More

    ಗುತ್ತಿಗೆದಾರ ಸಂತೋಷ್​ ಆತ್ಮಹತ್ಯೆ ಮಾಡಿಕೊಂಡಿದ್ದ ಉಡುಪಿಯ ಲಾಡ್ಜ್​ನಲ್ಲಿ ಮತ್ತೊಬ್ಬ ನೇಣಿಗೆ ಶರಣು!

    ಉಡುಪಿ: ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದ ಶಾಂಭವಿ ಲಾಡ್ಜ್​ನಲ್ಲಿ ಇದೀಗ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಮಂಗಳೂರು ಮೂಲದ ಮೆಡಿಕಲ್ ರೆಪ್ ಶರಣ್(33) ಮೃತ ದುರ್ದೈವಿ. ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ 40% ಕಮಿಷನ್​ ಆರೋಪ ಮಾಡಿದ್ದ ಬೆಳಗಾವಿಯ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ ಪಾಟೀಲ್, ತನ್ನ ಸಾವಿಗೆ ಈಶ್ವರಪ್ಪ ಕಾರಣ ಎಂದು ಮಾಧ್ಯಮಗಳಿಗೆ ಏ.11ರಂದು ವಾಟ್ಸ್ಆ್ಯಪ್​ ಮೂಲಕ ಸಂದೇಶ ರವಾನಿಸಿದ್ದು. ಮರುದಿನ ಬೆಳಗ್ಗೆ ಉಡುಪಿಯ ಶಾಂಭವಿ ಲಾಡ್ಜ್​ನಲ್ಲಿ ಶವವಾಗಿ ಪತ್ತೆಯಾಗಿದ್ದರು.

    ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದ್ದ ಸಂತೋಷ್ ಸಾವಿನ ಪ್ರಕರಣ ಕೊನೆಗೆ ಈಶ್ವರಪ್ಪರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದೆ. ಈ ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಅತ್ತ ಸಂತೋಷ್ ಆತ್ಮಹತ್ಯೆ ಬಳಿಕ ಎರಡು ದಿನದ ಹಿಂದಷ್ಟೇ ಲಾಡ್ಜ್​ನ ಹೆಸರನ್ನು ಬದಲಾಯಿಸಿದ್ದ ಮಾಲೀಕರು ಹೋಮ ಹವನ ಮಾಡಿಸಿದ್ದರು. ಲಾಡ್ಜ್ ದ್ವಾರದ ದಿಕ್ಕು ಬದಲಾಯಿಸಲೂ ಯೋಜನೆ ಮಾಡಿದ್ದರು. ಅಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ ಲಾಡ್ಜ್​ನಲ್ಲಿ ನೇಣುಬಿಗಿದುಕೊಂಡು ಸತ್ತಿದ್ದಾನೆ. ಇದು ಸಹಜವಾಗಿ ಸಿಬ್ಬಂದಿಯಲ್ಲಿ ಆತಂಕ ಹುಟ್ಟಿಸಿದೆ.

    ಗುತ್ತಿಗೆದಾರನ​ ಸಾವಿಗೂ ಮುನ್ನ ಲಾಡ್ಜ್​ಗೆ ಬಂದಿದ್ದನೇ ರಾಜೇಶ್​? ಯಾರೀತ? ಈ ಕೇಸ್​ಗೆ ಮತ್ತೊಂದು ತಿರುವು

    80 ಲಕ್ಷ ರೂ.ಗೆ PSI ಹುದ್ದೆ ಡೀಲ್​! ಅಕ್ರಮಕ್ಕೆ ದಾರಿ ತೋರಿಸಿದ ಗೆಳೆಯನಿಂದಲೇ ಸ್ಫೋಟಕ ರಹಸ್ಯ ಬಯಲು

    ಯುವ ಟೆನಿಸ್ ಆಟಗಾರ ಅಪಘಾತದಲ್ಲಿ ಸಾವು: ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹೋಗುವಾಗ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts