ಬೆಳಗಾವಿ: ಆಸ್ತಿ ವಿವಾದವೆಂಬುದು ಹತ್ಯೆಯೊಂದಕ್ಕೆ ಕಾರಣವಾಗಿದೆ. ಈ ಜಗಳದಲ್ಲಿ ಜೀವ ಕಳೆದುಕೊಂಡಿದ್ದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ.
ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ರಾಜಾಪುರ ಗ್ರಾಮದಲ್ಲಿ. ಇಲ್ಲಿನ ತಾಪಂ ಮಾಜಿ ಸದಸ್ಯ ಚಿಂತಾಮಣಿ ಮೇಟಿ (60) ಮತ್ತು ಅವರ ಸಹೋದರನ ನಡುವೆ ಆಸ್ತಿ ವಿಚಾರಕ್ಕೆ ಜಗಳ ಶುರುವಾಗಿತ್ತು. ಈ ಜಗಳ ಮಿತಿಮೀರಿ, ಚಿಂತಾಮಣಿ ಮೇಟಿ ಅವರನ್ನು ಅವರ ಸಹೋದರ ಗೋಪಾಲ್ ಹತ್ಯೆ ಮಾಡಿದ್ದಾನೆ.
ಚಿಂತಾಮಣಿ ಅವರ ಮನೆಗೇ ಹೋದ ಗೋಪಾಲ್ ಗುಂಡು ಹಾರಿಸಿ ಕೊಂದಿದ್ದಾನೆ. ಅದಾದ ಬಳಿಕ ಸೀದಾ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
VIDEO| ಲೇಡಿ ಸಿಂಗಂ ಹವಾ: ಲಾಕ್ಡೌನ್ ಉಲ್ಲಂಘಿಸಿ ಮಸೀದಿಯೊಳಗೆ ನಮಾಜ್ ಮಾಡುತ್ತಿದ್ದವರಿಗೆ ಖಡಕ್ ಎಚ್ಚರಿಕೆ