ಕೋಲಾರ: ನಗರದ ಎಲ್ಐಸಿ ಕಚೇರಿ ಬಳಿ ನಿಲ್ಲಿಸಿದ್ದ ಬೈಕ್ಮೇಲೆ ಇನ್ನೇನು ಹತ್ತಿ ಕೂರಬೇಕೆನ್ನುವಷ್ಟರಲ್ಲೇ ಹಾವು ಪ್ರತ್ಯಕ್ಷವಾಗಿದ್ದು, ಸ್ಥಳೀಯರ ಮುಂಜಾಗರೂಕತೆಯಿಂದ ಸವಾರ ಅಪಾಯದಿಂದ ಪಾರಾಗಿದ್ದಾರೆ.
ರಸ್ತೆ ಬದಿಯಲ್ಲಿ ಸಾಲು ಸಾಲಾಗಿ ದ್ವಿಚಕ್ರವಾಹನಗಳನ್ನು ನಿಲ್ಲಿಸಲಾಗಿತ್ತು, ಅಲ್ಲಿ ಓಡಾಡುವ ಸ್ಥಳೀಯರು ಇದೇ ಬೈಕ್ ಪಕ್ಕ ನಿಂತುಕೊಳ್ಳು ಹೋಗಿದ್ದಾರೆ. ಈ ವೇಳೆ ಹಾವು ಕಾಣಿಸಿಕೊಂಡಿದೆ. ಗಾಬರಿಗೊಂಡ ಸ್ಥಳೀಯರು ಬೈಕ್ ಬಳಿ ಬಂದ ಸವಾರನಿಗೆ ತಿಳಿಸಿದ್ದು, ಸದ್ಯ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.
ಬೈಕ್ನಲ್ಲಿ ಸುತ್ತಿಕೊಂಡಿದ್ದ ಈ ಹಾವು 5 ಅಡಿ ಉದ್ದವಿದ್ದು, ಎಲ್ಲು ಹೋಗಲಾಗದೇ ಅಲ್ಲೆ ಸಿಲುಕಿಕೊಂಡು ಒದ್ದಾಡುತ್ತಿತ್ತು. ಸ್ಥಳೀಯರೇ ಹಾವು ರಕ್ಷಿಸಲು ಮುಂದಾದರೂ, ವಾಟರ್ ಬಾಟಲಿಯಲ್ಲಿ ತುಂಬಿಸಿ ರಕ್ಷಿಸಲು ಹೋದ ಸ್ಥಳೀಯರ ಕೈಗೆ ಸಿಗದ ಹಾವು ತಪ್ಪಿಸಿಕೊಂಡು ಹೋಯಿತು. ಹಾವು ಸಿಗಲಿಲ್ಲ ಎಂಬ ಬೇಸರ ಕೆಲವರಿಗಾದರೆ, ಸದ್ಯ ಹಾವಿನಿಂದ ಬಚಾವಾದ ಸವಾರ ಮಾತ್ರ ನಿರಾಳರಾಗಿದ್ದಂತು ಸತ್ಯ. (ದಿಗ್ವಿಜಯ ನ್ಯೂಸ್)
ಮುಖ್ಯಮಂತ್ರಿಗೆ ಕಳಪೆ ಟೀ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಅಧಿಕಾರಿ!