More

    ಬರ್ತಡೇ ದಿನವೇ ಪತಿ ಕೊಂದಳು!; ದೊಡ್ಡಮ್ಮನ ಮಗನ ಜತೆ ಅಕ್ರಮ ಸಂಬಂಧ ನವವಿವಾಹಿತ ಸಾವಿನ ಪ್ರಕರಣಕ್ಕೆ ಟ್ವಿಸ್ಟ್

    ಕುಣಿಗಲ್: ಕಳೆದ ಫೆ.3ರಂದು ರಾತ್ರಿ ಬರ್ತಡೇ ಆಚರಿಸಿಕೊಂಡ ನವವಿವಾಹಿತ ಬೆಳಗ್ಗೆ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾದ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೀಡಾದವನ ಪತ್ನಿ ಸೇರಿ 8 ಮಂದಿಯನ್ನು ಕುಣಿಗಲ್ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

    ಕುಣಿಗಲ್ ತಾಲೂಕು ಸೀನಪ್ಪನಹಳ್ಳಿ ಮಂಜುನಾಥ್(31), ಪತ್ನಿ ಹರ್ಷಿತಾಳ (20) ಮಾಸ್ಟರ್ ಪ್ಲಾನ್‌ಗೆ ಬಲಿಯಾಗಿದ್ದ. ಪ್ರಿಯಕರ, ಸಂಬಂಧದಲ್ಲಿ ದೊಡ್ಡಮ್ಮನ ಮಗನೇ ಆಗಿರುವ ರಘು ಜತೆ ಸೇರಿ ಕೊಲೆ ಮಾಡಿದ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾಳೆ.

    ಕೊಲೆಗೆ ಸುಪಾರಿ ಪಡೆದಿದ್ದ ರವಿಕಿರಣ್, ಕೇಶವ್ ಸೇರಿ ಕೊಲೆಗೆ ಸಹಕರಿಸಿದ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬರ್ತಡೇ ದಿನವೇ ಪತಿ ಕೊಂದಳು!; ದೊಡ್ಡಮ್ಮನ ಮಗನ ಜತೆ ಅಕ್ರಮ ಸಂಬಂಧ ನವವಿವಾಹಿತ ಸಾವಿನ ಪ್ರಕರಣಕ್ಕೆ ಟ್ವಿಸ್ಟ್

    ಅನೈತಿಕ ಸಂಬಂಧ ಕೊಲೆಗೆ ಕಾರಣ: ಹರ್ಷಿತಾ ಮದುವೆಯಾಗಿ 11 ತಿಂಗಳ ಬಳಿಕವೂ ಗಂಡನೊಂದಿಗೆ ಸೇರದ ಹರ್ಷಿತಾ ರಘು ಜತೆ ಸಂಬಂಧ ಮುಂದುವರಿಸಿದ್ದಳು ಎನ್ನಲಾಗಿದೆ. ಮದುವೆಯಾದ ನಂತರ 5ಕ್ಕೂ ಹೆಚ್ಚು ಬಾರಿ ಕೊಲೆಗೆ ಸ್ಕೇಚ್ ಹಾಕಿದ್ದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾಳೆ.

    ಸ್ನ್ಯಾಪ್ ಚಾಟ್ ಆ್ಯಪ್ ಬಳಸಿ ಕೊಲೆ: ಪತಿ ಕೊಲೆಗಾಗಿ ಸ್ಕೆಚ್ ಹಾಕಿದ್ದ ಹರ್ಷಿತಾ ಫೋನ್ ಮೂಲಕ ಮಾತನಾಡುವುದು ಹಾಗೂ ವ್ಯಾಟ್ಸ್ ಆ್ಯಪ್ ಮಾಡದೇ ಸ್ನ್ಯಾಪ್ ಚಾಟ್ ಆ್ಯಪ್ ಬಳಸಿ ಕ್ರಿಮಿನಲ್ ಐಡಿಯಾ ಬಳಸಿದ್ದಾಳೆ. ಹಾಗಾಗಿ, ಕೊಲೆಯಲ್ಲಿ ಭಾಗಿಯಾಗಿರುವ 6+1 ಗ್ರೂಪ್ ಮಾಡಿ ಕೊಲೆಗೆ ಸಂಚು ರೂಪಿಸಿದ್ದಾಳೆ. ಈ ಹಿಂದೆಯೇ 5ಕ್ಕೂ ಹೆಚ್ಚು ಬಾರಿ ಕೊಲೆಗೆ ಸ್ಕೇಚ್ ರೂಪಿಸಿದ್ದು ಪ್ಲಾನ್ ಕೈಗೂಡಿರಲಿಲ್ಲ ಎಂಬ ಮಾಹಿತಿ ಬಯಲಾಗಿದೆ.

    ಸುಳಿವು ಕೊಟ್ಟ ಫೋಟೋ: ಹರ್ಷಿತಾ ತನ್ನ ಕೈ ಮೇಲೆ ರಘು ಹೆಸರನ್ನು ಎಚ್‌ಆರ್ ಎಂದು ಬರೆದು ಆತನಿಗೆ ಕಳುಹಿಸಿರುವ ಫೋಟೋ ಕೊಲೆಯ ಸುಳಿವು ಕೊಟ್ಟಿದೆ. ಈ ಫೋಟೋವನ್ನು ಮಂಜುನಾಥ್ ಪತ್ನಿಗೆ ಗೊತ್ತಾಗದಂತೆ ಆಕೆಯ ಮೊಬೈಲ್‌ನಿಂದ ತನ್ನ ಮೊಬೈಲ್‌ಗೆ ಕಳಿಸಿಕೊಂಡಿದ್ದ. ಪೊಲೀಸರು ಮಂಜುನಾಥನ ಮೊಬೈಲ್ ಪರಿಶೀಲಿಸಿದಾಗ ಸಿಕ್ಕ ಈ ಫೋಟೋ ನಿಗೂಢ ಪ್ರಕರಣ ಪತ್ತೆ ಹಚ್ಚಲು ಸುಳಿವು ಕೊಟ್ಟಿದೆ. ಇದರ ಜಾಡು ಹಿಡಿದ ಪೊಲೀಸರು ಪತ್ನಿ ಹರ್ಷಿತಾ ಹಾಗೂ ಕೊಲೆ ಅರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ ಎಂದು ತಿಳಿದು ಬಂದಿದೆ.

    ಹುಟ್ಟುಹಬ್ಬದ ದಿನವೇ ಮುಹೂರ್ತ! ಮಂಜುನಾಥ್‌ಗೆ ಮದ್ಯ ಸೇವಿಸುವ, ಸಿಗರೇಟ್ ಸೇದುವ ಚಟ ಇರಲಿಲ್ಲ. ಬರ್ತಡೇ ದಿನ ಸ್ನೇಹಿತರ ಜತೆ ಹುಟ್ಟುಹಬ್ಬ ಅಚರಿಸಿಕೊಂಡು ಬರುವುದರಿಂದ ಅಂದೇ ಕೊಲೆಗೆ ಮಹೂರ್ತ ಫಿಕ್ಸ್ ಮಾಡಿ ಆತನ ಸ್ನೇಹಿತರ ಮೇಲೆ ಕೊಲೆ ಆರೋಪ ಬರುವಂತೆ ಸಂಚು ರೂಪಿಸಿದ್ದರು. ಫೆ.3ರಂದು ರಾತ್ರಿ ಕುಣಿಗಲ್ ಪಟ್ಟಣದಲ್ಲಿ ಸ್ನೇಹಿತರೊಂದಿಗೆ ಬರ್ತಡೇ ಅಚರಿಸಿಕೊಂಡು ಮನೆಗೆ ಬಂದ ಮಂಜುನಾಥ್ ಕೋಣೆಯಲ್ಲಿ ಮಲಗಿದ್ದ. ರಾತ್ರಿ ಮನೆಯ ಮುಂದಿನ ಬಾಗಿಲು ತೆರೆದಿಟ್ಟ ಹರ್ಷಿತಾ ಅಜ್ಜಿಯ ಕೋಣೆಯಲ್ಲಿ ಮಲಗಿದ್ದಾಳೆ. ಮೊದಲೇ ಹಾಕಿದ ಸ್ಕೆಚ್‌ನಂತೆ ಪ್ರಿಯಕರ ರಘು ಆತನ ಜತೆ ನಾಲ್ವರು ಮನೆಯೊಳಗೆ ಸದ್ದಿಲ್ಲದೆ ಬಂದು ಕೋಣೆಯಲ್ಲಿ ಮಲಗಿದ್ದ ಮಂಜುನಾಥ್ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದಿದ್ದಾರೆ.

    ಯಾವುದೇ ಅನುಮಾನ ಬಾರದಂತೆ ಗಾಂಜಾ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರ ದಿಕ್ಕು ತಪ್ಪಿಸಲು ಆತನ ಜೇಬಿನಲ್ಲಿ ಗಾಂಜಾ ತುಂಬಿ ಪಕ್ಕದ ಕಿನ್ನಾಮಂಗಲದ ಕೆರೆಗೆ ಎಸೆದು ಎಸ್ಕೇಪ್ ಆಗಿದ್ದರು. ಹರ್ಷಿತಾ ಕೂಡ ಸಂಬಂಧಿಕರಿಗೆ ಹಾಗೂ ಅಕ್ಕಪಕ್ಕದವರಿಗೆ ನನ್ನ ಗಂಡ ಕಾಣಿಸುತ್ತಿಲ್ಲ ಎಂದು ಫೋನ್ ಮಾಡಿ ನಾಟಕವಾಡಿದ್ದಳು. ಗಂಡನ ಶವ ಕೆರೆಯಲ್ಲಿ ಪತ್ತೆಯಾದ ನಂತರ ಸ್ವತಃ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಳು.
    ಸಂಬಂಧಿಕರ ಆಕ್ರೋಶ: ಹರ್ಷಿತಾ ಹಾಗೂ ಕೊಲೆ ಆರೋಪಿಗಳನ್ನು ಮಹಜರು ಮಾಡಲು ಸೀನಪ್ಪನಹಳ್ಳಿಗೆ ಪೊಲೀಸರು ಕರೆತಂದಾಗ ಗ್ರಾಮಸ್ಥರು ಗಂಡನನ್ನೇ ಕೊಲೆ ಮಾಡಿಸಿದ ಹರ್ಷಿತಾಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಲ್ಲೆ ಮಾಡಲು ಮುಂದಾದರು. ಗಲಾಟೆ ಹೆಚ್ಚಾದ್ದರಿಂದ ಪೊಲೀಸರು ಮಹಜರ್ ಮಾಡದೆ ವಾಪಸ್ ಬಂದಿದ್ದಾರೆ.

    ಗಂಡನೊಂದಿಗೆ ತೆಗೆದುಕೊಂಡಿರುವ ಸೆಲ್ಫಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts