More

    ಕ್ಯಾನ್ಸರ್ ಗೆದ್ದುಬಂದ ಸಂಜಯ್ ದತ್

    ಮುಂಬೈ: ಎರಡು ತಿಂಗಳ ಹಿಂದೆಯಷ್ಟೇ, ಬಾಲಿವುಡ್ ನಟ ಸಂಜಯ್ ದತ್ ನಾಲ್ಕನೇ ಹಂತದ ಲಂಗ್ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಇನ್ನೇನು ಹೆಚ್ಚಿನ ಚಿಕಿತ್ಸೆಗೆ ಅಮೆರಿಕಾಗೆ ತೆರಳಲಿದ್ದಾರೆ ಎಂಬ ಸುದ್ದಿಯಾಗಿತ್ತು. ಈಗ ಖುದ್ದು ಸಂಜಯ್ ದತ್, ತಾವು ಕ್ಯಾನ್ಸರ್ ಗೆದ್ದು ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪತ್ರವೊಂದನ್ನು ಅವರು ಬಿಡುಗಡೆ ಮಾಡಿದ್ದಾರೆ.

    ‘ಕಳೆದ ಕೆಲವು ವಾರಗಳು, ನನ್ನ ಮತ್ತು ನನ್ನ ಕುಟುಂಬಕ್ಕೆ ಬಹಳ ಕಷ್ಟಕರವಾಗಿತ್ತು. ದೇವರು ತನ್ನ ಶಕ್ತಿಶಾಲಿ ಸೇನಾನಿಗಳಿಗೇ ಕಷ್ಟದ ಯುದ್ಧಗಳನ್ನು ಕೊಡುತ್ತಾನೆ ಎನ್ನುವಂತೆ, ಈ ಯುದ್ಧ ನನಗೆ ಎದುರಾಗಿತ್ತು. ನನ್ನ ಮಕ್ಕಳ 10ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ, ಈ ಯುದ್ಧವನ್ನು ಗೆದ್ದುಬಂದಿದ್ದೇನೆ ಎಂದು ಹೇಳಿಕೊಳ್ಳುವುದಕ್ಕೆ ಸಂತೋಷವಾಗುತ್ತದೆ. ಎಲ್ಲರ ಪ್ರೀತಿ, ಅಭಿಮಾನ ಮತ್ತು ನಂಬಿಕೆ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಇಂಥ ಸಂದರ್ಭದಲ್ಲಿ ಜತೆಗೆ ನಿಂತ ನನ್ನ ಕುಟುಂಬದವರು, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನಾನು ಆಭಾರಿ’ ಎಂದು ಸಂಜಯ್ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಭಾರತದಲ್ಲಿ 2+2 ಸಚಿವಾಲಯ ಮಟ್ಟದ ಸಭೆಗೆ ಸಿದ್ಧತೆ

    ಅಷ್ಟೇ ಅಲ್ಲ, ತಮಗೆ ಚಿಕಿತ್ಸೆ ನೀಡಿ, ಕ್ಯಾನ್ಸರ್ ಗೆದ್ದು ಬರುವುದಕ್ಕೆ ಕಾರಣಕರ್ತರಾದ ಕೋಕಿಲಾಬೆನ್ ಆಸ್ಪತ್ರೆಯ ವೈದ್ಯರಾದ ಡಾ. ಸೇವಂತಿ ಮತ್ತು ತಂಡದವರಿಗೂ ಅವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

    ಇದನ್ನೂ ಓದಿ: ನವರಾತ್ರಿ ಉತ್ಸವ: ದುರ್ಗಾ ಪೆಂಡಾಲ್​ಗೆ ನಿಯಮ ಸಡಿಲಿಸಿದ ಕೋರ್ಟ್​

    ಒಂದು ಕಡೆ, ಸಂಜಯ್ ದತ್ ತಾವು ಕ್ಯಾನ್ಸರ್ ಗೆದ್ದು ಬಂದಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದರೆ, ಇನ್ನೊಂದು ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳೂ ಕೇಳಿಬಂದಿವೆ. ಪ್ರಮುಖವಾಗಿ, ಎರಡು ತಿಂಗಳಲ್ಲಿ ನಾಲ್ಕನೇ ಹಂತದ ಕ್ಯಾನ್ಸರ್​ನಿಂದ ಸಂಜಯ್ ಗುಣಮುಖರಾಗಿದ್ದು ಹೇಗೆ ಎಂಬ ಪ್ರಶ್ನೆಯ ಜತೆಗೆ, ಪ್ರಚಾರಕ್ಕಾಗಿ ಸಂಜಯ್ ದತ್ ಮಾಡಿರುವ ಸ್ಟಂಟ್ ಇದು ಎನ್ನುತ್ತಿದ್ದಾರೆ. (ಏಜೆನ್ಸೀಸ್)

    ವಾರದೊಳಗೆ ಶಿಕ್ಷಕರ, ಉಪನ್ಯಾಸಕರ ವರ್ಗಾವಣೆ ಕೂಡಲೇ ಆರಂಭಿಸುವಂತೆ ಸಿಎಂ ತಾಕೀತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts