ಉಡುಪಿ: ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದ ಶಾಂಭವಿ ಲಾಡ್ಜ್ನಲ್ಲಿ ಇದೀಗ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಗಳೂರು ಮೂಲದ ಮೆಡಿಕಲ್ ರೆಪ್ ಶರಣ್(33) ಮೃತ ದುರ್ದೈವಿ. ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ್, ತನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದು ಮಾಧ್ಯಮಗಳಿಗೆ ಏ.11ರಂದು ವಾಟ್ಸ್ಆ್ಯಪ್ ಮೂಲಕ ಸಂದೇಶ ರವಾನಿಸಿದ್ದು. ಮರುದಿನ ಬೆಳಗ್ಗೆ ಉಡುಪಿಯ ಶಾಂಭವಿ ಲಾಡ್ಜ್ನಲ್ಲಿ ಶವವಾಗಿ ಪತ್ತೆಯಾಗಿದ್ದರು.
ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದ್ದ ಸಂತೋಷ್ ಸಾವಿನ ಪ್ರಕರಣ ಕೊನೆಗೆ ಈಶ್ವರಪ್ಪರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದೆ. ಈ ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಅತ್ತ ಸಂತೋಷ್ ಆತ್ಮಹತ್ಯೆ ಬಳಿಕ ಎರಡು ದಿನದ ಹಿಂದಷ್ಟೇ ಲಾಡ್ಜ್ನ ಹೆಸರನ್ನು ಬದಲಾಯಿಸಿದ್ದ ಮಾಲೀಕರು ಹೋಮ ಹವನ ಮಾಡಿಸಿದ್ದರು. ಲಾಡ್ಜ್ ದ್ವಾರದ ದಿಕ್ಕು ಬದಲಾಯಿಸಲೂ ಯೋಜನೆ ಮಾಡಿದ್ದರು. ಅಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ ಲಾಡ್ಜ್ನಲ್ಲಿ ನೇಣುಬಿಗಿದುಕೊಂಡು ಸತ್ತಿದ್ದಾನೆ. ಇದು ಸಹಜವಾಗಿ ಸಿಬ್ಬಂದಿಯಲ್ಲಿ ಆತಂಕ ಹುಟ್ಟಿಸಿದೆ.
ಗುತ್ತಿಗೆದಾರನ ಸಾವಿಗೂ ಮುನ್ನ ಲಾಡ್ಜ್ಗೆ ಬಂದಿದ್ದನೇ ರಾಜೇಶ್? ಯಾರೀತ? ಈ ಕೇಸ್ಗೆ ಮತ್ತೊಂದು ತಿರುವು
80 ಲಕ್ಷ ರೂ.ಗೆ PSI ಹುದ್ದೆ ಡೀಲ್! ಅಕ್ರಮಕ್ಕೆ ದಾರಿ ತೋರಿಸಿದ ಗೆಳೆಯನಿಂದಲೇ ಸ್ಫೋಟಕ ರಹಸ್ಯ ಬಯಲು
ಯುವ ಟೆನಿಸ್ ಆಟಗಾರ ಅಪಘಾತದಲ್ಲಿ ಸಾವು: ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹೋಗುವಾಗ ದುರಂತ