More

    ಶಿರಾ ನಗರಸಭೆ ಕಾಂಗ್ರೆಸ್​ ಅಭ್ಯರ್ಥಿ ಸಾವು: ಚುನಾವಣೆ ಮುಂದೂಡಿಕೆ

    ಶಿರಾ: ನಗರಸಭೆ ಚುನಾವಣೆಗೆ 21ನೇ ವಾರ್ಡ್​ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಚಾಂದ್ ಪಾಷ ಹೃದಯಾಘಾತದಿಂದ ಶುಕ್ರವಾರ ತಡರಾತ್ರಿ‌ ಕೊನೆಯುಸಿರೆಳೆದರು. ಅಭ್ಯರ್ಥಿ ಅಕಾಲಿಕ ಸಾವಿನ ಹಿನ್ನೆಲೆಯಲ್ಲಿ ಈ ವಾರ್ಡಿನ ಚುನಾವಣೆಯನ್ನು ಮುಂದೂಡಲಾಗಿದೆ.

    ಪುರಸಭೆ ಮಾಜಿ ಅಧ್ಯಕ್ಷರಾಗಿದ್ದ ಚಾಂದ್ ಪಾಷ ಈ ಬಾರಿ ನಗರಸಭೆಗೆ 21ನೇ ವಾರ್ಡ್​ನಿಂದ ಸ್ಪರ್ಧಿಸಿದ್ದರು. ಡಿ.27ರಂದು ಮತದಾನ ನಡೆಯಬೇಕಿತ್ತು. ಇವರ ನಿಧನದ ಹಿನ್ನೆಲೆ 21ನೇ ವಾರ್ಡ್​ನ ಚುನಾವಣೆಯನ್ನ ಮುಂದೂಡಲಾಗಿದ್ದು, ಉಳಿದಂತೆ ಇತರ ವಾರ್ಡ್​ಗಳ ಮತದಾನ ಪ್ರಕ್ರಿಯೆ ಡಿ.27ಕ್ಕೆ ನಡೆಯಲಿದೆ.

    ನಟರಾಜ್​ ಬೀಡಿ ಮಾಲೀಕರಾಗಿದ್ದ ಚಾಂದ್​ ಪಾಷ, ಆರ್​.ರೆಹಾನ್​ ಶಿಕ್ಷಣ ಸಂಸ್ಥೆಯ ಮೂಲಕ ಜನಪರ ಸೇವೆ ಮಾಡುತ್ತಿದ್ದರು.

    ಶಾಲೆಯಲ್ಲಿ ಪಾಠ ಮಾಡುತ್ತಿರುವಾಗಲೇ ಹೃದಯಾಘಾತ: ಮಂಡ್ಯದಲ್ಲಿ ಶಿಕ್ಷಕ ಸಾವು

    ಮೈಸೂರಲ್ಲಿ ಕಾರು ಅಪಘಾತ: ಇಎಸ್‌ಐ ಆಸ್ಪತ್ರೆ ವೈದ್ಯ ಸಾವು

    ಗಂಡನ ಜತೆ ಹೋಗಲ್ಲ ಎಂದಾಕೆಗೆ ಬೂಟುಗಾಲಲ್ಲೇ ಒದ್ದು ಹಿಂಸಿಸಿದ ಪೊಲೀಸರು! ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts