಲಯದಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಣಾನಂತರ ಕಣ್ಣುಗಳನ್ನು ದಾನ ಮಾಡುವ ಬಗ್ಗೆ ಶಿವರಾಜಕುಮಾರ್ ಘೋಷಣೆ ಮಾಡಿದರು. ನೇತ್ರದಾನದ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ, ಇತರರಿಗೂ ನೇತ್ರದಾನ ಮಾಡುವಂತೆ ಮನವಿ ಮಾಡಿದರು.
ಇನ್ನು ‘ಕವಚ’ ಸಿನಿಮಾದಲ್ಲಿ ಅಂಧನಾಗಿ ಶಿವಣ್ಣ ನಟಿಸಿದ್ದರು. ಆ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ದೇಹದಾನ ಮಾಡುವ ಬಗ್ಗೆಯೂ ಶಿವರಾಜ್ಕುಮಾರ್ ಹೇಳಿದ್ದರು. ಇದೀಗ ಕಣ್ಣುಗಳನ್ನೂ ದಾನ ಮಾಡುವುದಾಗಿ ಘೋಷಿಸಿದ್ದಾರೆ. 1994ರಲ್ಲಿ ಡಾ. ರಾಜ್ ನೇತ್ರ ಬ್ಯಾಂಕ್ ತೆರೆದಿದ್ದರು. 2006ರಲ್ಲಿ ಅವರ ಮರಣಾನಂತರ ಕಣ್ಣುಗಳನ್ನು ಅದೇ ಬ್ಯಾಂಕ್ಗೆ ದಾನ ಮಾಡಲಾಗಿತ್ತು.
ಏರ್ಪೋರ್ಟ್ನಲ್ಲಿ ಕ್ಯಾಬ್ ಚಾಲಕನಿಂದ ಆತ್ಮಹತ್ಯೆ ಯತ್ನ; ಕಾರಣದ ಸುಳಿವು ನೀಡಿತು ಚಾಲಕರ ಈ ಆಕ್ರೋಶ?
ಬೆಣ್ಣೆ ಕಾಫಿ ಕುಡಿದಿದ್ದೀರಾ?; ನೋಡಿ.. ಇಲ್ಲಿ ಇಪ್ಪತ್ತು ವರ್ಷಗಳಿಂದ ಸಿಗುತ್ತಿದೆ ‘ಬಟರ್ ಕಾಫಿ’..!