More

    ಹತ್ಯೆಗೆ ಕಾರಣವಾಯ್ತು ಆಸ್ತಿ ವಿವಾದ; ಸೀದಾ ಮನೆಗೆ ಬಂದು ಸಹೋದರನನ್ನು ಕೊಂದ ಹಂತಕ ಹೋಗಿದ್ದೆಲ್ಲಿಗೆ?

    ಬೆಳಗಾವಿ: ಆಸ್ತಿ ವಿವಾದವೆಂಬುದು ಹತ್ಯೆಯೊಂದಕ್ಕೆ ಕಾರಣವಾಗಿದೆ. ಈ ಜಗಳದಲ್ಲಿ ಜೀವ ಕಳೆದುಕೊಂಡಿದ್ದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ.

    ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ್​ ತಾಲೂಕಿನ ರಾಜಾಪುರ ಗ್ರಾಮದಲ್ಲಿ. ಇಲ್ಲಿನ ತಾಪಂ ಮಾಜಿ ಸದಸ್ಯ ಚಿಂತಾಮಣಿ ಮೇಟಿ (60) ಮತ್ತು ಅವರ ಸಹೋದರನ ನಡುವೆ ಆಸ್ತಿ ವಿಚಾರಕ್ಕೆ ಜಗಳ ಶುರುವಾಗಿತ್ತು. ಈ ಜಗಳ ಮಿತಿಮೀರಿ, ಚಿಂತಾಮಣಿ ಮೇಟಿ ಅವರನ್ನು ಅವರ ಸಹೋದರ ಗೋಪಾಲ್​ ಹತ್ಯೆ ಮಾಡಿದ್ದಾನೆ.

    ಚಿಂತಾಮಣಿ ಅವರ ಮನೆಗೇ ಹೋದ ಗೋಪಾಲ್​ ಗುಂಡು ಹಾರಿಸಿ ಕೊಂದಿದ್ದಾನೆ. ಅದಾದ ಬಳಿಕ ಸೀದಾ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿದ್ದಾನೆ.

    ಘಟಪ್ರಭಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    VIDEO| ಲೇಡಿ ಸಿಂಗಂ ಹವಾ: ಲಾಕ್​ಡೌನ್ ಉಲ್ಲಂಘಿಸಿ ಮಸೀದಿಯೊಳಗೆ ನಮಾಜ್ ಮಾಡುತ್ತಿದ್ದವರಿಗೆ ಖಡಕ್​ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts