More

    ಅಯೋಧ್ಯೆಯಲ್ಲಿ ಬೃಹತ್ ಹನುಮಾನ್ ಪ್ರತಿಮೆ ಸ್ಥಾಪಿಸಿ: ರಾಮ ಜನ್ಮಭೂಮಿ ಟ್ರಸ್ಟ್​ಗೆ ಆಪ್ ಶಾಸಕನ ಮನವಿ!

    ನವದೆಹಲಿ: ಅಯೋಧ್ಯೆಯಲ್ಲಿ ಬೃಹತ್ ಹನುಮಾನ್ ಪ್ರತಿಮೆ ಸ್ಥಾಪಿಸಿ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ಗೆ ಆಪ್ ಶಾಸಕ, ವಕ್ತಾರ ಸೌರಭ್ ಭಾರದ್ವಾಜ್ ಗುರುವಾರ ಔಪಚಾರಿಕವಾಗಿ ಮನವಿ ಮಾಡಿದ್ದಾರೆ.

    ತಮ್ಮ ವಿಧಾನಸಭಾ ಕ್ಷೇತ್ರವಾದ ಗ್ರೇಟರ್ ಕೈಲಾಷ್​ನಲ್ಲಿ ಪ್ರತಿ ಮಂಗಳವಾರ ಸುಂದರಕಾಂಡ ಪಾರಾಯಣ ಆಯೋಜಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಭಾರದ್ವಾಜ್ ಈ ಮನವಿ ಮಾಡಿ ಗಮನಸೆಳೆದಿದ್ದಾರೆ.

    ಪಿಟಿಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಅವರು, ಟ್ರಸ್ಟ್​ ಜತೆ ಸಮಯ ಕೇಳಿಕೊಂಡು ಅಧಿಕೃತ ಮನವಿಯನ್ನು ಅವರಿಗೆ ಸಲ್ಲಿಸುತ್ತೇನೆ. ಭಗವಾನ್ ಶ್ರೀರಾಮಚಂದ್ರನ ಆಪ್ತ ಹನುಮಾನ್​ಜಿ. ರಾಮ ಮಂದಿರ ಇರುವಲ್ಲೆಲ್ಲ ಹನುಮಂತನಿಗೂ ಜಾಗವಿದೆ. ರಾಮ ದರ್ಬಾರ್​ನಲ್ಲಿ ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಾನ್​ ಇದ್ದೇ ಇರುತ್ತಾರೆ ಎಂದು ಅವರು ಹೇಳಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts