ಹುಬ್ಬಳ್ಳಿ: ಈಜಲೆಂದು ಸ್ವಿಮ್ಮಿಂಗ್ ಪೂಲ್ಗೆ ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಲ್ಲಿನ ವಿದ್ಯಾನಗರ ಬಳಿ ನಡೆದಿದೆ. ಸಿರಾಜ್ ಅಣ್ಣಿಗೇರಿ (24) ಮೃತ ಯುವಕ. ಈತ ಮುಳುಗುತ್ತಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನವಲಗುಂದದ ಸಿರಾಜ್ ಸ್ನೇಹಿತರೊಂದಿಗೆ ಈಜಾಡಲು ಸ್ವಿಮ್ಮಿಂಗ್ ಪೂಲ್ಗೆ ಆಗಮಿಸಿದ್ದ. ಈ ವೇಳೆ ತರಬೇತುದಾರ ಕೂಡ ಅಲ್ಲಿಯೇ ಇದ್ದ. ನೀರಿನಲ್ಲಿ ಇಳಿದಿದ್ದ ಸಿರಾಜ್ಗೆ ಒಂದು ಹಂತದಲ್ಲಿ ಈಜಲಾಗದೆ ಚಡಪಡಿಸಿದ. ಆದರೆ ಅಲ್ಲಿದ ಟ್ರೇನರ್ ಆಗಲೀ, ಉಳಿದವರಾಗಲೀ ಅಷ್ಟೊಂದು ಗಮನ ಕೊಡಲಿಲ್ಲ ಎನ್ನಲಾಗಿದೆ.
ಬಳಿಕ ಉಳಿದ ಮೂರ್ನಾಲ್ಕು ಜನ ಹೋಗಿ ಸಿರಾಜ್ನನ್ನು ನೀರಿನಿಂದ ಎಳೆದುಕೊಂಡು ಬಂದು ಈಜುಕೊಳದ ಕಟ್ಟೆಗೆ ತಂದು ತಲೆಕೆಳಗಾಗಿ ಮಾಡಿ, ನೀರು ಹೊರತೆಗೆದು, ಪ್ರಾಥಮಿಕ ಚಿಕಿತ್ಸೆ ಕೊಡಲು ಪ್ರಯತ್ನಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದು.
ಸಿರಾಜ್ ಸೇರಿ ಮೂವರು ಸ್ನೇಹಿತರು ಕಂಠಪೂರ್ತಿಕ ಕುಡಿದು ಸಂಜೆ ಹೊತ್ತು ಸ್ವಿಮ್ಮಿಂಗ್ಪೂಲ್ಗೆ ತೆರಳಿದ್ದರು. ಆತ ಕುಡಿದಿದ್ದ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲೂ ಬೆಳಕಿಗೆ ಬಂದಿದೆ. (ದಿಗ್ವಿಜಯ ನ್ಯೂಸ್)
ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರಿದ ಕೂಡಲೇ ಟ್ವೀಟ್ ಮಾಡಿದ ರಾಜಸ್ಥಾನ ಡಿಸಿಎಂ ಸಚಿನ್ ಪೈಲಟ್…