More

    ಪುನೀತ್​ ರಾಜ್​ಕುಮಾರ್​ ಆರೋಗ್ಯ ಸ್ಥಿತಿ ಗಂಭೀರ: ಕ್ಷಣಕ್ಷಣಕ್ಕೂ ಮನೆ ಮಾಡಿದ ಆತಂಕ

    ಬೆಂಗಳೂರು: ಸ್ಯಾಂಡಲ್​ವುಡ್​ನ ಪುನೀತ್​ ರಾಜ್​ಕುಮಾರ್​ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವಿಕ್ರಂ ಆಸ್ಪತ್ರೆ ಬಳಿ ಅಪ್ಪು ಕುಟುಂಬಸ್ಥರು, ಸಿನಿಮಾ ರಂಗದ ಗಣ್ಯರು, ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ.

    ಕ್ಷಣಕ್ಷಣಕ್ಕೂ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದ್ದು, ಪುನೀತ್​ ಅವರ ಮನೆ ಹಾಗೂ ವಿಕ್ರಂ ಆಸ್ಪತ್ರೆ ಬಳಿ ಪೊಲೀಸ್​​ ಬಂದೋಬಸ್ತ್​ ಏರ್ಪಡಿಸಲಾಗಿದೆ.

    ಪುನೀತ್​ ರಾಜ್​ಕುಮಾರ್​ ಆರೋಗ್ಯ ಸ್ಥಿತಿ ಗಂಭೀರ: ಕ್ಷಣಕ್ಷಣಕ್ಕೂ ಮನೆ ಮಾಡಿದ ಆತಂಕ

    ಶಿವರಾಜ್​ಕುಮಾರ್​ ಅವರ ‘ಭಜರಂಗಿ 2’ ಸಿನಿಮಾ ಇಂದು ತೆರೆಕಂಡಿದ್ದು, ಕುಟುಂಬಸ್ಥರು ಸಿನಿಮಾವನ್ನ ಥಿಯೇಟರ್​ ಸಿನಿಮಾ ನೋಡುತ್ತಿದ್ದರು. ಪುನೀತ್​ಗೆ ಹೃದಯಾಘಾತ ಆಗಿರುವ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರೂ ಆಸ್ಪತ್ರೆಗೆ ದೌಡಾಯಿಸಿದ್ದಾರೆ. ನಟ ಶಿವರಾಜ್​ಕುಮಾರ್​ ಅವರು ಕಣ್ಣೀರು ಹಾಕುತ್ತಲೇ ಆಸ್ಪತ್ರೆಗೆ ಬಂದರು. ರಾಘವೇಂದ್ರ ರಾಜ್​ಕುಮಾರ್​ ಕೂಡ ಆಸ್ಪತ್ರೆಯಲ್ಲೇ ಇದ್ದಾರೆ. ಶೃತಿ, ರವಿಚಂದ್ರನ್​, ಯಶ್​, ರಾಕ್​ಲೈನ್​ ವೆಂಕಟೇಶ್​ ಸೇರಿದಂತೆ ಕನ್ನಡ ಚಿತ್ರರಂಗದ ನಟ-ನಟಿಯರು ಕಣ್ಣೀರು ಹಾಕುತ್ತಲೇ ಆಗಮಿಸುತ್ತಿದ್ದ ದೃಶ್ಯ ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದೆ.ಪುನೀತ್​ ರಾಜ್​ಕುಮಾರ್​ ಆರೋಗ್ಯ ಸ್ಥಿತಿ ಗಂಭೀರ: ಕ್ಷಣಕ್ಷಣಕ್ಕೂ ಮನೆ ಮಾಡಿದ ಆತಂಕ

    ಅಪ್ಪು ಅವರ ಆರೋಗ್ಯ ಸ್ಥಿತಿ ಕುರಿತು ವಿಕ್ರಂ ಆಸ್ಪತ್ರೆ ವೈದ್ಯರು ಇಂದು ಮಧ್ಯಾಹ್ನ 3 ಗಂಟೆಗೆ ಹೆಲ್ತ್​ ಬುಲೆಟಿಬ್​ ಬಿಡುಗಡೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಪುನೀತ್​ ರಾಜ್​ಕುಮಾರ್​ ಆರೋಗ್ಯ ಸ್ಥಿತಿ ಗಂಭೀರ: ಕ್ಷಣಕ್ಷಣಕ್ಕೂ ಮನೆ ಮಾಡಿದ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts