ಶಿವಮೊಗ್ಗ: ಹಾವಿನ ಹೊಟ್ಟೆ ಸೇರಿದ್ದ ಪ್ಲಾಸ್ಟಿಕ್ ಹೊರ ತೆಗೆದು ಉರಗ ತಜ್ಞರೊಬ್ಬರು ಅದರ ಪ್ರಾಣ ಉಳಿಸಿದ್ದಾರೆ.
ಭದ್ರಾವತಿಯ ಬಸವೇಶ್ವರ ವೃತ್ತದಲ್ಲಿ ಕೆರೆ ಹಾವು ಕಪ್ಪೆಯ ಜತೆಗೆ ಪ್ಲಾಸ್ಟಿಕ್ ನುಂಗಿತ್ತು. ಹೊರಳಾಡಲಾಗದೆ, ಅತ್ತಿತ್ತ ಚಲಿಸದೆ ನಿತ್ರಾಣಗೊಂಡು ಲಾರಿಯೊಂದರ ಅಡಿ ಸೇರಿತ್ತು.
ವಿಷಯ ತಿಳಿದ ಉರಗ ರಕ್ಷಕ ಪ್ರಹ್ಲಾದ್ ರಾವ್ ಅವರು ಹಾವು ಹಿಡಿದು ಪ್ಲಾಸ್ಟಿಕ್ ಹೊರ ತೆಗೆದಿದ್ದಾರೆ. ಹಾವನ್ನು ಹಿಡಿದು ಕೂಡಲೇ ಪ್ಲಾಸ್ಟಿಕ್ ಹೊರ ತೆಗೆದು ಬಿಡಲಾಯಿತು. ಪ್ರಹ್ಲಾದ್ ರಾವ್ ಅವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು.