More

    ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರ್ತಾರೆ, ನಾನೇನು ಮಾಡ್ಲಿ? ಎಂದ ಸಿದ್ದರಾಮಯ್ಯ

    ಮಂಡ್ಯ: ನಾನು ಜೆಡಿಎಸ್ ಬಗ್ಗೆ ಮಾತನಾಡೋದೆ ಇಲ್ಲ. ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರ್ತಾರೆ, ನಾನೇನು ಮಾಡ್ಲೀ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

    ‘ಜೆಡಿಎಸ್ ಬಗ್ಗೆ ಮಾತನಾಡದಿದ್ರೆ ಸಿದ್ದುಗೆ ನಿದ್ದೆ ಬರಲ್ಲ’ ಎಂಬ ಎಚ್​ಡಿಕೆ ಹೇಳಿಕೆ ಕುರಿತು ಭಾನುವಾರ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ದೇವೇಗೌಡರ ಬಗ್ಗೆ ಮಾತನಾಡೋದನ್ನೇ ಬಿಟ್ಟಿದ್ದೇನೆ. ಯಾಕಂದ್ರೆ ನನ್ನ ಮಾತುಗಳನ್ನ ಕೋಮುವಾದಿ ಬಣ್ಣಕಟ್ಟಿ ತಿರುಚುತ್ತಾರೆ. ಟೀಕೆ ಮಾಡಿದ್ರೆ ಮಾಡಿಕೊಳ್ಳಲಿ ಬಿಡಿ. ಕುಮಾರಸ್ವಾಮಿ ಹೇಳಿಕೆಗಳನ್ನ ನೆಗ್ಲೆಕ್ಟ್​ ಮಾಡಿದ್ದೀನಿ ಎಂದರು.

    ಮಂಡ್ಯದಲ್ಲಿ ಜೆಡಿಎಸ್ ಸ್ಟ್ರಾಂಗ್ ಇದ್ದಿದ್ದರೆ ಎಂಪಿ ಚುನಾವಣೆಯಲ್ಲಿ ಸೋಲುತ್ತಿದ್ರಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಮಂಡ್ಯದಲ್ಲಿ ಜೆಡಿಎಸ್ ಬಹಳ ವೀಕ್ ಇದೆ. ನಾವು ಅಭ್ಯರ್ಥಿಯನ್ನು ಹಾಕಿರಲಿಲ್ಲ, ಅವರು ಸೋತ್ರು. ಎಷ್ಟು ಅಂತರದಲ್ಲಿ ಸೋತ್ರು? ಎಷ್ಟು ಎಂಎಲ್ಎ ಗಳಿದ್ದಾರೆ? ಜೆಡಿಎಸ್ ಸ್ಟ್ರಾಂಗ್ ಇದ್ದಿದ್ದರೆ ಸೋಲ್ತಿದ್ರಾ? ಎನ್ನುತ್ತಾ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಿಖಿಲ್​ರ ಸೋಲನ್ನ ಅಣಕಿಸಿದರು.

    ಕುಡಿವ ನೀರಿನ ಪೈಪ್​ನಲ್ಲಿ ಸತ್ತ ಮಹಿಳೆಯ ಕಾಲು ಪತ್ತೆ! ಬೆಂಗಳೂರು ಸಮೀಪ ಊರಿಗೆ ಊರೇ ತಲ್ಲಣ

    ಅಣ್ಣನ ಮಗಳ ಬೆತ್ತಲೆ ದೃಶ್ಯ ಸೆರೆಹಿಡಿದು ಮಾಡಬಾರದ್ದು ಮಾಡಿದ! ಇವನ ನೀಚ ಕೃತ್ಯ ಕೇಳಿದ್ರೆ ಹಿಡಿಶಾಪ ಹಾಕ್ತೀರಿ

    ಥೂ, ಇವನೆಂಥಾ ಕಾಮುಕ? ಯುವಕನ ಮೇಲೇ ರೇಪ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts