ನವದೆಹಲಿ: ಅಯೋಧ್ಯೆಯಲ್ಲಿ ಬೃಹತ್ ಹನುಮಾನ್ ಪ್ರತಿಮೆ ಸ್ಥಾಪಿಸಿ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ಗೆ ಆಪ್ ಶಾಸಕ, ವಕ್ತಾರ ಸೌರಭ್ ಭಾರದ್ವಾಜ್ ಗುರುವಾರ ಔಪಚಾರಿಕವಾಗಿ ಮನವಿ ಮಾಡಿದ್ದಾರೆ.
ತಮ್ಮ ವಿಧಾನಸಭಾ ಕ್ಷೇತ್ರವಾದ ಗ್ರೇಟರ್ ಕೈಲಾಷ್ನಲ್ಲಿ ಪ್ರತಿ ಮಂಗಳವಾರ ಸುಂದರಕಾಂಡ ಪಾರಾಯಣ ಆಯೋಜಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಭಾರದ್ವಾಜ್ ಈ ಮನವಿ ಮಾಡಿ ಗಮನಸೆಳೆದಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಅವರು, ಟ್ರಸ್ಟ್ ಜತೆ ಸಮಯ ಕೇಳಿಕೊಂಡು ಅಧಿಕೃತ ಮನವಿಯನ್ನು ಅವರಿಗೆ ಸಲ್ಲಿಸುತ್ತೇನೆ. ಭಗವಾನ್ ಶ್ರೀರಾಮಚಂದ್ರನ ಆಪ್ತ ಹನುಮಾನ್ಜಿ. ರಾಮ ಮಂದಿರ ಇರುವಲ್ಲೆಲ್ಲ ಹನುಮಂತನಿಗೂ ಜಾಗವಿದೆ. ರಾಮ ದರ್ಬಾರ್ನಲ್ಲಿ ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಾನ್ ಇದ್ದೇ ಇರುತ್ತಾರೆ ಎಂದು ಅವರು ಹೇಳಿದರು. (ಏಜೆನ್ಸೀಸ್)