More

    VIDEO: ಇವರೆಂಥಾ ತಲೆಕೆಟ್ಟ ಮಂದಿ…! ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯ ನೋಡಿದರೆ ಭಯವಾಗದೆ ಇರದು

    ಬೆಂಗಳೂರು: ಮನಸಲ್ಲಿ ಎಷ್ಟು ಕ್ರೌರ್ಯ ತುಂಬಿದ ಜನರು ಇರುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಬೆಂಗಳೂರಿನ ಶಂಕರನಗರದಲ್ಲಿ ನಡೆದ ಘಟನೆಯ ದೃಶ್ಯವನ್ನು ನೋಡಿದರೆ ಒಂದು ಕ್ಷಣ ನಡುಕ ಹುಟ್ಟದೆ ಇರದು.

    ಶಂಕರೇಗೌಡ ಎಂಬುವರು ಕಾರಿಗೆ ಡೀಸೆಲ್​ ಹಾಕಿಸುತ್ತ ನಿಂತಿದ್ದರು. ಇದೇ ವೇಳೆ ಹಿಂದಿನಿಂದ ಸ್ವಿಫ್ಟ್​ ಕಾರಿನಲ್ಲಿ ಬಂದವರು ಒಂದೇ ಸಮ ಹಾರ್ನ್​ ಹೊಡೆದಿದ್ದಾರೆ. ಆಗ ಶಂಕರೇ​ ಗೌಡ ಅವರು ಹಿಂದೆ ತಿರುಗಿ, ‘ಸರ್​..ಒಂದೇ ನಿಮಿಷ, ಕಾರು ತೆಗೆಯುತ್ತೇನೆ’ ಎಂದಿದ್ದಾರೆ. ಆದರೂ ಸ್ವಿಫ್ಟ್ ಕಾರಿನಲ್ಲಿದ್ದ ಮೂವರು ಶಂಕರೇಗೌಡರ ಜತೆಗೆ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಅವರ ಮೇಲೆ ಕಾರು ಹತ್ತಿಸಲೂ ಮುಂದಾಗಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಶಂಕರೇಗೌಡ ಕಾರಿನ ಬ್ಯಾನೆಟ್​ ಮೇಲೆ ಜಂಪ್​ ಮಾಡಿದ್ದಾರೆ.

    ಶಂಕರೇಗೌಡರು ಬ್ಯಾನೆಟ್ ಮೇಲೆ ಇದ್ದರೂ ಸಹ ಸ್ವಿಫ್ಟ್ ಕಾರಿನಲ್ಲಿದ್ದ ಪುಂಡರು ಅದೇ ಸ್ಥಿತಿಯಲ್ಲಿ ಕಾರನ್ನು ಚಲಾಯಿಸಿದ್ದಾರೆ. ಹಾಗೇ ಸ್ವಲ್ಪ ದೂರ ಕರೆದುಕೊಂಡು ಹೋಗಿ, ಅಲ್ಲೆಲ್ಲೋ ಮುಂದೆ ನಿಲ್ಲಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಂಕರೇಗೌಡರು ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

    ಇವರೆಂಥಾ ತಲೆಕೆಟ್ಟ ಮಂದಿ…!

    ಇವರೆಂಥಾ ತಲೆಕೆಟ್ಟ ಮಂದಿ…! ಬೆಂಗಳೂರಿನ ಶಂಕರನಗರದಲ್ಲಿ ನಡೆದ ಈ ಭಯಹುಟ್ಟಿಸುವ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ಯಾನೆಟ್​ ಮೇಲೆ ವ್ಯಕ್ತಿಯೋರ್ವರನ್ನು ಹೊತ್ತ ಕಾರೊಂದು ಶರವೇಗದಲ್ಲಿ ಹೋಗುತ್ತಿರುವುದನ್ನು ನೀವಿಲ್ಲಿ ನೋಡಬಹುದು. ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಕಾರು ಹತ್ತಿಸಲು ಮುಂದಾದ ಸ್ವಿಫ್ಟ್ ಕಾರಿನಲ್ಲಿದ್ದವರ ಕ್ರೌರ್ಯ ಇದು… ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ: https://bit.ly/2YK1eDQ

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜೂನ್ 16, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts