More

    ಫೇಸ್ ಬುಕ್ ಸುಂದರಿ ಜತೆ ಯುವಕನಿಗೆ ಲವ್: ಮದುವೆ ಮಂಟಪದಲ್ಲಿ ಹುಡುಗನಿಗೆ ಕಾದಿತ್ತು ಶಾಕ್​​!

    ಮಂಡ್ಯ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲೇ ಪ್ರೀತಿ ಬೆಳೆದು ನಂತರ ಪೊಲೀಸ್​ ಠಾಣೆ ಮೆಟ್ಟಿಲೇರುವ ಪ್ರಕರಣಗಳಿಗೇನು ಕಡಿಮೆಯಿಲ್ಲ. ಸಾಮಾಜಿಕ ಜಾಲತಾಣದ ಎಷ್ಟು ಉಪಯೋಗವೂ ಅಷ್ಟೇ ಅಪಾಯಕಾರಿಯೂ ಹೌದು ಎಂಬುದು ಇತ್ತೀಚೆಗೆ ದಾಖಲಾಗುತ್ತಿರುವ ಅಪರಾಧ ಪ್ರಕರಣಗಳೇ ಸಾಕ್ಷಿಯಾಗಿವೆ.

    ಈಗ ಅಂತಹದ್ದೇ ಪ್ರಕರಣ ಮಂಡ್ಯದಲ್ಲಿ ದಾಖಲಾಗಿದೆ. ಫೇಸ್​​ಬುಕ್​ನಲ್ಲಿ ಪರಿಚಯವಾಗಿ, ಸ್ನೇಹದಿಂದ ಪ್ರೀತಿಗೆ ತಿರುಗಿ ಮದುವೆ ಮಂಟಪದವರೆಗೂ ಹೋದ ಮೇಲೆಯೇಅಸಲಿ ಸತ್ಯ ಗೊತ್ತಾಗಿದೆ. ಮದುವೆಗೆ ಸಿದ್ದನಾದ ಯುವಕ ಆಕೆಯನ್ನು ನೋಡಿಯೇ ಬೆಚ್ಚಿ ಬಿದ್ದಿದ್ದಾನೆ.

    ಫೇಸ್​​ಬುಕ್​ನಲ್ಲಿ ಆಕೆಯ ಫೋಟೋವನ್ನು ನೋಡಿ ಈ ಯುವಕ ಮಾರುಹೋಗಿದ್ದಾನೆ. ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದಾರೆ. ಮೆಸೆಂಜರ್​ ನಲ್ಲಿ ಫೂಲ್​ ಚಾಟಿಂಗ್​​ ಮಾಡಿದ್ದಾರೆ. ಯುವತಿ ಎಂದು ಪ್ರೀತಿ ಬಲೆಗೆ ಬೀಳಿಸಿದ್ದು ಮಾತ್ರ ಯುವತಿಯಲ್ಲ ಎಂಬ ಕಹಿ ಸತ್ಯ ಗೊತ್ತಾಗಿದ್ದೇ ಮದುವೆ ಮಂಟಪದಲ್ಲಿ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಯುವಕನಿಗೆ ಮಹಿಳೆಯೊಬ್ಬಳು ವಂಚನೆ ಮಾಡಿದ್ದಾಳೆ.

    ಸುಂದರವಾದ ಯುವತಿಯ ಫೋಟೋ ಬಳಸಿಕೊಂಡಿದ್ದು, ತೆರೆ ಹಿಂದೆ ಆಟವಾಡಿದ್ದು ಮಾತ್ರ 50 ವರ್ಷದ ಆಂಟಿ. ಯುವಕನಿಗೆ ಮದುವೆಯಾಗುವುದಾಗಿ ಹೇಳಿ 3.50 ಲಕ್ಷ ಹಣ ಪಡೆದಿದ್ದಳು. ಮದುವೆ ಬಗ್ಗೆ ಪ್ರಸ್ತಾಪ ಮಾಡಿದಾಗ ಮನೆಯಲ್ಲಿ ಒಪ್ಪೋದಿಲ್ಲ.ನಮ್ಮ ಮನೆಗೆ ಬರೋದು ಬೇಡ, ನಿಮ್ಮ ಮನೆಗೆ ನಮ್ಮ ಆಂಟಿ ಕಳುಹಿಸುತ್ತೇನೆಎಂದು ಬಣ್ಣ ಬಣ್ಣದ ಮಾತನ್ನು ಹೇಳಿ ನಂಬಿಸಿದ್ದಳು.

    ಕೊನೆಗೆ ತನ್ನ ಆಂಟಿ ಮನೆಗೆ ಬರುತ್ತಿದ್ದಾರೆ ಎಂದು ಹೇಳಿದ್ದ ಈಕೆಯೇ ನಾನು ಹುಡುಗಿಯ ಆಂಟಿ ಎಂದು ಹೇಳಿ ಮನೆಗೆ ಬಂದಿದ್ದಾಳೆ. ಹುಡುಗನ ಮನೆಯವರೊಂದಿಗೆ ಭೇಟಿ ಮಾಡಿದ್ದಲ್ಲದೇ ಮದುವೆ ದಿನಾಂಕವನ್ನೂ ನಿಗದಿ ಮಾಡಿ ಹೋಗಿದ್ದಳು.

    ಅಮಾಯಕ ಯುವಕ ಈಕೆಯ ಮಾತನ್ನು ನಂಬಿ ಮದುವೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದನು.ನಾನು ಹುಡುಗಿಯನ್ನು ನೇರವಾಗಿ ಕಲ್ಯಾಣ ಮಂಟಪಕ್ಕೆ ಕರೆದುಕೊಂಡು ಬರುತ್ತೀನಿ ಎಂದು ಹೇಳಿದ್ದಳು.

    ನಿಗದಿ ಮಾಡಿದ್ದ ಮದುವೆಯ ದಿನ ಬಂದೇ ಬಿಟ್ಟಿತ್ತು. ಆಂಟಿಯ ಮಾತು ನಂಬಿ ಆದಿಚುಂಚನಗಿರಿಯಲ್ಲಿ ಮದುವೆ ಮಾಡಲು ಹೋಗಿದ್ದ ಯುವಕನ ಕುಟುಂಬಸ್ಥರಿಗೆ ಕಾದಿತ್ತು ಶಾಕ್​​. ಅಷ್ಟರಲ್ಲಾಗಲೇ ರಾತ್ರಿ ಫೋನ್ ಮಾಡಿ ಈಗ ಮನೆಯಲ್ಲಿ ಬಿಡ್ತಿಲ್ಲ, ಬೆಳಿಗ್ಗೆಯೇ ಬರ್ತೀನಿ ಅಂತ ಮಹಿಳೆ ಹೊಸ ಕಥೆಯನ್ನೇ ಕಟ್ಟಿದ್ದಳು. ಆನಂತರ ಮಂಟಪಕ್ಕೂ ಬಂದ ಈಕೆ ನಮ್ಮ ಹುಡುಗಿಯನ್ನು ಕಿಡ್ನಾಪ್​ ಮಾಡಿದ್ದಾರೆ ಎಂದು ನಾಟಕವಾಡಿದ್ದಳು. ನಂತರ ಅನುಮಾನಗೊಂಡ ಯುವಕ ಕುಟುಂಬಸ್ಥರು ಈಕೆಯನ್ನು ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ.

    ಪೊಲೀಸರ ವಿಚಾರಣೆ ವೇಳೆ ಬಯಲಾಗಿ ಅಸಲಿ ಸತ್ಯ ತಿಳಿಯಿತು. ತಾನೇ ಹುಡುಗನಿಗೆ ಮೋಸ ಮಾಡಿರುವುದಾಗಿ ಒಪ್ಪಿದ ಈ ಮಹಿಳೆ ಬಳಿಕ ಹಣ ವಾಪಸ್ ಕೊಡುವ ಭರವಸೆ ನೀಡಿ ರಾಜಿ ಮಾಡಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ನಿಧಿ, ವಾಮಾಚಾರಕ್ಗಾಗಿ ದೇವಸ್ಥಾನದ ಗರ್ಭಗುಡಿಯಲ್ಲಿದ್ದ ದೇವರ ಮೂರ್ತಿಯನ್ನೇ ಕದ್ದೊಯ್ದ ಕಳ್ಳರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts