ಬೆಂಗಳೂರು: ಮನೆಗೆ ಕರೆದು ಉಚಿತವಾಗಿ ಊಟ ಹಾಕಿಸಿದ್ದಲ್ಲದೆ, ಸಿನಿಮಾ ನೋಡಲಿಕ್ಕೆ ಟಿಕೆಟ್ ಕೂಡ ಉಚಿತ. ಹೀಗೊಂದು ಆಫರ್ ಫುಡ್ ಡೆಲಿವರಿ ಬಾಯ್ಸ್ಗೆ ಸಿಕ್ಕಿದ್ದು, ಅವರ ಸಂಭ್ರಮಕ್ಕೆ ಎಣೆ ಎಲ್ಲದಂತಾಗಿದೆ. ಅಷ್ಟಕ್ಕೂ ಇದಕ್ಕೆಲ್ಲ ಕಾರಣ ಪೆಟ್ರೊಮ್ಯಾಕ್ಸ್.
ಹೌದು.. ಪೆಟ್ರೊಮ್ಯಾಕ್ಸ್ ಸಿನಿಮಾದ ಪ್ರಚಾರಾರ್ಥವಾಗಿ ನಡೆದ ಕಾರ್ಯಕ್ರಮದಿಂದಾಗಿ ಡೆಲಿವರಿ ಬಾಯ್ಸ್ಗೆ ಹೀಗೊಂದು ಚಾನ್ಸ್ ಸಿಕ್ಕಿದೆ. ಏಕೆಂದರೆ ಮೊನ್ನೆಮೊನ್ನೆಯಷ್ಟೇ ಡೆಲಿವರಿ ಬಾಯ್ ಆಗಿ ಬೀದಿಗಳಿದು ಮನೆಮನೆಗೂ ತೆರಳಿದ್ದ ನಾಯಕ ನಟ ನೀನಾಸಂ ಸತೀಶ್, ಈಗ ಡೆಲಿವರಿ ಬಾಯ್ಸ್ನ ಮನೆಗೇ ಕರೆಸಿ ಊಟ ಕೂಡ ಹಾಕಿಸಿದ್ದಾರೆ.
ಸಿನಿಮಾದಲ್ಲಿ ತಾವು ಅನಾಥ ಯುವಕನಾಗಿ ಕಾಣಿಸಿಕೊಂಡಿದ್ದ ಅವರು ಇತ್ತೀಚೆಗೆ ಅನಾಥಾಶ್ರಮದವರ ಜತೆ ಸಹಭೋಜನ ಮಾಡಿದ್ದು, ಈ ಚಿತ್ರದಲ್ಲಿ ಡೆಲಿವರಿ ಬಾಯ್ ಆಗಿಯೂ ಕಾಣಿಸಿಕೊಂಡಿದ್ದರಿಂದ ಫುಡ್ ಡೆಲಿವರಿ ಬಾಯ್ ಆಗಿ ಅಭಿನಯಿಸಿದ್ದರಿಂದ ಒಂದಷ್ಟು ಡೆಲಿವರಿ ಹುಡುಗರನ್ನು ಮನೆಗೆ ಕರೆಸಿ ಜತೆಗೇ ಊಟ ಮಾಡಿದ್ದಾರೆ. ಈ ಮೂಲಕ ರೀಲ್ನಲ್ಲಿ ನಡೆದಿದ್ದನ್ನೆಲ್ಲ ರಿಯಲ್ ಆಗಿ ಮಾಡಿದ್ದಾರೆ ನಟ ಸತೀಶ್.
ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್ ಆಗಿ ಮನೆ ಮನೆಗೂ ತೆರಳಿದ ನಾಯಕ ನಟ!
ಫುಡ್ ಡೆಲಿವರಿ ಮಾಡುವಾಗ ಎಂಥ ಸಂದರ್ಭಗಳು ಎದುರಾಗಿದ್ದವು, ಅದನ್ನು ಹೇಗೆ ಎದುರಿಸಿದ್ವಿ ಎಂಬುದನ್ನು ಹೇಳುತ್ತ ಡೆಲಿವರಿ ಬಾಯ್ಸ್ ಈ ಸಂದರ್ಭದಲ್ಲಿ ತಮ್ಮ ಸಂಕಷ್ಟಗಳ ಸರಮಾಲೆಯನ್ನು ಬಿಚ್ಚಿಟ್ಟಿದ್ದಾರೆ. ಊಟ ಕೊಡಿಸಿದ ಬಳಿಕ ನಿಮಗೆಲ್ಲರಿಗೂ ಮಾಲ್ನಲ್ಲಿ ಸಿನಿಮಾ ನೋಡಲು ಉಚಿತವಾಗಿ ಟಿಕೆಟ್ ಕೊಡುವುದಾಗಿ ಹೇಳಿದ ನಟ ಸತೀಶ್, ನೀವೆಷ್ಟು ಜನರಿದ್ದೀರಿ ಹೇಳಿ, ಎಲ್ಲರಿಗೂ ಉಚಿತವಾಗಿ ಟಿಕೆಟ್ ಕೊಡುತ್ತೇವೆ ಎಂದು ಆಫರ್ ನೀಡಿದ್ದಾರೆ.
‘ನೀರ್ ದೋಸೆ’ ಸಿನಿಮಾ ನಿರ್ದೇಶನ ಮಾಡಿದ್ದ ವಿಜಯಪ್ರಸಾದ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ನೀನಾಸಂ ಸತೀಶ್ ಜತೆಗೆ ಹರಿಪ್ರಿಯಾ, ಕಾರುಣ್ಯ ರಾಮ್ ಅಭಿನಯಿಸಿದ್ದಾರೆ. ನಾಲ್ವರ ಬದುಕಿನಲ್ಲಿ ಭರವಸೆಯ ಬೆಳಕು ಹೇಗೆ ಮೂಡುತ್ತದೆ ಎಂಬುದು ಚಿತ್ರದ ಕಥೆಯಾಗಿದ್ದು, ಅದನ್ನು ನಿರ್ದೇಶಕ ಪೆಟ್ರೊಮ್ಯಾಕ್ಸ್ ಉಪಮೆಯೊಂದಿಗೆ ಹೇಳಿದ್ದಾರೆ. ಸತೀಶ್ ಪಿಕ್ಚರ್ ಹೌಸ್, ಪೆಟ್ರೊಮ್ಯಾಕ್ಸ್ ಪಿಕ್ಚರ್ಸ್ ಮತ್ತು ಸ್ಟುಡಿಯೊ 10 ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿರುವ ಈ ಸಿನಿಮಾ ಇದೇ ಶುಕ್ರವಾರ (ಜುಲೈ 15) ಬಿಡುಗಡೆ ಆಗಲಿದೆ.
ಕಿಚ್ಚ ಸುದೀಪ್ಗೆ ಅವಹೇಳನ; ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಪೊಲೀಸರಿಗೆ ದೂರು..
ಹೀಗೂ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು ನಿರ್ದೇಶಕ ಅನೂಪ್ ಭಂಡಾರಿ!