More

    ಸಾಧನೆಗೈದ ಶಿಕ್ಷಕರಿಗೆ ಸನ್ಮಾನ

    ತಾವರಗೇರಾ: ಇಲ್ಲಿಯ ಆರ್ಯವೈಶ್ಯ ಸಮಾಜದಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿವಿಧ ವಿಷಯಗಳಲ್ಲಿ ಕ್ರಿಯಾಶೀಲರಾದ ಶಿಕ್ಷಕರಿಗೆ ಭಾನುವಾರ ಸನ್ಮಾನಿಸಲಾಯಿತು.

    ಇದನ್ನೂ ಓದಿ: ಸಾಧನೆಗೈದ ಶಿಕ್ಷಕರಿಗೆ ಸನ್ಮಾನ

    ಕ್ರೀಡಾ ವಿಭಾಗದಿಂದ ದೈಹಿಕ ಶಿಕ್ಷಕ ಗವಿಸಿದ್ಧಪ್ಪ ನಾಗಲೀಕರ, ಸಾಹಿತ್ಯ ಕ್ಷೇತ್ರದಿಂದ ಟಿಸಿಎಚ್ ಕಾಲೇಜಿನ ಪ್ರಾಚಾರ್ಯ ರಂಗನಾಥ್ ಅಂಬಿಗೇರ, ಪರಿಸರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ರಾಮಜಿ ನಾಯಕ ತಾಂಡಾದ ಸರ್ಕಾರಿ ಪ್ರಾ ಶಾಲಾ ಮುಖ್ಯ ಶಿಕ್ಷಕ ಶಂಕರ ರಾಥೋಡ್‌ಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

    ಸ್ಮಾರ್ಟ್ ಕ್ಲಾಸ್ ಹಾಗೂ ಅತ್ಯಂತ ಕ್ರಿಯಾಶೀಲ ಶಿಕ್ಷಕ ಸಂಗನಾಳ ಸರ್ಕಾರಿ ಪ್ರಾ.ಶಾಲಾ ಮುಖ್ಯ ಶಿಕ್ಷಕ ಬಸವರಾಜ್ ಅಂಗಡಿ, ಮಹಿಳಾ ವಿಭಾಗದಲ್ಲಿ ಮಲ್ಲಿಕಾರ್ಜುನ ನಗರ ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಶಾಸ್ತ್ರ ಇವರು ಸ್ಕೌಟ್ಸ್ ಮತ್ತು ಗೈಡ್ಸ್ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.

    ಮುಖಂಡರಾದ ಕುಬೇರಪ್ಪ, ಕೆ ಶಂಕರ್ ಇಲ್ಲೂರು, ವಾಸವಿ ಯುವ ಜನ ಸಂಘದ ಅಧ್ಯಕ್ಷ ಮಂಜುನಾಥ್ ಕಂದಗಲ್,
    ಕೃಷ್ಣ ತೆಮ್ಮಿನಾಳ, ಪ್ರಶಾಂತ್, ಕೆ ಶ್ರೀನಿವಾಸ್ ಕಲ್ಮಂಗಿ, ಸಂತೋಷ್ ದರೋಜಿ, ಮಂಜುನಾಥ್ ದರೋಜಿ, ಸಂದೀಪ್, ಜೆ. ರಮೇಶ್,
    ದರೋಜಿ ಪಾಂಡುರಂಗ, ಡಿ ಪ್ರಾಣೇಶ್, ಹಂಚಿನಾಳ ಶ್ರೀನಿವಾಸ್, ದರೋಜಿ ಶ್ರೀಹರಿ, ರಾಜಲಬಂಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts