More

    ಪದ್ಮಾವತಿ ಕೊಲೆ ಕೇಸ್​: ಶಾಸಕ ಸೋಮಶೇಖರ್​ ರೆಡ್ಡಿಗೂ ಸಿಬಿಐ ಉರುಳು?

    ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಬಳಿಕ ಅವರ ಸಹೋದರ ಹಾಗೂ ಶಾಸಕ ಸೋಮಶೇಖರ್ ರೆಡ್ಡಿಗೂ ಸಿಬಿಐ ಉರುಳು ತಗುಲುವ ಸಾಧ್ಯತೆ ದಟ್ಟವಾಗಿದೆ.

    2010ರಲ್ಲಿ ನಗರಸಭೆ ಸದಸ್ಯೆ ಪದ್ಮಾವತಿ ಯಾದವ್ ಅವರನ್ನು ನಾಲ್ವರು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು. ಈ ಕೊಲೆ ಹಿಂದೆ ರೆಡ್ಡಿ ಸಹೋದರರ ಕೈವಾಡ ಇದೆಯೆಂದು ಪದ್ಮಾವತಿ ಸಹೋದರ ಸುಬ್ಬಾರಾವ್ ಪ್ರಕರಣ ದಾಖಲಿಸಿದ್ದರು. ಇದೀಗ ಈ ಪ್ರಕರಣ ಮುನ್ನೆಲೆಗೆ ಬಂದಿದೆ.

    ಒಳಾಡಳಿತ ಇಲಾಖೆ ಪ್ರಧಾನ ಕಾರ್ಯದರ್ಶಿಯಿಂದ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ಬಂದಿದ್ದು, ಪದ್ಮಾವತಿ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವ ಕುರಿತು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ನೀಡುವಂತೆ ಪತ್ರ ಬರೆಯಲಾಗಿದೆ.

    ಪದ್ಮಾವತಿ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಮೃತಳ ಸಹೋದರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ, ಪದ್ಮಾವತಿ ಸಹೋದರ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ ಮನವಿ ಪತ್ರ, ನ್ಯಾಯಾಲಯದ ಆದೇಶ ಪ್ರತಿ, ನ್ಯಾಯಾಲಯದ ಆದೇಶದ ವಿರುದ್ಧ ರಿಟ್ ಅರ್ಜಿ ಸಲ್ಲಿದ್ದಾರೆಯೇ ಅಥವಾ ಇಲ್ಲವೇ ಎನ್ನುವ ಪೂರ್ಣ ವರದಿ ಸಲ್ಲಿಸಲು ನಿರ್ದೇಶನ ಪತ್ರದಲ್ಲಿ ಸೂಚಿಸಲಾಗಿದೆ.

    ತುಮಕೂರಲ್ಲಿ ಬುದ್ಧಿಮಾಂದ್ಯೆ ಮೇಲೆ ಪೊಲೀಸ್​ ಅಧಿಕಾರಿಯಿಂದಲೇ ಅತ್ಯಾಚಾರ! ಅಪರಾಧ ಸಾಬೀತು, ಇನ್ನು 3 ದಿನದಲ್ಲಿ ಶಿಕ್ಷೆ ಪ್ರಕಟ

    ಮದ್ವೆ ಆಗ್ತೀನಂತ 2 ವರ್ಷದಿಂದ ಸಹ ನಟಿಯನ್ನ ದೈಹಿಕವಾಗಿ ಬಳಸಿಕೊಂಡ ಕೇಸ್​: ಸ್ಯಾಂಡಲ್​​​​​​​​ವುಡ್​ ನಟ-ನಿರ್ಮಾಪಕ ಜೈಲು ಪಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts