ಉಡುಪಿ: ಮಲ್ಪೆ ಬೀಚ್ನಲ್ಲಿ ಚಿನ್ನದ ಬೇಟೆಗಾಗಿ ಜನ ಮುಗಿಬಿದ್ದಿದ್ದಾರೆ. ಕಡಲತೀರದಲ್ಲಿ ಸಂಗ್ರಹ ಆಗಿರುವ ಕಸದಲ್ಲಿ ಬಂಗಾರಕ್ಕಾಗಿ ಶೋಧಿಸುತ್ತಿದ್ದಾರೆ.
ಮಳೆಗಾಲದಲ್ಲಿ ಇಂತಹ ದೃಶ್ಯ ಈ ಭಾಗದಲ್ಲಿ ಕಂಡು ಬರುತ್ತೆ. ಪ್ರತಿ ವರ್ಷ 35 ಲಕ್ಷಕ್ಕೂ ಅಧಿಕ ಪ್ರವಾಸಿಗರು ಮಲ್ಪೆ ಬೀಚ್ಗೆ ಭೇಟಿ ನೀಡುತ್ತಾರೆ. ನೀರಲ್ಲಿ ಆಟವಾಡುವಾಗ, ಈಜಾಡುವ ಸಮಯದಲ್ಲಿ ಚಿನ್ನಾಭರಣ ಸಾವಿರಾರು ಜನರು ಕಳೆದುಕೊಳ್ಳುತ್ತಾರೆ. ಕೆಲವು ಧಾರ್ಮಿಕ ವಿಧಿಗಳಲ್ಲೂ ಕಡಲಿಗೆ ಚಿನ್ನ ಬಿಡುವ ಪದ್ಧತಿ ಇದೆ.
ಪ್ರವಾಸಿಗರು ಕಡಲಿನಲ್ಲಿ ಕಳೆದುಕೊಂಡ ಬೆಳ್ಳಿ-ಚಿನ್ನಾಭರಣ ಮಳೆಗಾಲದಲ್ಲಿ ದಡಕ್ಕೆ ಬರುತ್ತೆ. ಮಳೆಗಾಲದಲ್ಲಿ ಬಾರೀ ಬಿರುಗಾಳಿ ಎದ್ದಾಗ ಬೃಹತ್ ಅಲೆಗಳ ಜತೆ ಕಸ ಸೇರಿದಂತೆ ಎಲ್ಲವೂ ದಡಕ್ಕೆ ಬಂದು ಬೀಳುತ್ತೆ. ಕಡಲಿನ ಆಳದಿಂದ ವಿಶೇಷ ಅಲೆಗಳು ಎದ್ದಾಗ ಚಿನ್ನ-ಬೆಳ್ಳಿ ಆಭರಣ, ಲೋಹದ ವಸ್ತು ಸೇರಿದಂತೆ ಕಸವನ್ನೂ ಮೇಲಕ್ಕೆ ಎಸೆದು ಹೋಗುತ್ತೆ.
ಹಾಗಾಗಿ ಇಲ್ಲಿನ ಸ್ಥಳೀಯರು ಕಡಲ ತೀರದ ಕಸದ ರಾಶಿಯಲ್ಲಿ ಚಿನ್ನ-ಬೆಳ್ಳಿಗಾಗಿ ಹುಡುಕಾಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಚಿನ್ನ ಸಿಕ್ಕರೂ ಆ ಬಗ್ಗೆ ಕೆಲವರು ಗೌಪ್ಯತೆ ಕಾಯ್ದುಕೊಳ್ಳುತ್ತಾರೆ.
ಮಾಡದ ತಪ್ಪಿಗೆ ಯುವಕ ಬಲಿ, ಪಿಎಸ್ಐ ಅಮಾನತು: ಮೃತದೇಹದ ಬಳಿ ಸಿಕ್ಕ ಕವರ್ನಲ್ಲಿದೆ ಮಹತ್ವದ ಸಾಕ್ಷ್ಯ