More

    ಚರಂಡಿಯಲ್ಲಿ ಕಾಣಿಸಿಕೊಂಡ ಹೆಬ್ಬಾವು

    ಹೊಳೆಹೊನ್ನೂರು: ಸಮೀಪದ ಇಟ್ಟಿಗೆಹಳ್ಳಿಯಲ್ಲಿ ಬುಧವಾರ ಕಾಲುವೆ ದುರಸ್ತಿ ಕಾಮಗಾರಿಯಲ್ಲಿ ಚರಂಡಿ ಸ್ವಚ್ಛಗೊಳಿಸುವ ವೇಳೆ ಹೆಬ್ಬಾವು ಕಾಣಿಸಿಕೊಂಡ ಕಾರಣ ಗ್ರಾಮದಲ್ಲಿ ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಲುವೆ ದುರಸ್ತಿ ಕಾಮಗಾರಿ ಚರಂಡಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಹೆಬ್ಬಾವು ಮಲಗಿರುವುದನ್ನು ಕಂಡ ಕಾರ್ಮಿಕರು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ತಂಡೋಪತಂಡವಾಗಿ ಹಾವು ನೋಡಲು ಮುಗಿಬಿದ್ದರು. ಸುಮಾರು 7 ಅಡಿ ಉದ್ದವಿದ್ದ ಹೆಬ್ಬಾವು ಯಾವುದೋ ಪ್ರಾಣಿ ನುಂಗಿ ಚರಂಡಿಯಲ್ಲಿ ಮಲಗಿತ್ತು. ನಂತರ ಅದನ್ನು ಹಗ್ಗದಿಂದ ಕಟ್ಟಿ ಮೇಲಕ್ಕೆತ್ತಲಾಯಿತು. ಸ್ಥಳಕ್ಕಾಗಮಿಸಿದ ಶಾಂತಿ ಸಾಗರ ಅರಣ್ಯಾಧಿಕಾರಿಗಳಿಗೆ ಹೆಬ್ಬಾವನ್ನು ಒಪ್ಪಿಸಲಾಯಿತು. ನಂತರ ಅದನ್ನು ಕಾಡಿಗೆ ಬಿಡುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts