ಬೆಂಗಳೂರು: ಈಗಾಗಲೇ ಬಹುತೇಕ ಚಿತ್ರೀಕರಣವನ್ನು ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ ಚಂದು ಗೌಡ ನಾಯಕತ್ವದ ಜಾಕ್ಪಾಟ್ ಸಿನಿಮಾ. ಇತ್ತೀಚೆಗಷ್ಟೇ ಸಿನಿಮಾದ ಅಪ್ಡೇಟ್ ಮಾಹಿತಿ ನೀಡುವ ಸಲುವಾಗಿಯೇ ಚಿತ್ರತಂಡ ಸುದ್ಧಿಗೋಷ್ಠಿಯನ್ನು ಆಯೋಜಿಸಿತ್ತು. ಈ ವೇಳೆ ತಂಡದವರೆಲ್ಲ ಒಂದೆಡೆ ಸೇರಿ ಸಿನಿಮಾ ಬಗ್ಗೆ ಒಂದೊಂದಾಗಿಯೇ ಮಾಹಿತಿ ನೀಡಿದರು.
ಇದನ್ನೂ ಓದಿ: ಹೊಸ ವರ್ಷಕ್ಕೆ ಪೊಗರು: ಶುರುವಾಗುತ್ತದಾ ಸ್ಟಾರ್ ಚಿತ್ರಗಳ ದರ್ಬಾರು?
ಅಮರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಕಿರುತೆರೆ ಸ್ಟಾರ್ ಚಂದು ಗೌಡ, ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿದ್ದಾರೆ. ತಮ್ಮ ಪಾತ್ರ ಮತ್ತು ತಂಡದ ಬಗ್ಗೆ ಹೇಳಿಕೊಳ್ಳುವ ಚಂದು, ‘ಈ ಚಿತ್ರದಲ್ಲಿ ನನ್ನದು ಪೊಲೀಸ್ ಪಾತ್ರ. ಪೊಲೀಸ್ ಪಾತ್ರಕ್ಕೆಂದೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಫೀಟ್ ಆಗಿ ಕಾಣಿಸಬೇಕೆಂದು ಬರೊಬ್ಬರಿ 8 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದೇನೆ. ಆ್ಯಕ್ಷನ್ ಸೀನ್ಗಳಿದ್ದಾಗ ರಿಯಲಿಸ್ಟಿಕ್ ಆಗಿ ಬರಬೇಕು ಎಂಬ ಕಾರಣಕ್ಕೆ ನೈಜತೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಬಿಲ್ಡಿಂಗ್ ಮೇಲಿಂದಲೂ ಜಂಪ್ ಮಾಡಿದ್ದೇವೆ. ಇನ್ನೇನು ಶೀಘ್ರದಲ್ಲಿ ತೆರೆಮೇಲೆ ಬರುವ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿದ್ದೇವೆ ಎಂದರು.
ಇನ್ನು ಈಗಾಗಲೇ ಕನ್ನಡದಲ್ಲಿ ಜಾಕ್ಪಾಟ್ ಹೆಸರಿನ ಸಿನಿಮಾ ಬಂದಿದೆ. ಆ ಚಿತ್ರಕ್ಕೂ, ಈ ಜಾಕ್ಪಾಟ್ಗೂ ಯಾವುದೇ ಸಂಬಂಧವಿಲ್ಲ ಎಂದು ಕಾರಣ ನೀಡಿಯೇ ಮಾಹಿತಿ ನೀಡಿದರು ನಿರ್ದೇಶಕ ಅಮರ್. ‘ಈಗಾಗಲೇ ಕನ್ನಡದಲ್ಲಿ ಜಾಕ್ಪಾಟ್ ಶೀರ್ಷಿಕೆಯಲ್ಲಿ ಸಿನಿಮಾ ಬಂದಿದೆ. ಅದನ್ನೇ ಬಳಸಿಕೊಳ್ಳುವಂತೆ ಚೇಂಬರ್ ಅನುಮತಿ ಪಡೆದುಕೊಂಡೇ ಸಿನಿಮಾ ಮಾಡಿದ್ದೇವೆ. ಕಥೆಗೂ ಸೂಟ್ ಆಗುವ ದೃಷ್ಟಿಯಿಂದ ಶೀರ್ಷಿಕೆಯಾಗಿ ಅದನ್ನೇ ಆಯ್ದುಕೊಂಡೆವು. ಜಾಕ್ಪಾಟ್ಗೂ ಮತ್ತು ಚಿತ್ರದ ಕಥೆಗೂ ಸಾಕಷ್ಟು ಸಾಮ್ಯತೆ ಇದೆ. ಆ ಕುತೂಹಲವನ್ನು ಶೀಘ್ರದಲ್ಲಿ ಮತ್ತೊಂದು ಪ್ರೇಸ್ ಮೀಟ್ ಮೂಲಕ ಮುಂದಿಡಲಿದ್ದೇವೆ ಎಂಬುದು ಅಮರ್ ಮಾತು.
ಚಿತ್ರದಲ್ಲಿ ನಾಯಕಿಯಾಗಿ ಶೋಭಿತಾ ಶಿವಣ್ಣ ನಟಿಸಿದ್ದು, ಅವರದ್ದಿಲ್ಲಿ ಸಭ್ಯ ಗೃಹಿಣಿ ಪಾತ್ರ. ಈ ಸಿನಿಮಾದಲ್ಲಿ ಮೀರಾ ಪಾತ್ರ ಮಾಡುತ್ತಿದ್ದೇನೆ. ತಂದೆಯ ಮುದ್ದಿನ ಮಗಳು, ಬಳಿಕ ಚಂದುಗೆ ಮದುವೆ ಮಾಡಿಕೊಡ್ತಾರೆ. ಆಗ ಗಂಡ ಹೆಂಡತಿ ಮಧ್ಯೆ ಸಾಕಷ್ಟು ಅಡತಡೆಗಳು ಬರುತ್ತವೆ. ಅದೆಲ್ಲವನ್ನು ಹೇಗೆ ನಿಭಾಯಿಸಲಾಗುತ್ತದೆ ಎಂಬುದೇ ನನ್ನ ಪಾತ್ರ ಎಂದು ಮಾಹಿತಿ ನೀಡುತ್ತಾರೆ ಶೋಭಿತಾ.
ಇದನ್ನೂ ಓದಿ: ಫ್ಯಾಂಟಮ್ನಲ್ಲಿ ಶ್ರದ್ಧಾ ಇಲ್ಲ; ಸುದೀಪ್ಗೆ ಜತೆಯಾಗಿ ಮುಂಬೈ ನಾಯಕಿ
ಕಥೆ ಕೇಳಿಯೇ ಸಿನಿಮಾ ಮಾಡಲು ಮುಂದೆ ಬಂದಿರುವುದಾಗಿ ನಿರ್ಮಾಪಕ ನವೀನ್ ಹೇಳಿಕೊಂಡಿದ್ದಾರೆ. ‘ಸಿನಿಮಾ ಕ್ಷೇತ್ರದ ಮೇಲೆ ಮೊದಲಿಂದಲೂ ಆಸಕ್ತಿ. ಜಾಕ್ಪಾಟ್ ಚಿತ್ರದ ಸ್ಟೋರಿ ಕೇಳಿ ಇಂಟ್ರಸ್ಟಿಂಗ್ ಅನಿಸಿದ್ದಕ್ಕೆ ಈ ಸಿನಿಮಾ ಮಾಡಲು ಮುಂದೆ ಬಂದೆ. ನಿರ್ಮಾಣದ ಜತೆಗೆ ಈ ಸಿನಿಮಾದಲ್ಲಿ ನೆಗೆಟಿವ್ ರೋಲ್ ಮಾಡಿದ್ದೇನೆ. ಜನವರಿ ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್ ಇದೆ. ಮುಂದಿನ ತಿಂಗಳು ಸೆನ್ಸಾರ್ ಆಗಲಿದೆ ಎಂದರು.
ಅಯೋಧ್ಯೆಯಲ್ಲಿ ‘ರಾಮ್ ಸೇತು’ ಶೂಟಿಂಗ್ ವಿಚಾರ: ಅಕ್ಷಯ್ ಬೇಡಿಕೆಗೆ ಸಿಎಂ ಆದಿತ್ಯನಾಥ ಏನಂದ್ರು?