ಶಿರಾ: ನಗರಸಭೆ ಚುನಾವಣೆಗೆ 21ನೇ ವಾರ್ಡ್ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಚಾಂದ್ ಪಾಷ ಹೃದಯಾಘಾತದಿಂದ ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದರು. ಅಭ್ಯರ್ಥಿ ಅಕಾಲಿಕ ಸಾವಿನ ಹಿನ್ನೆಲೆಯಲ್ಲಿ ಈ ವಾರ್ಡಿನ ಚುನಾವಣೆಯನ್ನು ಮುಂದೂಡಲಾಗಿದೆ.
ಪುರಸಭೆ ಮಾಜಿ ಅಧ್ಯಕ್ಷರಾಗಿದ್ದ ಚಾಂದ್ ಪಾಷ ಈ ಬಾರಿ ನಗರಸಭೆಗೆ 21ನೇ ವಾರ್ಡ್ನಿಂದ ಸ್ಪರ್ಧಿಸಿದ್ದರು. ಡಿ.27ರಂದು ಮತದಾನ ನಡೆಯಬೇಕಿತ್ತು. ಇವರ ನಿಧನದ ಹಿನ್ನೆಲೆ 21ನೇ ವಾರ್ಡ್ನ ಚುನಾವಣೆಯನ್ನ ಮುಂದೂಡಲಾಗಿದ್ದು, ಉಳಿದಂತೆ ಇತರ ವಾರ್ಡ್ಗಳ ಮತದಾನ ಪ್ರಕ್ರಿಯೆ ಡಿ.27ಕ್ಕೆ ನಡೆಯಲಿದೆ.
ನಟರಾಜ್ ಬೀಡಿ ಮಾಲೀಕರಾಗಿದ್ದ ಚಾಂದ್ ಪಾಷ, ಆರ್.ರೆಹಾನ್ ಶಿಕ್ಷಣ ಸಂಸ್ಥೆಯ ಮೂಲಕ ಜನಪರ ಸೇವೆ ಮಾಡುತ್ತಿದ್ದರು.
ಶಾಲೆಯಲ್ಲಿ ಪಾಠ ಮಾಡುತ್ತಿರುವಾಗಲೇ ಹೃದಯಾಘಾತ: ಮಂಡ್ಯದಲ್ಲಿ ಶಿಕ್ಷಕ ಸಾವು
ಗಂಡನ ಜತೆ ಹೋಗಲ್ಲ ಎಂದಾಕೆಗೆ ಬೂಟುಗಾಲಲ್ಲೇ ಒದ್ದು ಹಿಂಸಿಸಿದ ಪೊಲೀಸರು! ವಿಡಿಯೋ ವೈರಲ್