ಕೊಪ್ಪಳ: ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ರೌಡಿ ಶೀಟರ್ ಮದುವೆಯಲ್ಲಿ ಮೂವರು ಪೊಲೀಸರು ಭಾಗಿಯಾಗಿದ್ದು, ಹಾರ ಹಾಕಿಸಿಕೊಂಡು ತೆಗೆಸಿಕೊಂಡ ಫೋಟೋಗಳು ಸಖತ್ ವೈರಲ್ ಆಗಿವೆ.
ಕೊಪ್ಪಳ ರೇಲ್ವೆ ನಿಲ್ದಾಣದ ಬಳಿ 2015ರ ಜನವರಿ 11ರಂದು ಯಲ್ಲಾಲಿಂಗನ ಹತ್ಯೆಯಾಗಿತ್ತು. ಕೊಲೆ ಪ್ರಕರಣದಲ್ಲಿ ಹನುಮೇಶ್ ನಾಯಕ್ ಮತ್ತು ಇವರ ಪುತ್ರ ಮಹಾಂತೇಶ ನಾಯಕ್ ಸೇರಿ 9 ಜನ ಜೈಲಿಗೆ ಹೋಗಿದ್ದರು. ಜಾಮೀನು ಮೇರೆಗೆ ಇತ್ತೀಚಿಗೆ ಹೊರ ಬಂದಿದ್ದರು. ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಜು.18ರಂದು ಮಹಾಂತೇಶನ ಮದುವೆ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜಿನಕೊಪ್ಪ, ಸಿಪಿಐ ಉದಯರವಿ, ಪಿಎಸ್ಐ ತಾರಾಬಾಯಿ ರಾಠೋಡ ಅವರು ಪಾಲ್ಗೊಂಡಿದ್ದರು.
ಈ ವೇಳೆ ತೆಗೆಸಿಕೊಂಡಿದ್ದ ಫೋಟೋಗಳು ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಮದುವೆಯಲ್ಲಿ ಪಾಲ್ಗೊಂಡ ಮೂವರು ಅಧಿಕಾರಿಗಳನ್ನು ದೀರ್ಘಕಾಲಿಕ ಕಡ್ಡಾಯ ರಜೆ ಮೇಲೆ ಎಸ್ಪಿ ಕಳುಹಿಸಿದ್ದಾರೆ.
ಭವಿಷ್ಯ ಕಟ್ಟಿಕೊಳ್ಳಲು ಹುಟ್ಟೂರು ಬಿಟ್ಟು ಬಂದಿದ್ದ ಅಣ್ಣ-ತಂಗಿ ನಿದ್ರೆಯಲ್ಲಿರುವಾಗಲೇ ಹೆಣವಾದರು!
ಅರುಣಾಕುಮಾರಿಯ ಪ್ರೇಮ್ಕಹಾನಿ ಬಿಚ್ಚಿಟ್ಟ ನಟ ದರ್ಶನ್! 9 ವರ್ಷ ಚಿಕ್ಕವನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳಂತೆ…
ಆ ಪ್ರಾಪರ್ಟಿ ದೊಡ್ಡಮನೆಯವರದ್ದು, ಹಾಗಾಗಿ ದರ್ಶನ್ಗೆ ಆಸ್ತಿ ಕೊಡಲ್ಲ ಅಂದೆ…
ಮಾತ್ರೆ ಕೊಟ್ಟು ಗಂಡನನ್ನು ಗಾಢ ನಿದ್ರೆಗೆ ತಳ್ಳಿದ ಪತ್ನಿ ನಂತರ ಎಸಗಿದ್ದು ಅಸಹ್ಯ ಕೃತ್ಯ!