ಹಾಸನ: ವಕೀಲನ ಮನೆ ಮುಂದೆ ವೈದ್ಯರೊಬ್ಬರು ವಾಮಾಚಾರ ನಡೆಸಿರುವ ಘಟನೆ ಶುಕ್ರವಾರ ಮಧ್ಯರಾತ್ರಿ ನಗರದಲ್ಲಿ ನಡೆದಿದೆ.
ಮಧ್ಯರಾತ್ರಿ ಸ್ಕೂಟರ್ನಲ್ಲಿ ವಕೀಲ ದೇವರಾಜೇಗೌಡರ ಮನೆ ಬಾಗಿಲ ಬಳಿ ಬಂದ ಹಾಸನ ಹಿಮ್ಸ್ ವೈದ್ಯ ಡಾ. ಸುರೇಶ್, ಕುಡಿಕೆ ಮತ್ತು ಕೋಳಿಯ ಮಾಂಸ, ಕಾಲುಗಳನ್ನ ಎಸೆದು ಹೋಗಿದ್ದಾರೆ. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ‘ನನ್ನ ಮನೆಗೆ ವೈದ್ಯ ವಾಮಾಚಾರ ಮಾಡಿದ್ದಾರೆ’ ಎಂದು ಆರೋಪಿಸಿ ಡಾ. ಸುರೇಶ್ ವಿರುದ್ಧ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ವಕೀಲರು ಎಫ್ಐಆರ್ ದಾಖಲಿಸಿದ್ದಾರೆ.
ವಕೀಲ ದೇವರಾಜೇಗೌಡ ಮನೆ ಸಮೀಪ ಡಾ.ಸುರೇಶ್ ಅವರ ತಂದೆ ರಾಮೇಗೌಡರ ಹೆಸರಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಲಾಗಿದೆ. ಡಾ.ಸುರೇಶ್ರ ಅಕ್ರಮ ಕಟ್ಟಡದ ವಿರುದ್ಧ ದೂರು ದಾಖಲಿಸಿ ವಕೀಲ ದೇವರಾಜೇಗೌಡ ಹೋರಾಟ ನಡೆಸಿದ್ದರು. ಪರಿಣಾಮ ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಹಾಸನ ನಗರಸಭೆಯು ಅಂತಿಮ ತಿಳಿವಳಿಕೆ ಪತ್ರ ನೀಡಿತ್ತು. ಇದೀಗ ಈ ಪ್ರಕರಣ ಮಾಟ-ಮಂತ್ರ ರೂಪಕ್ಕೆ ತಿರುಗಿರುವುದು ಸ್ಥಳೀಯರಲ್ಲಿ ಭಾರೀ ಚರ್ಚೆಯಾಗುತ್ತಿದೆ.(ದಿಗ್ವಿಜಯ ನ್ಯೂಸ್)
ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟ ತುಮಕೂರು ಎಸ್ಪಿ! ಠಾಣೆ ಮುಂದೆ ಕಾರು ಬರ್ತಿದ್ದಂತೆ ಪಿಎಸ್ಐ ಗಢಗಢ
ಅಪಘಾತದಲ್ಲಿ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಸಾವು: ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಘೋರ ಸತ್ಯ ಇಲ್ಲಿದೆ
ಪ್ರೇಯಸಿಯನ್ನ ಕೊಂದು ಶವಕ್ಕೆ ಸ್ನಾನ ಮಾಡಿಸಿ ಇಡೀ ರಾತ್ರಿ ಅದರೊಟ್ಟಿಗೆ ಇದ್ದ! ಬೆಳಗಾಗುತ್ತಿದ್ದಂತೆ ನಾಟಕ ಶುರು…