ಬೆಂಗಳೂರು: ಮನಸಲ್ಲಿ ಎಷ್ಟು ಕ್ರೌರ್ಯ ತುಂಬಿದ ಜನರು ಇರುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಬೆಂಗಳೂರಿನ ಶಂಕರನಗರದಲ್ಲಿ ನಡೆದ ಘಟನೆಯ ದೃಶ್ಯವನ್ನು ನೋಡಿದರೆ ಒಂದು ಕ್ಷಣ ನಡುಕ ಹುಟ್ಟದೆ ಇರದು.
ಶಂಕರೇಗೌಡ ಎಂಬುವರು ಕಾರಿಗೆ ಡೀಸೆಲ್ ಹಾಕಿಸುತ್ತ ನಿಂತಿದ್ದರು. ಇದೇ ವೇಳೆ ಹಿಂದಿನಿಂದ ಸ್ವಿಫ್ಟ್ ಕಾರಿನಲ್ಲಿ ಬಂದವರು ಒಂದೇ ಸಮ ಹಾರ್ನ್ ಹೊಡೆದಿದ್ದಾರೆ. ಆಗ ಶಂಕರೇ ಗೌಡ ಅವರು ಹಿಂದೆ ತಿರುಗಿ, ‘ಸರ್..ಒಂದೇ ನಿಮಿಷ, ಕಾರು ತೆಗೆಯುತ್ತೇನೆ’ ಎಂದಿದ್ದಾರೆ. ಆದರೂ ಸ್ವಿಫ್ಟ್ ಕಾರಿನಲ್ಲಿದ್ದ ಮೂವರು ಶಂಕರೇಗೌಡರ ಜತೆಗೆ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಅವರ ಮೇಲೆ ಕಾರು ಹತ್ತಿಸಲೂ ಮುಂದಾಗಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಶಂಕರೇಗೌಡ ಕಾರಿನ ಬ್ಯಾನೆಟ್ ಮೇಲೆ ಜಂಪ್ ಮಾಡಿದ್ದಾರೆ.
ಶಂಕರೇಗೌಡರು ಬ್ಯಾನೆಟ್ ಮೇಲೆ ಇದ್ದರೂ ಸಹ ಸ್ವಿಫ್ಟ್ ಕಾರಿನಲ್ಲಿದ್ದ ಪುಂಡರು ಅದೇ ಸ್ಥಿತಿಯಲ್ಲಿ ಕಾರನ್ನು ಚಲಾಯಿಸಿದ್ದಾರೆ. ಹಾಗೇ ಸ್ವಲ್ಪ ದೂರ ಕರೆದುಕೊಂಡು ಹೋಗಿ, ಅಲ್ಲೆಲ್ಲೋ ಮುಂದೆ ನಿಲ್ಲಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಂಕರೇಗೌಡರು ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇವರೆಂಥಾ ತಲೆಕೆಟ್ಟ ಮಂದಿ…!ಇವರೆಂಥಾ ತಲೆಕೆಟ್ಟ ಮಂದಿ…! ಬೆಂಗಳೂರಿನ ಶಂಕರನಗರದಲ್ಲಿ ನಡೆದ ಈ ಭಯಹುಟ್ಟಿಸುವ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ಯಾನೆಟ್ ಮೇಲೆ ವ್ಯಕ್ತಿಯೋರ್ವರನ್ನು ಹೊತ್ತ ಕಾರೊಂದು ಶರವೇಗದಲ್ಲಿ ಹೋಗುತ್ತಿರುವುದನ್ನು ನೀವಿಲ್ಲಿ ನೋಡಬಹುದು. ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಕಾರು ಹತ್ತಿಸಲು ಮುಂದಾದ ಸ್ವಿಫ್ಟ್ ಕಾರಿನಲ್ಲಿದ್ದವರ ಕ್ರೌರ್ಯ ಇದು… ಸಂಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ: https://bit.ly/2YK1eDQ
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜೂನ್ 16, 2020